ಬಾಗಿಲು ಬೀದಿಗಳ ನಡುವೆ

ಮುಚ್ಚಿದ ಗೂಡಿನ ಬಾಗಿಲು,
ಬಾಗಿಲಿಲ್ಲದ ಬೀದಿ ನಡುವೆ
ಲೋಕವ್ಯಾಪಾರಕ್ಕೆ ಸಾಕ್ಷಿ
ಒಂದು ಅಬ್ಬೇಪಾರಿ ಹೊಸಿಲು.
*

ಅತ್ತ ಬಾಯ್ದೆರೆದು
ಬಿದ್ದುಕೊಂಡಿರುವ
ಬಿನ್ನಾಣಗಿತ್ತಿ ಬೀದಿ ಆಹ್ವಾನಕ್ಕೆ
ಕ್ಷಣ ಕ್ಷಣವೂ
ಮರುಳಾಗಿ ಬೀಳುವ
ಅಸಂಖ್ಯ ಬಡಪಾಯಿ ಜೀವಗಳು

ಚೀತ್ಕಾರಗಳ ನುಂಗಿಯೇ
ಬಸಿರಾದ ಸಪಾಟು ಬೀದಿಯ
ಮೇಲೆ ಬಿಕ್ಕುಗಳೂ ಉಸಿರೆತ್ತದಂತೆ
ಹಗಲಿಡೀ ನಿಲ್ಲದ ಚಲನೆ

ನಿಶಿತ ಕತ್ತಲಿನಲಿ
ರಾತ್ರಿಗಳು ಗಾಢಮೌನ.
ಕ್ರಿಮಿಕೀಟ ಹುಳುಹುಪ್ಪಟೆ
ತೆವಳಿ ಆಕಳಿಸಿ
ಮೈಮುರಿಯುವ
ನಿಗೂಢ ಸದ್ದು.

ವೈಯ್ಯಾರದ ಬೀದಿ ಸೆಳೆತಕ್ಕೆ ಹೇವರಿಸಿ
ಮತ್ತಷ್ಟು ಮುದುರುವ ಹೊಸಿಲು.
*

ಇತ್ತಲಿನ ಬೆಚ್ಚನೆ ಗೂಡಿನ
ಬಾಗಿಲ ಮೇಲೆ
“ನಾಳೆ ಬಾ” ಮುದ್ರೆ

ಬಾಗಿಲು ತೆರೆಯುವುದು
ತೆರೆಯದಿರುವುದು ಒಳಗಿನವರಿಷ್ಟ

ತನ್ನ ಮುಟ್ಟಿದ ಮೆಟ್ಟಿದ
ಯಾವ ಹೆಜ್ಜೆಗಳನೂ
ತಟ್ಟಲಾರದ ಹೊಸಿಲ ಸಂಕಟ
ಮುಚ್ಚಿದ ಬಾಗಿಲಿಗೂ
ತೆರೆದು ಬಿದ್ದ ಬೀದಿಗೂ ನಡುವೆ
ಒಳಗಿಗೆ ಸಲ್ಲದೇ
ಹೊರಗಿಗೆ ಸೇರದೇ
ನಿಲುಕುಗಾಲಿನಲಿ ನಿಂತ ಹೊಸಿಲು
ಹುಡುಕುತ್ತದೆ ತನ್ನ ನಿಮ್ಮನೆ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾತಿನಿಧಿಕ-ಅಪ್ರಾತಿನಿಧಿಕ
Next post ಸೋತ ಮನ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…