ಬಾಗಿಲು ಬೀದಿಗಳ ನಡುವೆ

ಮುಚ್ಚಿದ ಗೂಡಿನ ಬಾಗಿಲು,
ಬಾಗಿಲಿಲ್ಲದ ಬೀದಿ ನಡುವೆ
ಲೋಕವ್ಯಾಪಾರಕ್ಕೆ ಸಾಕ್ಷಿ
ಒಂದು ಅಬ್ಬೇಪಾರಿ ಹೊಸಿಲು.
*

ಅತ್ತ ಬಾಯ್ದೆರೆದು
ಬಿದ್ದುಕೊಂಡಿರುವ
ಬಿನ್ನಾಣಗಿತ್ತಿ ಬೀದಿ ಆಹ್ವಾನಕ್ಕೆ
ಕ್ಷಣ ಕ್ಷಣವೂ
ಮರುಳಾಗಿ ಬೀಳುವ
ಅಸಂಖ್ಯ ಬಡಪಾಯಿ ಜೀವಗಳು

ಚೀತ್ಕಾರಗಳ ನುಂಗಿಯೇ
ಬಸಿರಾದ ಸಪಾಟು ಬೀದಿಯ
ಮೇಲೆ ಬಿಕ್ಕುಗಳೂ ಉಸಿರೆತ್ತದಂತೆ
ಹಗಲಿಡೀ ನಿಲ್ಲದ ಚಲನೆ

ನಿಶಿತ ಕತ್ತಲಿನಲಿ
ರಾತ್ರಿಗಳು ಗಾಢಮೌನ.
ಕ್ರಿಮಿಕೀಟ ಹುಳುಹುಪ್ಪಟೆ
ತೆವಳಿ ಆಕಳಿಸಿ
ಮೈಮುರಿಯುವ
ನಿಗೂಢ ಸದ್ದು.

ವೈಯ್ಯಾರದ ಬೀದಿ ಸೆಳೆತಕ್ಕೆ ಹೇವರಿಸಿ
ಮತ್ತಷ್ಟು ಮುದುರುವ ಹೊಸಿಲು.
*

ಇತ್ತಲಿನ ಬೆಚ್ಚನೆ ಗೂಡಿನ
ಬಾಗಿಲ ಮೇಲೆ
“ನಾಳೆ ಬಾ” ಮುದ್ರೆ

ಬಾಗಿಲು ತೆರೆಯುವುದು
ತೆರೆಯದಿರುವುದು ಒಳಗಿನವರಿಷ್ಟ

ತನ್ನ ಮುಟ್ಟಿದ ಮೆಟ್ಟಿದ
ಯಾವ ಹೆಜ್ಜೆಗಳನೂ
ತಟ್ಟಲಾರದ ಹೊಸಿಲ ಸಂಕಟ
ಮುಚ್ಚಿದ ಬಾಗಿಲಿಗೂ
ತೆರೆದು ಬಿದ್ದ ಬೀದಿಗೂ ನಡುವೆ
ಒಳಗಿಗೆ ಸಲ್ಲದೇ
ಹೊರಗಿಗೆ ಸೇರದೇ
ನಿಲುಕುಗಾಲಿನಲಿ ನಿಂತ ಹೊಸಿಲು
ಹುಡುಕುತ್ತದೆ ತನ್ನ ನಿಮ್ಮನೆ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾತಿನಿಧಿಕ-ಅಪ್ರಾತಿನಿಧಿಕ
Next post ಸೋತ ಮನ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys