ದೃಷ್ಟಿ

ಸೀತೆಯ ವೈಭವೀಕರಿಸಿದರು
ಅವಳ ಪತಿಭಕ್ತಿಗಾಗಿ
ಎಲ್ಲೂ ವೈಭವೀಕರಿಸಲಿಲ್ಲ
ಅವಳ ಧೀಃಶಕ್ತಿಗಾಗಿ
ಪರಿತ್ಯಕ್ತ ಹೆಣ್ಣೊಬ್ಬಳು
ಒಬ್ಬಂಟಿಗಳಾಗಿ ಮಕ್ಕಳ ಬೆಳೆಸಿದ
ಅವಳ ಆತ್ಮಶಕ್ತಿಗಾಗಿ!

ತರಲಿಲ್ಲವೇ ಗಾಂಧಾರಿ
ಕುರುರಾಜನಲಿ ಮಾನಸಿಕ ಸಮಸ್ಥಿತಿ?
ಉಕ್ಕಿಸಲಿಲ್ಲವೇ ದ್ರೌಪದಿ
ಪಾಂಡುಪುತ್ರರಲ್ಲಿ ಶಕ್ತಿಯ ವಾರಿಧಿ?
ತೋರಿಸಿಕೊಡಲಿಲ್ಲವೇ ಅವಳು
ಪಂಚಪತಿಯರಿಗೂ ನಿಷ್ಠಳಾಗಿರಬಹುದೆಂದು?
ಮರೆಯಲಿಲ್ಲವೇ ಊರ್ಮಿಳೆ
ವಿರಹದಲ್ಲೂ ತ್ಯಾಗದ ಮೇಲ್ಮೆಯನ್ನು?

ಅಂದಿಗೂ ಇಂದಿಗೂ ಒಂದೇ ದೃಷ್ಟಿ
ಯಾರೂ ಗುರುತಿಸಬಯಸುವುದಿಲ್ಲ
ಸ್ತ್ರೀಯರ ಅಂತಃಶಕ್ತಿಯನ್ನು-
ಪತ್ನಿಯಾಗಿ, ತಾಯಿಯಾಗಿ, ಉದ್ಯೋಗಸ್ಥೆಯಾಗಿ
ಆಕೆ ಮಾಡುವ ತ್ಯಾಗವನ್ನು.

ಎಷ್ಟು ಸ್ತ್ರೀಯರಿಲ್ಲ ನಮ್ಮ ನಿಮ್ಮ ನಡುವೆ
ಎಲ್ಲ ಕಡೆ ಸಮತೋಲನ ಕಾಯ್ದುಕೊಂಡು
ಗಂಧದಂತೆ ತೇಯುವ,
ಚಿನ್ನದಂತೆ ಕಾಯುವ ಸ್ತ್ರೀಶಕ್ತಿಗಳು
ಯಾರು ಗುರುತಿಸಬಯಸುತ್ತಾರೆ
ಅವರ ಶಕ್ತಿ ಸ್ವರೂಪವನ್ನು ?

ಕಾಲ ಬದಲಾದರೂ
ದೃಷ್ಟಿ ಬದಲಾಗಿಲ್ಲ!?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ
Next post ಕಡಲೇಗುಗ್ಗುರಿ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…