ಅನನ್ಯ

ಸೂರ್ಯನ ಧಗೆಯ ಪ್ರತಿಫಲ
ಆಗುವುದು ಆವಿ ಧರೆಯ ಜಲ
ಸೇರುವುದು ನೋಡಾ ವಾಯು ಮಂಡಲ
ಆವಿ ಏರೇರಿ ಮೇಲೇರಿ ಒಡಲ

ಕರಿ ಮೋಡ ಸಾಂದ್ರೀಕರಿಸಿ
ತಂಪಾದ ಮೋಡಗಳೆಲ್ಲಾ ಮೇಲೈಸಿ
ಮಿಂಚು ಕೋಲ್ಕಿಂಚು ಸಿಡಿಲುಗಳಾರ್‍ಭಟಿಸಿ
ಭರದಿ ಇಳೆಗೆ ಮಳೆ ಸುರಿಸಿ

ಧರೆಯ ಒಡಲೆಲ್ಲಾ ನೀರೇ ನೀರು
ಮುಸುಕಿತಲ್ಲೆಲ್ಲೂ ಹಸಿರೇ ಹಸಿರು
ಬಂತು ಭುವಿಗೆ ಜೀವ ಕಳೆ
ನಕ್ಕಿತು ಕಿಲ ಕಿಲನೆ ಜಗವೆಲ್ಲಾ

ತಪ್ಪಿದರೆಚ್ಚರ ಬಂತೇ ಗಂಡಾಂತರ
ಊಹಿಸಲಸದಳ ಈ ಬದುಕು
ಸಾವು ದಿಟ ನೀರಿಲ್ಲದಾ ದೇಹಕೆ
ಎಷ್ಟೊಂದು ಪಾವನ ಈ ಜಲ

ಮಾಡಿದರೆ ಹೆಚ್ಚು ದುರ್ಬಳಕೆ
ಬರಿದಾಗುವುದು ಈ ಭಂಡಾರ
ಕಲುಷಿತಗೊಂಡ ನೀರು
ಮಾರಕ ಜೀವ ಸಂಕುಲಕೆ

ಅಂತರ್‍ಜಲ ಸಂರಕ್ಷಿಸಿ
ಮರ ಗಿಡ ಬಳ್ಳಿ ಹೆಚ್ಚೆಚ್ಚು ಬೆಳೆಸಿ
ತೋಡಿ ಇಂಗುಗುಂಡಿ ಮಾಡಿ ಮಳೆ ಕೊಯ್ಲು
ಇದುವೇ ಪ್ರಾಣಾಮ್ಲ ಜಗಕೆಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಲಿಗೆ
Next post ಅಜ್ಜಿಯ ಪ್ರೇಮ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys