ಅನನ್ಯ

ಸೂರ್ಯನ ಧಗೆಯ ಪ್ರತಿಫಲ
ಆಗುವುದು ಆವಿ ಧರೆಯ ಜಲ
ಸೇರುವುದು ನೋಡಾ ವಾಯು ಮಂಡಲ
ಆವಿ ಏರೇರಿ ಮೇಲೇರಿ ಒಡಲ

ಕರಿ ಮೋಡ ಸಾಂದ್ರೀಕರಿಸಿ
ತಂಪಾದ ಮೋಡಗಳೆಲ್ಲಾ ಮೇಲೈಸಿ
ಮಿಂಚು ಕೋಲ್ಕಿಂಚು ಸಿಡಿಲುಗಳಾರ್‍ಭಟಿಸಿ
ಭರದಿ ಇಳೆಗೆ ಮಳೆ ಸುರಿಸಿ

ಧರೆಯ ಒಡಲೆಲ್ಲಾ ನೀರೇ ನೀರು
ಮುಸುಕಿತಲ್ಲೆಲ್ಲೂ ಹಸಿರೇ ಹಸಿರು
ಬಂತು ಭುವಿಗೆ ಜೀವ ಕಳೆ
ನಕ್ಕಿತು ಕಿಲ ಕಿಲನೆ ಜಗವೆಲ್ಲಾ

ತಪ್ಪಿದರೆಚ್ಚರ ಬಂತೇ ಗಂಡಾಂತರ
ಊಹಿಸಲಸದಳ ಈ ಬದುಕು
ಸಾವು ದಿಟ ನೀರಿಲ್ಲದಾ ದೇಹಕೆ
ಎಷ್ಟೊಂದು ಪಾವನ ಈ ಜಲ

ಮಾಡಿದರೆ ಹೆಚ್ಚು ದುರ್ಬಳಕೆ
ಬರಿದಾಗುವುದು ಈ ಭಂಡಾರ
ಕಲುಷಿತಗೊಂಡ ನೀರು
ಮಾರಕ ಜೀವ ಸಂಕುಲಕೆ

ಅಂತರ್‍ಜಲ ಸಂರಕ್ಷಿಸಿ
ಮರ ಗಿಡ ಬಳ್ಳಿ ಹೆಚ್ಚೆಚ್ಚು ಬೆಳೆಸಿ
ತೋಡಿ ಇಂಗುಗುಂಡಿ ಮಾಡಿ ಮಳೆ ಕೊಯ್ಲು
ಇದುವೇ ಪ್ರಾಣಾಮ್ಲ ಜಗಕೆಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಲಿಗೆ
Next post ಅಜ್ಜಿಯ ಪ್ರೇಮ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…