ಖಾಲಿ ಗಾದಿಯ ಕೈವಾಡ

ನನ್ನಾಕೆ ಊರಿಗೆ ಹೋಗಿ
ಒಂದೆರಡು ದಿನಗಳು ಕಳೆಯೆ
ನನ್ನೊಳಗಿನ ಕಾಮಣ್ಣ ಮಿಸುಗಾಡ ತೊಡಗಿದನು

ಏನು ತಿನ್ನಲಿ?
ಏನು ಬಿಡಲೆಂದು
ಆಕರಿಸ ತೊಡಗಿದನು
ಹಾಳಾದ ಕನಸುಗಳು
ಒಳಗಿನ ಮನಸನು ಹಿಡಿದ
ಕ್ಷ-ಕಿರಣ ಚಿತ್ರಗಳು.
ಇಲುಕಿಲ್ಲದ ಹಾಗೆ ಉಳುಕು ವಕ್ರನೆಲ್ಲಾ
ಬಯಲಿಗೆಳೆದು ಬಿಡುವ ಸತ್ಯ ಕಥಾನಕಗಳು

ಹೀಗಾಯಿತು ನೋಡಿ
ನನಗೊಂದು ಕನಸು ಬಿತ್ತು-
ನನ್ನಾಕೆ ಊರಿಗೆ ಹೋಗೋ
ಅದರಿದರ ಗಡಿ ಬಿಡಿಯಲ್ಲಿ
ಕೈ ಎಸಳ ಮರೆತು ಒಯ್ದಂತೆ
ನಾನು, ಹಿಂತಿರುಗಿ ಬಂದಾಗ
ಮನೆಗೆ ಬೀಗ ಹಾಕಿದ್ದಂತೆ
ನೆರೆಮನೆಯವರಲ್ಲಿ ಆಶ್ರಯ ಪಡೆದಿದ್ದಂತೆ.

ಹಿಂತಿರುಗಿ ಬಂದಾಗವಳು
ದೊಡ್ಡ ಹಗರಣ ಮಾಡಿ
‘ನಿನಗಾವನೋ ಗುರಿಯಿದ್ದ
ಅವನ ಸಂಗ, ಸವಿಯಲ್ಲಿ
ನಾನೆಲ್ಲಿ ಜ್ಞಾಪಕ ಬರಬೇಕಲ್ಲ’ ಎಂದೆಲ್ಲಾ ಹಾರಾಡಿದ ಹಾಗೆ.

ಬೆಳಗಾಗಿ ಇದು ನೆನಪಿಗೆ ಬಂದು
ಹೇಸಿಗೆ ಮುಟ್ಟಿದಂತಾಯಿತು.

ಹಿಂತಿರುಗಿ ಬಂದಾಗವಳಿಗೆ
ಒಂದೂ ಬಿಡದಂತೆ ಎಲ್ಲಾ ತಿಳಿಸಲೇಬೇಕು
ಕೇಳುತ್ತ ಅವಳು ಬಿದ್ದು ಬಿದ್ದು ನಗುವಂತ ಚೆಲುವನ್ನು ನೋಡಬೇಕು.
ಮತ್ತೆ ಹೇಳಿಬಿಡ ಬೇಕು-
ಇನ್ನೆಂದೂ ನೀನು ನನ್ನ ಒಂಟಿಯಾಗಿ ಬಿಟ್ಟಿರಬೇಡ
ನನ್ನೇನ್ನೇನೋ ಕಲ್ಪನೆಯಲ್ಲಿ
ಹಾಳಾದ ಕೊರೆತೆಯು
ಹೀಗೊಂದು ಚಿತ್ರವ ಬಿಡಿಸೋದು ಬೇಡ.

ಇದೆಲ್ಲಾ ಏನೂ ಆಗುತ್ತಿರಲಿಲ್ಲಾರಿ
ಎಲ್ಲಾ ಖಾಲಿ ಗಾದಿಯ ಕೈವಾಡ
ನಾನು ನನ್ನೆಲ್ಲಾ ದೇವಿಯರ ಧೇನಿಸಿ
ಉರುಳಾಡಿ, ಹೊರಳಾಡಿದ್ದರ ನಿಚ್ಚಳ ಪವಾಡ ಕಣ್ರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈ
Next post ಬೂದಿಯಲೆದ್ದವರು

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…