Home / ಕವನ / ಕವಿತೆ / ದುರಂತ

ದುರಂತ

ವರ್ಷಗಳೇ ಕಳೆದವು
ಭೂಪಾಲದ ಬಿಕ್ಕುಗಳು
ನಿಂತು ಹೋಗಲಿಲ್ಲ.
ರೋದನ ಶಾಂತವಾಗಲಿಲ್ಲ.
ಕಾರ್ಖಾನೆಗಳು ಉಗುಳಿದ
ಕಪ್ಪನೆಯ ವಿಷಗಾಳಿ
ಕೊಲೆಯಾಯ್ತು ಊರೆಲ್ಲಾ
ಸ್ಮಶಾನವಾಯ್ತು.

ರಹಸ್ಯ ರಾತ್ರಿಯಲಿ
ಕರಾಳ ಕೈಗಳು-
ಛಸನಾಲಾ ದುರಂತದ
ಗಣಿಯಿಂದ ಇಣುಕುತ್ತಿರುವ
ಅಸಹಾಯಕ ನೋಟಗಳು
ಬೇರುಗಳು ಪಸರಿಸಿ
ಆಳದಲ್ಲಿ ಹರಿಬಿಟ್ಟು
ಅಸನ್ಸೂಲ್ ಗಣಿಯಲ್ಲಿ
ಉಸಿರುಗಟ್ಟಿ ಬೆಂದುಹೋದ
ಸಮಾಧಿಯಾದ ಜೀವಗಳು
ಸಂಸ್ಕಾರವಿಲ್ಲದೇ
ಕೊನೆಯಾದ ದೇಹಗಳು

ಶ್ರಮಿಕರ ರಕ್ತದಿಂದ ತೋಯ್ದ
ಅಸ್ತಿಗಳನ್ನು ಬಚ್ಚಿಡುವುದೆಲ್ಲಿ?
ಪರಿಹಾರ ಕೊಡುವುದಿರಲಿ
ಆಸ್ತಿಯನ್ನು ದಕ್ಷಿಸಿಕೊಳ್ಳಲು
ಶವಗಳ ರಾಶಿಗಳ ಮೇಲೆ
ಶಾಪಗ್ರಸ್ತ ಅಹವಾಲುಗಳಿಗೆ
ಕೋರ್ಟಿನ ಚೌಕಟ್ಟಿನಲ್ಲಿ
ನ್ಯಾಯ ಹೇಗೆ
ಪಡೆಯುವಿರಿ ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...