ನಿನ್ನೆದೆಗೆ ನಾನೇನ ತಂದೆ?

ನನಗಾಗಿ ತೆರೆವ
ನಿನ್ನೆದೆಗೆ
ನಾನೇನ ತಂದೆ?-
ಅದರಿರುವೇ ಮರೆತೆ
ಇದ್ದರೂ
ಅದರ ಆದರ
ನಿಯಮ ಬಾಹಿರ ವೆಂದೆ ಬಗೆದೆ
ನನಗಾಗಿ ತೆರೆವ…

ನಾನು ನಕ್ಕಾಗ ನಕ್ಕು
ಅತ್ತಾಗ ಅತ್ತು
ಪಕ್ಕಾಗಿ ನಿಂತ ನಿನ್ನ
ತುತ್ತು ಕೂಳಿಗಾಗಿ ಬಿದ್ದಿರುವ ಎಲುವಿಲ್ಲದ ಜೀವವೆಂದೆ
ನನಗಾಗಿ ತೆರೆವ…
ನನ್ನ ಲೆಕ್ಕ-
ನಾನು ಬಯಸಿದಾಗಲೆಲ್ಲ
ನೀನೊಂದು
ಖುಷಿ ಕೊಡುವ ಆಟಿಕೆ-
ನಾನು ಹೇಳಿದ್ದು ಕೇಳುವ
ನಾನು ಕೇಳಿದ್ದ ನೀಡುವ
ನಾನು ಹೇಳಿದ್ದ ಮಾಡುವ
ನನ್ನ ಇಷ್ಟದ ಹಾಗೇ ಬದುಕುವ
ಪ್ರತಿಯಾಡದ ಕೇವಲದ ಒಂದು ತೊತ್ತು
ಕಟುವಿನಲಿ
ಕೋಪದಲಿ
ಭರ್ತ್ಸನೆಗೆ ಈಡಾಗುವ ಒಂದು ಪಶು ವೆಂದೆ
ನನಗಾಗಿ ತೆರೆವ…..

ನೀನೊಂದು
ಸಹನೆಯ ಮಣ್ಣಿನ ಮುದ್ದೆ
ನಾನೇನು ಮಾಡಲಿ
ನಾನು ಕ್ಷುದ್ರನಾದೆ ಅಂದರೆ
ನನಗೆ ಸಿಗೋದು
ನಿನ್ನ ವಿಷಾದದ ನಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದರುಶನ
Next post ಎತ್ತ ಸಾಗಿದೆಯೊ ಕನ್ನಡ ರಥವು

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…