Home / ಕವನ / ಕವಿತೆ / ಇಜ್ಜೋಡು

ಇಜ್ಜೋಡು

ನನ್ನಾಕೆಯಂತಾಕೆ ಲೋಕಕೆ ಒಬ್ಬಾಕೆ
ಅವಳಿಗೆ ಅವಳೆ ಹೋಲಿಕೆ.

ಓದಿಯೂ ಓದದ
ದೂರದವಳಲ್ಲದ ಇವಳ ಮಾಡಿಕೊಂಡು ಬಂದೆ
ಇವಳ ಜೋಡಿ ಸಂಸಾರ ನನಗೆ
ಕತ್ತಿ ಮೇಲೆ ಸಾಮು ಮಾಡಿದಂಗಾಗುತಿಹುದು.

ಮೇಲೆ, ನೋಡೋಕೆ ಇವಳು ಮೆತ್ತನ್ನಾಕೆ
ಒಳಗೆ ಬಲು ಘಾಟಿಯೀಕೆ
ಸದಾ ನೆರೆಕೆರೆ ಒಬ್ಬರಲ್ಲ ಒಬ್ಬರ, ಒಂದಲ್ಲ ಒಂದು ಕೊಂಕ
ಎತ್ತಿಯಾಡದಿದ್ದರೆ ತಿಂದದ್ದು ಅರಗದು ಇವಳಿಗೆ.
ನಮ್ಮದು ನಮಗೆ
ಅನ್ಯರ ಸುದ್ದಿ ಯಾಕೆಂದರೆ ಮೂತಿ ಮುರಿಯುವಳು

ಇವಳು ಚೆನ್ನಾಗಿದ್ದಾಗ ಮಾತ್ರ
ಇವಳಂತ ಹೆಣ್ಣಿಲ್ಲ
ಉಳಿದಂತೆ ಹೀಗೆ ಅಂತ ಹೇಳೋಕೆ ಬರಲ್ಲ.

ದೊಡ್ಡಾಕೆಯಿವಳು
ನೀನು ಬುದ್ದೀನೆ ಹೇಳು ಕೇಳಳು
ಅವಳಿಗೆ ಏನು ಹೇಳಬಾರದು
ಅವಳು ನಡೆದದ್ದೆ ದಾರಿಯೆಂದರೆ ಸಮ
ತಪ್ಪಿದರೆ ಮನೆಯಾದ ಮನೆಯನ್ನೆಲ್ಲಾ
ಕಾಳಿಂಗ ಮಡುವಾಗಿ ಮಾಡಿ ಬಿಡುವಳು.

ಅನುನಯ ಇವಳಲ್ಲಿ ಕೇಳಬೇಡ
ಹರಿ ಹಾಯೋದು ಬಿಟ್ಟರಿವಳು ಮನುಷ್ಯಳಲ್ಲ!
ಎದ್ದಾಗಿನಿಂದ ಮಲಕೊಳ್ಳೊವರೆಗೆ ಅದು ನಡದೇ ಇರುತ್ತೆ
ಇಗ! ಅವಳಿಗೆ ನಿದ್ದೆ ಬಂದಾಗಲೊಂದು ಕ್ಷಣ
ಮನೆ, ಮನ ತಣ್ಣಗಿರುತ್ತೆ, ನಿರಾಳವಿರುತ್ತೆ.

ಅವಳು ನನ್ನ ಮೇಲಷ್ಟೆ ಅಲ್ಲ
ಮಕ್ಕಳ ಮೇಲೂ ಅಷ್ಟೆ!
ಅವು ಆಟ ಗೀಟ ಅಂದರೆ ಉಹೂಂ! ಇಲ್ಲ!
ಅವಳು ಹೇಳಿದ್ದ ಮಾಡಬೇಕು
ಅವಳಿಷ್ಟದಂಗೆ ಇರಬೇಕು
ಒಂದೇ ಒಂದು ಕ್ಷಣ ಮರೆಯಾದರೂ ಸಿದುಮುವಂಗಾಡುವಳು

ಹೇಳಿ ಕೇಳಿ ನಾನೊಬ್ಬ ಮಾಸ್ತರ
ಯಾರಾದರೊಬ್ಬರು ತಪ್ಪದೇ ಬರುವರು
ನನ್ನ ಹತ್ತಿರ.
ಹಾಗೆ ಬಂದಾಗ ಮಾತಾಡುತ್ತ ಕುಳಿತರೆ
ಅಬ್ಬಬ್ಬಾ! ಏನದು ಮಾತೂ ಮಾತು!
ಮಾಡೋಕಿನ್ನೇನು ಬೇರೆ ಉದ್ಯೋಗ
ಅದರ ಬದಲು ಮನೆಯೊಳಗೆ ಏನಾದರೂ ನೋಡಿದರೆ ಆಗೋದಿಲ್ಲವೆ!
ನಿಮಗೇನೋ ಬೇರೆ ಕೆಲಸವಿಲ್ಲವೆಂದರೆ
ಇದ್ದವರಿಗೆ ಇರೋದಿಲ್ವೆ?
ಜೊತೆಗೆ ನಿಮಗೆ ಕಾಫಿ, ತಿಂಡಿ, ಸರಬರಾಜು ಬೇರೆ ಆಗಬೇಕು
ನೀವು ಮನೆಯೊಳಗಿದ್ದೀರಿಯೆಂದರೆ
ನನಗೆ ಒಂದೇ ಒಂದು ಕೆಲಸವೂ ಸಾಗದು
ದೊಡ್ಡ ತಲೆನೋವೆನ್ನುವಳು.

ಇನ್ನು ಹುಡುಗಿಯರು ಯಾರಾದರೂ ಬಂದು ಬಿಟ್ಟರೆ
ಮುಗೀತು!
ಒಳಗಿದ್ದು ಕೊಂಡೇ ಎಲ್ಲಾ ಗಮನಿಸುವಳು
ಅವರೊಂದೊಂದು ಅಲಂಕಾರ, ಆಕಾರ, ಬಟ್ಟೆ, ಬರೆ, ನಡೆ ನುಡಿ
ಎಲ್ಲಾ ವಿಮರ್ಶೆ ನಡೆಸುವಳು
ನನ್ನನ್ನು ಅವರನ್ನು ಒಟ್ಟುಗೂಡಿಸಿ ಅಂದು ಬಿಡುವಳು.

ರೇಗತ್ತಿ ನಾನು,
ನಾನು ಕೆಡಬೇಕೆಂದರೆ
ನೀನು ಹಿಡಿದು ಕೊಳ್ಳುವೆಯೇನೆ?
ನನಗೆ ನನ್ನ ಗೌರವ, ಘನತೆಯ ಬಗೆಗೆ ತಿಳಿಯದೆ?
ಏನು ಮೊದಲಿಂದಲೂ ನೀನೇ ಇದ್ದೆಯಾ? ಎಂದರೆ
ಆ ಹ . ಹ .. ಹ .. ! ಎನ್ನುವಳು

ಯಾವುದೊಂದರಲ್ಲೂ ಹೀಗೆ
ನಾನು ಯಾವುದೆಂದರೂ ಅವಳಿಗೆ ತಪ್ಪೆ!
ಕೊನೆಗೆ ಸರಸದ ವಿಷಯಕ್ಕೆ ಬಂದರೂ
ಬಲು ಮಡಿ, ಬಿಗಿ
ತೂಕ ಮಾಡಿದಂಗೆ

ಅದೇನೋ
ಓದು ಬರೆಯೋದು ಅಂದರೆ
ಇವಳಿಗಾಗದು
ನಾನೇನಾದರೂ ಪುಸ್ತಕ, ಪೆನ್ನು ಎತ್ತಿಕೊಂಡರೆ
ಹೂಂ! ಇನ್ನು ಕುಂತು ಬಿಟ್ಟರಾ ಎನ್ನುವಳು

ಒಂದಾದರೆ ಹೇಳ ಬಹುದು

ರೋಸಿ ಹೋಗಿ
ಲಟ ಪಟ ಅಂದರೆ
ಮುಸುಗಿಟ್ಟು ಮಲಗಿದಾಕೆ ಮರುದಿನವಾದರೂ ಎದ್ದರೆ ಕೇಳಿ!

ನಾನು,
ಅನ್ನೋದೇನೋ ಅಂದು ಬಿಡುವೆ
ಆಮೇಲೆ ಏನಾದರೊಂದು ಮಾಡಿಕೊಂಡರೇನು ಗತಿಯೆಂದು
ಬಹಳ ಅಂಜುವೆ.

ಜೊತೆಗೆ
ಕಸ ಮುಸುರೆ, ಮಕ್ಕಳು ಮರಿ ಕೆಲಸ
ನನಗೆ ಭಾರಿ ಕೆಲಸ.
ಇದೆಲ್ಲಾ ತಿಳಿದೋ ಏನೋ ಅವಳು ಉರಿದಾಡುವಳು
ನಾನು ನಾಯಿಯಂಗೆ ಮುಚ್ಚಿಕೊಂಡಿರ ಬೇಕಾಗುವುದು
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...