ದೃಷ್ಟಿ

ಸೀತೆಯ ವೈಭವೀಕರಿಸಿದರು
ಅವಳ ಪತಿಭಕ್ತಿಗಾಗಿ
ಎಲ್ಲೂ ವೈಭವೀಕರಿಸಲಿಲ್ಲ
ಅವಳ ಧೀಃಶಕ್ತಿಗಾಗಿ
ಪರಿತ್ಯಕ್ತ ಹೆಣ್ಣೊಬ್ಬಳು
ಒಬ್ಬಂಟಿಗಳಾಗಿ ಮಕ್ಕಳ ಬೆಳೆಸಿದ
ಅವಳ ಆತ್ಮಶಕ್ತಿಗಾಗಿ!

ತರಲಿಲ್ಲವೇ ಗಾಂಧಾರಿ
ಕುರುರಾಜನಲಿ ಮಾನಸಿಕ ಸಮಸ್ಥಿತಿ?
ಉಕ್ಕಿಸಲಿಲ್ಲವೇ ದ್ರೌಪದಿ
ಪಾಂಡುಪುತ್ರರಲ್ಲಿ ಶಕ್ತಿಯ ವಾರಿಧಿ?
ತೋರಿಸಿಕೊಡಲಿಲ್ಲವೇ ಅವಳು
ಪಂಚಪತಿಯರಿಗೂ ನಿಷ್ಠಳಾಗಿರಬಹುದೆಂದು?
ಮರೆಯಲಿಲ್ಲವೇ ಊರ್ಮಿಳೆ
ವಿರಹದಲ್ಲೂ ತ್ಯಾಗದ ಮೇಲ್ಮೆಯನ್ನು?

ಅಂದಿಗೂ ಇಂದಿಗೂ ಒಂದೇ ದೃಷ್ಟಿ
ಯಾರೂ ಗುರುತಿಸಬಯಸುವುದಿಲ್ಲ
ಸ್ತ್ರೀಯರ ಅಂತಃಶಕ್ತಿಯನ್ನು-
ಪತ್ನಿಯಾಗಿ, ತಾಯಿಯಾಗಿ, ಉದ್ಯೋಗಸ್ಥೆಯಾಗಿ
ಆಕೆ ಮಾಡುವ ತ್ಯಾಗವನ್ನು.

ಎಷ್ಟು ಸ್ತ್ರೀಯರಿಲ್ಲ ನಮ್ಮ ನಿಮ್ಮ ನಡುವೆ
ಎಲ್ಲ ಕಡೆ ಸಮತೋಲನ ಕಾಯ್ದುಕೊಂಡು
ಗಂಧದಂತೆ ತೇಯುವ,
ಚಿನ್ನದಂತೆ ಕಾಯುವ ಸ್ತ್ರೀಶಕ್ತಿಗಳು
ಯಾರು ಗುರುತಿಸಬಯಸುತ್ತಾರೆ
ಅವರ ಶಕ್ತಿ ಸ್ವರೂಪವನ್ನು ?

ಕಾಲ ಬದಲಾದರೂ
ದೃಷ್ಟಿ ಬದಲಾಗಿಲ್ಲ!?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ
Next post ಕಡಲೇಗುಗ್ಗುರಿ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys