Home / ಕವನ / ಕವಿತೆ / ಖಾಲಿ ಗಾದಿಯ ಕೈವಾಡ

ಖಾಲಿ ಗಾದಿಯ ಕೈವಾಡ

ನನ್ನಾಕೆ ಊರಿಗೆ ಹೋಗಿ
ಒಂದೆರಡು ದಿನಗಳು ಕಳೆಯೆ
ನನ್ನೊಳಗಿನ ಕಾಮಣ್ಣ ಮಿಸುಗಾಡ ತೊಡಗಿದನು

ಏನು ತಿನ್ನಲಿ?
ಏನು ಬಿಡಲೆಂದು
ಆಕರಿಸ ತೊಡಗಿದನು
ಹಾಳಾದ ಕನಸುಗಳು
ಒಳಗಿನ ಮನಸನು ಹಿಡಿದ
ಕ್ಷ-ಕಿರಣ ಚಿತ್ರಗಳು.
ಇಲುಕಿಲ್ಲದ ಹಾಗೆ ಉಳುಕು ವಕ್ರನೆಲ್ಲಾ
ಬಯಲಿಗೆಳೆದು ಬಿಡುವ ಸತ್ಯ ಕಥಾನಕಗಳು

ಹೀಗಾಯಿತು ನೋಡಿ
ನನಗೊಂದು ಕನಸು ಬಿತ್ತು-
ನನ್ನಾಕೆ ಊರಿಗೆ ಹೋಗೋ
ಅದರಿದರ ಗಡಿ ಬಿಡಿಯಲ್ಲಿ
ಕೈ ಎಸಳ ಮರೆತು ಒಯ್ದಂತೆ
ನಾನು, ಹಿಂತಿರುಗಿ ಬಂದಾಗ
ಮನೆಗೆ ಬೀಗ ಹಾಕಿದ್ದಂತೆ
ನೆರೆಮನೆಯವರಲ್ಲಿ ಆಶ್ರಯ ಪಡೆದಿದ್ದಂತೆ.

ಹಿಂತಿರುಗಿ ಬಂದಾಗವಳು
ದೊಡ್ಡ ಹಗರಣ ಮಾಡಿ
‘ನಿನಗಾವನೋ ಗುರಿಯಿದ್ದ
ಅವನ ಸಂಗ, ಸವಿಯಲ್ಲಿ
ನಾನೆಲ್ಲಿ ಜ್ಞಾಪಕ ಬರಬೇಕಲ್ಲ’ ಎಂದೆಲ್ಲಾ ಹಾರಾಡಿದ ಹಾಗೆ.

ಬೆಳಗಾಗಿ ಇದು ನೆನಪಿಗೆ ಬಂದು
ಹೇಸಿಗೆ ಮುಟ್ಟಿದಂತಾಯಿತು.

ಹಿಂತಿರುಗಿ ಬಂದಾಗವಳಿಗೆ
ಒಂದೂ ಬಿಡದಂತೆ ಎಲ್ಲಾ ತಿಳಿಸಲೇಬೇಕು
ಕೇಳುತ್ತ ಅವಳು ಬಿದ್ದು ಬಿದ್ದು ನಗುವಂತ ಚೆಲುವನ್ನು ನೋಡಬೇಕು.
ಮತ್ತೆ ಹೇಳಿಬಿಡ ಬೇಕು-
ಇನ್ನೆಂದೂ ನೀನು ನನ್ನ ಒಂಟಿಯಾಗಿ ಬಿಟ್ಟಿರಬೇಡ
ನನ್ನೇನ್ನೇನೋ ಕಲ್ಪನೆಯಲ್ಲಿ
ಹಾಳಾದ ಕೊರೆತೆಯು
ಹೀಗೊಂದು ಚಿತ್ರವ ಬಿಡಿಸೋದು ಬೇಡ.

ಇದೆಲ್ಲಾ ಏನೂ ಆಗುತ್ತಿರಲಿಲ್ಲಾರಿ
ಎಲ್ಲಾ ಖಾಲಿ ಗಾದಿಯ ಕೈವಾಡ
ನಾನು ನನ್ನೆಲ್ಲಾ ದೇವಿಯರ ಧೇನಿಸಿ
ಉರುಳಾಡಿ, ಹೊರಳಾಡಿದ್ದರ ನಿಚ್ಚಳ ಪವಾಡ ಕಣ್ರಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...