ಸ್ಪರ್ಶ

ನೀನು ಈ ಸರಳ ಜೀವನ ದಾರಿಯ
ಎಲ್ಲಾ ಸತ್ಯಗಳನ್ನು ನನಗೆ ತಿಳಿಸಿ ಹೇಳಬೇಕಾಗಿದೆ.

ಯಾವ ಅಹಂಕಾರವಿಲ್ಲದ ಒಂದು ಪ್ರೀತಿ
ನನ್ನ ಮನೆಯೊಳಗೆ ಅರಳಿ ಕಂಪು ಸೂಸಬೇಕಾಗಿದೆ.

ಈ ಜೀವನದಲಿ ಹೊಟ್ಟೆ ತುಂಬಿಸಿಕೊಳ್ಳುವ
ಮಾರ್ಗ ನೇರ ಮತ್ತು ಸಿಹಿ ನಿನ್ನಿಂದ ಆಗಬೇಕಾಗಿದೆ.

ಮಾತಿನಲಿ ಮೃದುತ್ವ ನಕ್ಷತ್ರಗಳ ಹೊಳಪು
ಮತ್ತು ನದಿಯ ಹರಿವಿಕೆ ನೀನು ತುಂಬಬೇಕಾಗಿದೆ.

ನನ್ನ ಬಳಗದ ಜನರೊಂದಿಗೆ ನೀಲಿ ಆಕಾಶದಲಿ
ರೆಕ್ಕೆ ಬಿಚ್ಚಿ ಹಾರಾಡುವದನ್ನು ನೀನು ಕಲಿಸಬೇಕಾಗಿದೆ.

ಅರಳುವ ಹೂವಿನ ಕಂಪಿನ ಬೆಳಕಿನ ಪ್ರಾರ್ಥನೆ
ನೀನು ನನ್ನ ಎದೆಯೊಳಕೆ ಇಳಿಸಬೇಕಾಗಿದೆ.

ನಾ ಯಾವ ಉದ್ದೇಶಗಳಿಲ್ಲದೇ ಬರೀ ಪ್ರೀತಿಯಿಂದ
ಅವರ ಕೈಗಳನ್ನು ಹಿಡಿದು ನಡೆಸಬೇಕಾಗಿದೆ.

ನೀ ಎಲ್ಲಾ ಒಲುಮೆಯ ಹಾಡುಗಳು ಇಂಪಾಗಿ
ಸೊಂಪಾಗಿ ಬದುಕಿನ ಆಳಕ್ಕೆ ಇಳಿಯುವಂತೆ ಮಾಡಬೇಕಾಗಿದೆ.

ಅದಕ್ಕಾಗಿ ದಯವಿಟ್ಟು ನೀ ಪ್ರೀತಿಯಿಂದ
ಚಿಟ್ಟೆಯಂತೆ ನನ್ನ ಒಮ್ಮೆ ಸ್ಪರ್ಶಿಸಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜನ್ಮಭೂಮಿ
Next post ಸಗ್ಗದೊಡೆಯನ ಬಿಂಕ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys