ದುರಂತ

ವರ್ಷಗಳೇ ಕಳೆದವು
ಭೂಪಾಲದ ಬಿಕ್ಕುಗಳು
ನಿಂತು ಹೋಗಲಿಲ್ಲ.
ರೋದನ ಶಾಂತವಾಗಲಿಲ್ಲ.
ಕಾರ್ಖಾನೆಗಳು ಉಗುಳಿದ
ಕಪ್ಪನೆಯ ವಿಷಗಾಳಿ
ಕೊಲೆಯಾಯ್ತು ಊರೆಲ್ಲಾ
ಸ್ಮಶಾನವಾಯ್ತು.

ರಹಸ್ಯ ರಾತ್ರಿಯಲಿ
ಕರಾಳ ಕೈಗಳು-
ಛಸನಾಲಾ ದುರಂತದ
ಗಣಿಯಿಂದ ಇಣುಕುತ್ತಿರುವ
ಅಸಹಾಯಕ ನೋಟಗಳು
ಬೇರುಗಳು ಪಸರಿಸಿ
ಆಳದಲ್ಲಿ ಹರಿಬಿಟ್ಟು
ಅಸನ್ಸೂಲ್ ಗಣಿಯಲ್ಲಿ
ಉಸಿರುಗಟ್ಟಿ ಬೆಂದುಹೋದ
ಸಮಾಧಿಯಾದ ಜೀವಗಳು
ಸಂಸ್ಕಾರವಿಲ್ಲದೇ
ಕೊನೆಯಾದ ದೇಹಗಳು

ಶ್ರಮಿಕರ ರಕ್ತದಿಂದ ತೋಯ್ದ
ಅಸ್ತಿಗಳನ್ನು ಬಚ್ಚಿಡುವುದೆಲ್ಲಿ?
ಪರಿಹಾರ ಕೊಡುವುದಿರಲಿ
ಆಸ್ತಿಯನ್ನು ದಕ್ಷಿಸಿಕೊಳ್ಳಲು
ಶವಗಳ ರಾಶಿಗಳ ಮೇಲೆ
ಶಾಪಗ್ರಸ್ತ ಅಹವಾಲುಗಳಿಗೆ
ಕೋರ್ಟಿನ ಚೌಕಟ್ಟಿನಲ್ಲಿ
ನ್ಯಾಯ ಹೇಗೆ
ಪಡೆಯುವಿರಿ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಡು ಕೌತುಕವಲಾ? ಈ ಬಗೆಯ ಶರಣಾಗತಿ?
Next post ಟಚ್ ಇರಲಿ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…