ಬೆಚ್ಚನೆಯ ಸಿರಿಹಗಲ ಭರವಸೆಯ ನನಗಿತ್ತು

ಬೆಚ್ಚನೆಯ ಸಿರಿಹಗಲ ಭರವಸೆಯ ನನಗಿತ್ತು
ಮಳೆಯಂಗಿ ಇರದೆ ಪ್ರಯಾಣಿಸಲೇಕೆ ಪ್ರೇರಿಸಿದೆ ?
ನನಗಡ್ಡ ಬರುವಂತೆ ಕರಿಮೋಡಕೆಡೆಯಿತ್ತು
ಹೊಲಸುಗಪ್ಪಲ್ಲಿ ಚೆಲುವನ್ನೇಕೆ ಮರೆಸಿದೆ ?
ಕರಿಮುಗಿಲ ತೂರಿ ಹೊರಬಂದು ಗಾಳಿಗೆ ಜರೆದ
ಕಂಗೆಟ್ಟ ಮುಖದ ಮಳೆ ಹನಿ ಒರೆಸಿದರೆ ಸಾಕೆ ?
ಗಾಯ ಮಾಯಿಸಿಯು ಅವಮಾನದುರಿ ಆರಿಸದ
ಉಪಶಮನವನು ಯಾರು ನ್ಯಾಯವೆನುವರು ಏಕೆ ?
ನೀ ನಾಚಿ ನನ್ನ ಎದೆಬೆಂಕಿ ಆರುವುದೇನು ?
ಕೊರಗಿದರು ನೀನು ಕೊರತೆಯನು ತುಂಬದು ಗೋಳು ;
ಫಾತಿಸಿದವನ ವ್ಯಥೆಯು ಯಾತನೆಯ ಶಿಲುಬೆಯನು
ಹೊತ್ತ ಜೀವಕ್ಕೆ ಹಿತವೇನ ತರುವುದು ಹೇಳು ?
ಆದರೂ ನಿನ್ನೊಲವು ಸುರಿವ ಕಂಬನಿಮುತ್ತು
ತಪ್ಪುಗಳಿಗೆಲ್ಲ ಪರಿಹಾರ, ಹಿರಿಸಂಪತ್ತು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 34
Why didst thou promise such a beauteous day

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಂಸ್ತ್ರೀ – ೧೨
Next post ಈ ಮರ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys