Home / ಕವನ / ಕವಿತೆ / ಬೆಟ್ಟಕ್ಕೆ ಮಣ್ಣೊತ್ತವು

ಬೆಟ್ಟಕ್ಕೆ ಮಣ್ಣೊತ್ತವು

ಬೆಟ್ಟಕ್ಕೆ ಮಣ್ಣೊತ್ತವೆಲ್ಲಾ ಇರುವೆಗಳು
ನೀ ನೋಡುತ್ತಾ ಇದ್ದಿ ಮಹಾರಾಯ

ಸಣ್ಣಿರುವೆ ದೊಡ್ಡಿರುವೆ
ಸಣ್ಣ ಕಣ್ಣಿನ ದೊಡ್ಡಿರುವೆ
ದೊಡ್ಡ ಕಣ್ಣಿನ ಸಣ್ಣಿರುವೆ
ಸಾಸಿವೆ ಕಾಳಿನ ನುಣ್ಣನೆ ಇರುವೆ

ಕಪ್ಪನೆ ಕಪ್ಪಿರುವೆ ಕೆಂಪನೆ ಕೆಂಪಿರುವೆ
ಮಣ್ಣಿನ ಬಣ್ಣದ ಪ್ರಾಗಿರುವೆ
ಒಂದರ ಹಿಂದೆ ಒಂದಿರುವೆ
ಆ ಒಂದರ ಹಿಂದೆ ಎರಡಿರುವೆ
ಎರಡಿರುವೆ ಮೂರಿರುವೆ
ಎಲ್ಲಾ ಇರುವೆಯು ಬಂದಿರುವೆ
ಲೆಕ್ಕ ಯಾರೂ ಇಟ್ಟಿಲ್ಲದಿರುವೆ

ಸಣ್ಣ ಸಣ್ಣ ಉಂಡೆ ಮಾಡಿ
ಒಂದಿರುವೆಯ ಇನ್ನೊಂದು ದೂಡಿ
ಕಲ್ಲ ಬಂಡೆಗಳ ಹತ್ತಿದುವು
ಮುಳ್ಳುಗಿಡಗಳ ಸುತ್ತಿದವು

ಒಂದರ ಹಿಡಿದಿನ್ನೊಂದರ ಹಾಗೆ
ಕಂದರಗಳ ದಾಟಿದವು
ಮಂದರ ಗಿರಿಗೆ ಸುಂದರ ಇರುವೆ
ಉರುಳುರುಳಿ ಒಂದೊಂದೇ ಏರಿದುವು

ಹಬ್ಬಿದಾ ಮಲೆಯಲಿ ಬಿರುಗಾಳಿ ಮಳೆಗಾಳಿ
ಮಬ್ಬಾಗಿ ಒಮ್ಮೆಲೆ ಗುಡುಗು ಮಿಂಚು
ಹತ್ತಿದಾ ಇರುವೆಗಳು ತಬ್ಬಾಗಿಬಿಟ್ಟಾವೆ
ಬೆಟ್ಟಪ್ಪ ನಿನಗೆ ಶರಣೆಂದಿವೆ

ಬೆಟ್ಟಪ್ಪ ನೀ ಜಪ್ಪನೆ ಇದ್ದಿ
ಮಂಜಿನ ಚದ್ದರ ಹೊದ್ದಿದ್ದಿ
ಸಂಜೆಗೆ ಬೇಗನೆ ನಿದ್ರಿಸಿದ್ದಿ
ಇರುವೆಲ್ಲಿ ಹೋದುವೊ ಮಹಾರಾಯ
ನಮ್ಮೂರ ಪಾಪದ ಇರುವೆಗಳೊ ಅವು
ಕಾಪಾಡೊ ಬೆಟ್ಟದ ರಾಯ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...