ದುರಂತ

ವರ್ಷಗಳೇ ಕಳೆದವು
ಭೂಪಾಲದ ಬಿಕ್ಕುಗಳು
ನಿಂತು ಹೋಗಲಿಲ್ಲ.
ರೋದನ ಶಾಂತವಾಗಲಿಲ್ಲ.
ಕಾರ್ಖಾನೆಗಳು ಉಗುಳಿದ
ಕಪ್ಪನೆಯ ವಿಷಗಾಳಿ
ಕೊಲೆಯಾಯ್ತು ಊರೆಲ್ಲಾ
ಸ್ಮಶಾನವಾಯ್ತು.

ರಹಸ್ಯ ರಾತ್ರಿಯಲಿ
ಕರಾಳ ಕೈಗಳು-
ಛಸನಾಲಾ ದುರಂತದ
ಗಣಿಯಿಂದ ಇಣುಕುತ್ತಿರುವ
ಅಸಹಾಯಕ ನೋಟಗಳು
ಬೇರುಗಳು ಪಸರಿಸಿ
ಆಳದಲ್ಲಿ ಹರಿಬಿಟ್ಟು
ಅಸನ್ಸೂಲ್ ಗಣಿಯಲ್ಲಿ
ಉಸಿರುಗಟ್ಟಿ ಬೆಂದುಹೋದ
ಸಮಾಧಿಯಾದ ಜೀವಗಳು
ಸಂಸ್ಕಾರವಿಲ್ಲದೇ
ಕೊನೆಯಾದ ದೇಹಗಳು

ಶ್ರಮಿಕರ ರಕ್ತದಿಂದ ತೋಯ್ದ
ಅಸ್ತಿಗಳನ್ನು ಬಚ್ಚಿಡುವುದೆಲ್ಲಿ?
ಪರಿಹಾರ ಕೊಡುವುದಿರಲಿ
ಆಸ್ತಿಯನ್ನು ದಕ್ಷಿಸಿಕೊಳ್ಳಲು
ಶವಗಳ ರಾಶಿಗಳ ಮೇಲೆ
ಶಾಪಗ್ರಸ್ತ ಅಹವಾಲುಗಳಿಗೆ
ಕೋರ್ಟಿನ ಚೌಕಟ್ಟಿನಲ್ಲಿ
ನ್ಯಾಯ ಹೇಗೆ
ಪಡೆಯುವಿರಿ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಡು ಕೌತುಕವಲಾ? ಈ ಬಗೆಯ ಶರಣಾಗತಿ?
Next post ಟಚ್ ಇರಲಿ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys