ಕವಲು ಕವಲಾಗಿ
ಚಾಚಿ ಕೊಂಡಿರುವ ಆಲದ ಮರ
ವಂಶ-ವೃಕ್ಷಗಳ ಬಿಡುವಂತೆ
ಎಷ್ಟೋ ದುಷ್ಟ ಶಕ್ತಿಗಳು
ಹುಲುಸಾಗಿ ಈ ಭೂಮಿಯಲಿ
ಬೇರು ಬಿಟ್ಟು ಬೆಳೆಯುತ್ತಿವೆ.
ಆಳವಾಗಿ ಬೇರು ಬಿಡುತ್ತ
ಸತ್ವಹೀರಿ ಬೆಳೆಯುತ್ತಿರುವ
ಕೋಮುವಾದಿ ವಿಷವೃಕ್ಷ
ತನ್ನನ್ನೇ ಮಾರಿಕೊಂಡು
ಬೆಳೆಯುತ್ತಿರುವ ಹುತ್ತ
ವಿಷ ಜಂತು ಸರ್ಪಗಳಿಗೆ
ಆಶ್ರಯ ನೀಡುತ್ತ
ಸತ್ಯವನ್ನು ಸ್ವಾರ್ಥಕ್ಕೆ ಮಾರುತ್ತ
ತಾಯ್ ಕರುಳ ಕತ್ತರಿಸಿ,
ತುಂಡು ತುಂಡಾಗಿಸಿ,
ಮತ್ತೇ ಕಸಿ ಮಾಡುವ
ಇವರ ಕ್ರೂರ ಕಸರತ್ತು
ಸಾಕು ನಿಲ್ಲಿಸಲು ಹೇಳಮ್ಮ
ಇವರು ಮಾಡಿದ
ಪಾಪದ ಕಲೆಗಳ ತೊಳೆಯಲು
ನನಗೆ ಅದೆಷ್ಟು
ಕಣ್ಣೀರು ಹರಿಸಬೇಕಿದೆಯೊ!
*****
Related Post
ಸಣ್ಣ ಕತೆ
-
ವಿರೇಚನೆ
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…
-
ಹಳ್ಳಿ…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ಏಕಾಂತದ ಆಲಾಪ
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…