ತೃಪ್ತಿ

ನಾನು ಕನಸುಗಳ ಕಾಣುವುದು ಬಿಟ್ಟಿದ್ದೇನೆ
ಯಾಕೆಂದರೆ ಕನಸಿನ ಲೋಕವೇ ನನ್ನದಾಗಿದೆ.

ಎಳೆ ಬಿಸಿಲು ಬಿಂಬಿಸುವ ಸೂರ್ಯನ ಕೆಂಪಡರಿದ
ನೀಲ ಬಾನತುಂಬ ದಿನಾಲು ಬೆಳ್ಳಕ್ಕಿಗಳು ಹಾರುತ್ತಿವೆ.

ಮನೆಯ ಮುಂದಿನ ಪುಟ್ಟ ಗಿಡಗಳಲಿ ಹೂವರಳಿ
ದಿವ್ಯ ಮೌನದಲಿ ದಿನಾಲೂ ಪ್ರಾರ್ಥನೆ ಮಾಡುತ್ತವೆ.

ಮನೆಯ ಒಳಗಿನ ಒಲೆಯಲ್ಲಿ ಬಿಸಿ ಬಿಸಿ
ರೊಟ್ಟಿಗಳು ಭೂಮಿ ಆಕಾರದಲಿ ತಿರುಗುತ್ತವೆ.

ಒಂದು ಪರಿಪೂರ್ಣತೆಯ ಗುಡಿಯ ಗಂಟೆ
ಮತ್ತು ಮಹಾ ಬೆಳಗಿನ ನೀಲಾಂಜನ ಬೆಳಗುತ್ತದೆ.

ಮನೆಯ ಗೋಡೆಗಳ ತುಂಬೆಲ್ಲಾ ಅವನ
ಭರವಸೆಯ ಬರಹಗಳು ಗೋಚರಿಸುತ್ತವೆ.

ತಿಳಿ ಬೆಳದಿಂಗಳು ಮತ್ತು ಚಿಕ್ಕಿಗಳ ಕಾಂತಿ
ಕಿಟಕಿಗಳ ಸರಳುಗಳ ದಾಟಿ ಪ್ರತಿ ಫಲಿಸುತ್ತದೆ.

ಮತ್ತು ಮನೆಯ ಬಾಗಿಲಿಗೆ ಬಂದು ನಿಂತ
ಅವನ ಮೋಹದ ಸ್ಪರ್ಶ ತಂಗಾಳಿ ಹರಡುತ್ತದೆ.

ಮತ್ತೆ ಕೈಯಲ್ಲಿರುವ ಹಸಿರು ಬಳೆಗಳು
ರಿಂಗಣಿಸುತ್ತವೆ ಕನಸಿನ ಲೋಕದ ರಮ್ಯ ಕ್ಷಣಗಳ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿರ ಬಾಂದಳದ ನಡುವೆ
Next post ದ್ರುಪದನ ಗರ್ವಭಂಗ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys