ವಿಷವೃಕ್ಷ

ಕವಲು ಕವಲಾಗಿ
ಚಾಚಿ ಕೊಂಡಿರುವ ಆಲದ ಮರ
ವಂಶ-ವೃಕ್ಷಗಳ ಬಿಡುವಂತೆ
ಎಷ್ಟೋ ದುಷ್ಟ ಶಕ್ತಿಗಳು
ಹುಲುಸಾಗಿ ಈ ಭೂಮಿಯಲಿ
ಬೇರು ಬಿಟ್ಟು ಬೆಳೆಯುತ್ತಿವೆ.
ಆಳವಾಗಿ ಬೇರು ಬಿಡುತ್ತ
ಸತ್ವಹೀರಿ ಬೆಳೆಯುತ್ತಿರುವ
ಕೋಮುವಾದಿ ವಿಷವೃಕ್ಷ
ತನ್ನನ್ನೇ ಮಾರಿಕೊಂಡು
ಬೆಳೆಯುತ್ತಿರುವ ಹುತ್ತ
ವಿಷ ಜಂತು ಸರ್ಪಗಳಿಗೆ
ಆಶ್ರಯ ನೀಡುತ್ತ
ಸತ್ಯವನ್ನು ಸ್ವಾರ್ಥಕ್ಕೆ ಮಾರುತ್ತ
ತಾಯ್ ಕರುಳ ಕತ್ತರಿಸಿ,
ತುಂಡು ತುಂಡಾಗಿಸಿ,
ಮತ್ತೇ ಕಸಿ ಮಾಡುವ
ಇವರ ಕ್ರೂರ ಕಸರತ್ತು
ಸಾಕು ನಿಲ್ಲಿಸಲು ಹೇಳಮ್ಮ
ಇವರು ಮಾಡಿದ
ಪಾಪದ ಕಲೆಗಳ ತೊಳೆಯಲು
ನನಗೆ ಅದೆಷ್ಟು
ಕಣ್ಣೀರು ಹರಿಸಬೇಕಿದೆಯೊ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರರೇ! ಲಾಭವೆಂದೊಡದೇನು?
Next post ಯಾಕೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…