ದುರಂತ

ವರ್ಷಗಳೇ ಕಳೆದವು
ಭೂಪಾಲದ ಬಿಕ್ಕುಗಳು
ನಿಂತು ಹೋಗಲಿಲ್ಲ.
ರೋದನ ಶಾಂತವಾಗಲಿಲ್ಲ.
ಕಾರ್ಖಾನೆಗಳು ಉಗುಳಿದ
ಕಪ್ಪನೆಯ ವಿಷಗಾಳಿ
ಕೊಲೆಯಾಯ್ತು ಊರೆಲ್ಲಾ
ಸ್ಮಶಾನವಾಯ್ತು.

ರಹಸ್ಯ ರಾತ್ರಿಯಲಿ
ಕರಾಳ ಕೈಗಳು-
ಛಸನಾಲಾ ದುರಂತದ
ಗಣಿಯಿಂದ ಇಣುಕುತ್ತಿರುವ
ಅಸಹಾಯಕ ನೋಟಗಳು
ಬೇರುಗಳು ಪಸರಿಸಿ
ಆಳದಲ್ಲಿ ಹರಿಬಿಟ್ಟು
ಅಸನ್ಸೂಲ್ ಗಣಿಯಲ್ಲಿ
ಉಸಿರುಗಟ್ಟಿ ಬೆಂದುಹೋದ
ಸಮಾಧಿಯಾದ ಜೀವಗಳು
ಸಂಸ್ಕಾರವಿಲ್ಲದೇ
ಕೊನೆಯಾದ ದೇಹಗಳು

ಶ್ರಮಿಕರ ರಕ್ತದಿಂದ ತೋಯ್ದ
ಅಸ್ತಿಗಳನ್ನು ಬಚ್ಚಿಡುವುದೆಲ್ಲಿ?
ಪರಿಹಾರ ಕೊಡುವುದಿರಲಿ
ಆಸ್ತಿಯನ್ನು ದಕ್ಷಿಸಿಕೊಳ್ಳಲು
ಶವಗಳ ರಾಶಿಗಳ ಮೇಲೆ
ಶಾಪಗ್ರಸ್ತ ಅಹವಾಲುಗಳಿಗೆ
ಕೋರ್ಟಿನ ಚೌಕಟ್ಟಿನಲ್ಲಿ
ನ್ಯಾಯ ಹೇಗೆ
ಪಡೆಯುವಿರಿ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಡು ಕೌತುಕವಲಾ? ಈ ಬಗೆಯ ಶರಣಾಗತಿ?
Next post ಟಚ್ ಇರಲಿ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…