ಬೆಂಕಿ ಹೂವು

ನಾನು ಹೆಚ್ಚಿದ ತರಕಾರಿಯಾಗಿದ್ದೀನಲ್ಲ!
ನಾನು ಸುಖ ಮಾರುವವಳಾಗಿರೋದರಿಂದ
ನನಗೆ, ನನ್ನ ಆತ್ಮಕ್ಕೆ, ನನ್ನ ಭಾವನೆಗಳಿಗೆ ಬೆಲೆಯಿಲ್ಲ ಅಲ್ವಾ!

ನನ್ನ ಬದುಕಿಗೆ ಅರ್ಥವಿಲ್ಲ
ನಾನು, ವಿಕೃತ ಮನಸ್ಸುಗಳ ಪ್ರಯೋಗದ ಪಶುವಾಗಿ
ಸ್ಪಂದನ ಕಳೆದ ಜೈವಿಕ ಯಂತ್ರವಾಗಿದ್ದೇನೆ

ನನಗೆ ಸುಖ ಯಾವುದು ಸಂತೋಷ ಯಾವುದೆಂಬುದೇ ಗೊತ್ತಿಲ್ಲ
ತಿನ್ನುತ್ತಿದ್ದೇನೆ, ಬದುಕಿದ್ದೇನೆ
ಕೆಟ್ಟ ಬದುಕು ಸಾಗಿಸುತ್ತಿದ್ದೇನೆ
ನಾನೇ ಆಗಿರಲಿ, ಯಾರೇ ಮಾಡಿರಲಿ
ನಾನೊಬ್ಬ ಸಮಾಜ ಕಂಟಕಿ;
ಸದ್ದಿಲ್ಲದೆ, ತಣ್ಣಗೆ ಇರಿಯುವ
ಘೋರವಾದ ವಿನಾಶಕಾರಿ ಜೈವಿಕ ಬಾಂಬು;
ಸುಖವನ್ನರಸಿ ಬರುವ ಪತಂಗಗಳ ರೆಕ್ಕೆ ಸುಡುವ
ದುರಂತ ಮೂರ್ತ
ಬೆಂಕಿ ಹೂವು.
ನಾನು, ಕೆಟ್ಟ ವ್ಯವಸ್ಥೆಯ
ಧಾರುಣ ಬದುಕಿನ ಒಂದು ಉಜ್ವಲ ಉದಾಹರಣೆ;
ಗಬ್ಬು ನಾರುತ್ತಿರುವ ಗಟಾರದಲ್ಲಿ ತೇಲುತ್ತಿರುವ
ಸಿಹಿ ತಿಂಡಿ

ನಾನು ಸಾಯಬೇಕು;
ಇದ್ದಷ್ಟೂ ನನಗೂ ಒಳ್ಳೆಯದಲ್ಲ,
ಸಮಾಜಕ್ಕೂ ಒಳ್ಳೆಯದಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯಿ
Next post ಕತ್ತಲೆ ಎಷ್ಟಿದ್ದರೆ ಏನು?

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…