ಖಾಲಿ ಗಾದಿಯ ಕೈವಾಡ

ನನ್ನಾಕೆ ಊರಿಗೆ ಹೋಗಿ
ಒಂದೆರಡು ದಿನಗಳು ಕಳೆಯೆ
ನನ್ನೊಳಗಿನ ಕಾಮಣ್ಣ ಮಿಸುಗಾಡ ತೊಡಗಿದನು

ಏನು ತಿನ್ನಲಿ?
ಏನು ಬಿಡಲೆಂದು
ಆಕರಿಸ ತೊಡಗಿದನು
ಹಾಳಾದ ಕನಸುಗಳು
ಒಳಗಿನ ಮನಸನು ಹಿಡಿದ
ಕ್ಷ-ಕಿರಣ ಚಿತ್ರಗಳು.
ಇಲುಕಿಲ್ಲದ ಹಾಗೆ ಉಳುಕು ವಕ್ರನೆಲ್ಲಾ
ಬಯಲಿಗೆಳೆದು ಬಿಡುವ ಸತ್ಯ ಕಥಾನಕಗಳು

ಹೀಗಾಯಿತು ನೋಡಿ
ನನಗೊಂದು ಕನಸು ಬಿತ್ತು-
ನನ್ನಾಕೆ ಊರಿಗೆ ಹೋಗೋ
ಅದರಿದರ ಗಡಿ ಬಿಡಿಯಲ್ಲಿ
ಕೈ ಎಸಳ ಮರೆತು ಒಯ್ದಂತೆ
ನಾನು, ಹಿಂತಿರುಗಿ ಬಂದಾಗ
ಮನೆಗೆ ಬೀಗ ಹಾಕಿದ್ದಂತೆ
ನೆರೆಮನೆಯವರಲ್ಲಿ ಆಶ್ರಯ ಪಡೆದಿದ್ದಂತೆ.

ಹಿಂತಿರುಗಿ ಬಂದಾಗವಳು
ದೊಡ್ಡ ಹಗರಣ ಮಾಡಿ
‘ನಿನಗಾವನೋ ಗುರಿಯಿದ್ದ
ಅವನ ಸಂಗ, ಸವಿಯಲ್ಲಿ
ನಾನೆಲ್ಲಿ ಜ್ಞಾಪಕ ಬರಬೇಕಲ್ಲ’ ಎಂದೆಲ್ಲಾ ಹಾರಾಡಿದ ಹಾಗೆ.

ಬೆಳಗಾಗಿ ಇದು ನೆನಪಿಗೆ ಬಂದು
ಹೇಸಿಗೆ ಮುಟ್ಟಿದಂತಾಯಿತು.

ಹಿಂತಿರುಗಿ ಬಂದಾಗವಳಿಗೆ
ಒಂದೂ ಬಿಡದಂತೆ ಎಲ್ಲಾ ತಿಳಿಸಲೇಬೇಕು
ಕೇಳುತ್ತ ಅವಳು ಬಿದ್ದು ಬಿದ್ದು ನಗುವಂತ ಚೆಲುವನ್ನು ನೋಡಬೇಕು.
ಮತ್ತೆ ಹೇಳಿಬಿಡ ಬೇಕು-
ಇನ್ನೆಂದೂ ನೀನು ನನ್ನ ಒಂಟಿಯಾಗಿ ಬಿಟ್ಟಿರಬೇಡ
ನನ್ನೇನ್ನೇನೋ ಕಲ್ಪನೆಯಲ್ಲಿ
ಹಾಳಾದ ಕೊರೆತೆಯು
ಹೀಗೊಂದು ಚಿತ್ರವ ಬಿಡಿಸೋದು ಬೇಡ.

ಇದೆಲ್ಲಾ ಏನೂ ಆಗುತ್ತಿರಲಿಲ್ಲಾರಿ
ಎಲ್ಲಾ ಖಾಲಿ ಗಾದಿಯ ಕೈವಾಡ
ನಾನು ನನ್ನೆಲ್ಲಾ ದೇವಿಯರ ಧೇನಿಸಿ
ಉರುಳಾಡಿ, ಹೊರಳಾಡಿದ್ದರ ನಿಚ್ಚಳ ಪವಾಡ ಕಣ್ರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈ
Next post ಬೂದಿಯಲೆದ್ದವರು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…