Home / ಕವನ / ಕವಿತೆ / ಖಾಲಿ ಗಾದಿಯ ಕೈವಾಡ

ಖಾಲಿ ಗಾದಿಯ ಕೈವಾಡ

ನನ್ನಾಕೆ ಊರಿಗೆ ಹೋಗಿ
ಒಂದೆರಡು ದಿನಗಳು ಕಳೆಯೆ
ನನ್ನೊಳಗಿನ ಕಾಮಣ್ಣ ಮಿಸುಗಾಡ ತೊಡಗಿದನು

ಏನು ತಿನ್ನಲಿ?
ಏನು ಬಿಡಲೆಂದು
ಆಕರಿಸ ತೊಡಗಿದನು
ಹಾಳಾದ ಕನಸುಗಳು
ಒಳಗಿನ ಮನಸನು ಹಿಡಿದ
ಕ್ಷ-ಕಿರಣ ಚಿತ್ರಗಳು.
ಇಲುಕಿಲ್ಲದ ಹಾಗೆ ಉಳುಕು ವಕ್ರನೆಲ್ಲಾ
ಬಯಲಿಗೆಳೆದು ಬಿಡುವ ಸತ್ಯ ಕಥಾನಕಗಳು

ಹೀಗಾಯಿತು ನೋಡಿ
ನನಗೊಂದು ಕನಸು ಬಿತ್ತು-
ನನ್ನಾಕೆ ಊರಿಗೆ ಹೋಗೋ
ಅದರಿದರ ಗಡಿ ಬಿಡಿಯಲ್ಲಿ
ಕೈ ಎಸಳ ಮರೆತು ಒಯ್ದಂತೆ
ನಾನು, ಹಿಂತಿರುಗಿ ಬಂದಾಗ
ಮನೆಗೆ ಬೀಗ ಹಾಕಿದ್ದಂತೆ
ನೆರೆಮನೆಯವರಲ್ಲಿ ಆಶ್ರಯ ಪಡೆದಿದ್ದಂತೆ.

ಹಿಂತಿರುಗಿ ಬಂದಾಗವಳು
ದೊಡ್ಡ ಹಗರಣ ಮಾಡಿ
‘ನಿನಗಾವನೋ ಗುರಿಯಿದ್ದ
ಅವನ ಸಂಗ, ಸವಿಯಲ್ಲಿ
ನಾನೆಲ್ಲಿ ಜ್ಞಾಪಕ ಬರಬೇಕಲ್ಲ’ ಎಂದೆಲ್ಲಾ ಹಾರಾಡಿದ ಹಾಗೆ.

ಬೆಳಗಾಗಿ ಇದು ನೆನಪಿಗೆ ಬಂದು
ಹೇಸಿಗೆ ಮುಟ್ಟಿದಂತಾಯಿತು.

ಹಿಂತಿರುಗಿ ಬಂದಾಗವಳಿಗೆ
ಒಂದೂ ಬಿಡದಂತೆ ಎಲ್ಲಾ ತಿಳಿಸಲೇಬೇಕು
ಕೇಳುತ್ತ ಅವಳು ಬಿದ್ದು ಬಿದ್ದು ನಗುವಂತ ಚೆಲುವನ್ನು ನೋಡಬೇಕು.
ಮತ್ತೆ ಹೇಳಿಬಿಡ ಬೇಕು-
ಇನ್ನೆಂದೂ ನೀನು ನನ್ನ ಒಂಟಿಯಾಗಿ ಬಿಟ್ಟಿರಬೇಡ
ನನ್ನೇನ್ನೇನೋ ಕಲ್ಪನೆಯಲ್ಲಿ
ಹಾಳಾದ ಕೊರೆತೆಯು
ಹೀಗೊಂದು ಚಿತ್ರವ ಬಿಡಿಸೋದು ಬೇಡ.

ಇದೆಲ್ಲಾ ಏನೂ ಆಗುತ್ತಿರಲಿಲ್ಲಾರಿ
ಎಲ್ಲಾ ಖಾಲಿ ಗಾದಿಯ ಕೈವಾಡ
ನಾನು ನನ್ನೆಲ್ಲಾ ದೇವಿಯರ ಧೇನಿಸಿ
ಉರುಳಾಡಿ, ಹೊರಳಾಡಿದ್ದರ ನಿಚ್ಚಳ ಪವಾಡ ಕಣ್ರಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...