ಬೆಂಕಿ ಹೂವು

ನಾನು ಹೆಚ್ಚಿದ ತರಕಾರಿಯಾಗಿದ್ದೀನಲ್ಲ!
ನಾನು ಸುಖ ಮಾರುವವಳಾಗಿರೋದರಿಂದ
ನನಗೆ, ನನ್ನ ಆತ್ಮಕ್ಕೆ, ನನ್ನ ಭಾವನೆಗಳಿಗೆ ಬೆಲೆಯಿಲ್ಲ ಅಲ್ವಾ!

ನನ್ನ ಬದುಕಿಗೆ ಅರ್ಥವಿಲ್ಲ
ನಾನು, ವಿಕೃತ ಮನಸ್ಸುಗಳ ಪ್ರಯೋಗದ ಪಶುವಾಗಿ
ಸ್ಪಂದನ ಕಳೆದ ಜೈವಿಕ ಯಂತ್ರವಾಗಿದ್ದೇನೆ

ನನಗೆ ಸುಖ ಯಾವುದು ಸಂತೋಷ ಯಾವುದೆಂಬುದೇ ಗೊತ್ತಿಲ್ಲ
ತಿನ್ನುತ್ತಿದ್ದೇನೆ, ಬದುಕಿದ್ದೇನೆ
ಕೆಟ್ಟ ಬದುಕು ಸಾಗಿಸುತ್ತಿದ್ದೇನೆ
ನಾನೇ ಆಗಿರಲಿ, ಯಾರೇ ಮಾಡಿರಲಿ
ನಾನೊಬ್ಬ ಸಮಾಜ ಕಂಟಕಿ;
ಸದ್ದಿಲ್ಲದೆ, ತಣ್ಣಗೆ ಇರಿಯುವ
ಘೋರವಾದ ವಿನಾಶಕಾರಿ ಜೈವಿಕ ಬಾಂಬು;
ಸುಖವನ್ನರಸಿ ಬರುವ ಪತಂಗಗಳ ರೆಕ್ಕೆ ಸುಡುವ
ದುರಂತ ಮೂರ್ತ
ಬೆಂಕಿ ಹೂವು.
ನಾನು, ಕೆಟ್ಟ ವ್ಯವಸ್ಥೆಯ
ಧಾರುಣ ಬದುಕಿನ ಒಂದು ಉಜ್ವಲ ಉದಾಹರಣೆ;
ಗಬ್ಬು ನಾರುತ್ತಿರುವ ಗಟಾರದಲ್ಲಿ ತೇಲುತ್ತಿರುವ
ಸಿಹಿ ತಿಂಡಿ

ನಾನು ಸಾಯಬೇಕು;
ಇದ್ದಷ್ಟೂ ನನಗೂ ಒಳ್ಳೆಯದಲ್ಲ,
ಸಮಾಜಕ್ಕೂ ಒಳ್ಳೆಯದಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯಿ
Next post ಕತ್ತಲೆ ಎಷ್ಟಿದ್ದರೆ ಏನು?

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys