ನಿನ್ನೆದೆಗೆ ನಾನೇನ ತಂದೆ?

ನನಗಾಗಿ ತೆರೆವ
ನಿನ್ನೆದೆಗೆ
ನಾನೇನ ತಂದೆ?-
ಅದರಿರುವೇ ಮರೆತೆ
ಇದ್ದರೂ
ಅದರ ಆದರ
ನಿಯಮ ಬಾಹಿರ ವೆಂದೆ ಬಗೆದೆ
ನನಗಾಗಿ ತೆರೆವ…

ನಾನು ನಕ್ಕಾಗ ನಕ್ಕು
ಅತ್ತಾಗ ಅತ್ತು
ಪಕ್ಕಾಗಿ ನಿಂತ ನಿನ್ನ
ತುತ್ತು ಕೂಳಿಗಾಗಿ ಬಿದ್ದಿರುವ ಎಲುವಿಲ್ಲದ ಜೀವವೆಂದೆ
ನನಗಾಗಿ ತೆರೆವ…
ನನ್ನ ಲೆಕ್ಕ-
ನಾನು ಬಯಸಿದಾಗಲೆಲ್ಲ
ನೀನೊಂದು
ಖುಷಿ ಕೊಡುವ ಆಟಿಕೆ-
ನಾನು ಹೇಳಿದ್ದು ಕೇಳುವ
ನಾನು ಕೇಳಿದ್ದ ನೀಡುವ
ನಾನು ಹೇಳಿದ್ದ ಮಾಡುವ
ನನ್ನ ಇಷ್ಟದ ಹಾಗೇ ಬದುಕುವ
ಪ್ರತಿಯಾಡದ ಕೇವಲದ ಒಂದು ತೊತ್ತು
ಕಟುವಿನಲಿ
ಕೋಪದಲಿ
ಭರ್ತ್ಸನೆಗೆ ಈಡಾಗುವ ಒಂದು ಪಶು ವೆಂದೆ
ನನಗಾಗಿ ತೆರೆವ…..

ನೀನೊಂದು
ಸಹನೆಯ ಮಣ್ಣಿನ ಮುದ್ದೆ
ನಾನೇನು ಮಾಡಲಿ
ನಾನು ಕ್ಷುದ್ರನಾದೆ ಅಂದರೆ
ನನಗೆ ಸಿಗೋದು
ನಿನ್ನ ವಿಷಾದದ ನಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದರುಶನ
Next post ಎತ್ತ ಸಾಗಿದೆಯೊ ಕನ್ನಡ ರಥವು

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…