ಆಕ್ರೋಶ

ಆ ಒಡೆಯನ ಹೊಲದಾಗ
ಮೂಳೆ ಮುರಿಯೋತನಕ,
ಪುಡಿಪುಡಿಯಾಗೋ ತನಕ ನಾ ದುಡದೀನಿ.
ಹರಕ ಮುರಕ ಝೋಪಡ್ಯಾಗ
ನಾ ದಿನಾ ಕಳದೀನಿ,
ಆದರೂ ನನಗಿಲ್ಲ ಒಪ್ಪೋತ್ತಿನ ಕೂಳ,
ಹಸೀದ ನನ್ನ ಹೊಟ್ಟಿ ಚುರುಚುರು ಅನ್ತಾದ,
ಹೊಟ್ಟಿ ಹೋಗಿ ಬೆನ್ನಿಗಿ ಹತ್ತ್ಯಾದ
ಅಂದಾಗ್ಯೂ ಆ ಮಾಲೀಕ ಬೆಳೆಸ್ಯಾನ
ದೊಡ್ಡ ಗುಡಾಣದಂಥ ಹೊಟ್ಟೇನ,
ಆ ಗುಡಾಣದೊಳಗೇ ಅಡಗಿಸ್ಯಾನ
ನನ್ನ ಶ್ರಮದ ಪ್ರತಿಫಲಾನ,
ನನ್ಮೆಲೆ ಆಗ್ತಿರೋ ಅನ್ಯಾಯ
ಸಹಿಸಿ ಸಹಿಸಿ ನಾ ಸಣ್ಣಾಗಿ ಹೋಗಿನಿ,
ನನ್ನ ತಾಳ್ಮೇನ ನೀ ನೋಡಬ್ಯಾಡ ಪರೀಕ್ಷಿಸಿ,
ನ್ಯಾಯಕ್ಕಾಗಿ ನಾ ಹೋರಾಡಲೇಬೇಕು,
ತೆಪ್ಪಗ ಮುಖ ಸೊಪ್ಪು
ಹಾಕೋದಿಲ್ಲ ನಾನೀಗ
ಸಿಡಿದೇಳತೀನಿ ನಾನು
ಭಂಡರ ಕ್ರೂರ ಮುಷ್ಟಿಯಿಂದ
ಶತಮಾನಗಳ ದಾಸ್ಯ, ಗುಲಾಮಗಿರಿ
ಶೋಷಣೆಯಿಂದ ನಾನು ಎಚ್ಚೆತ್ತಾಗ,
ಕತಕತ ಕುದಿತಾದ ನನರಕ್ತ
ಬಚ್ಚಲು ರೊಜ್ಜಿನ
ಹೊಲಸು ತುಂಬಿದ ಸಮಾಜದ
ಅವ್ಯವಸ್ಥೆಯ ವಿರುದ್ಧ ಹೋರಾಡಲು,
ಶೋಧಿಸಿ ತೆಗದ್ರ ನನ್ನ ದೇಹದಾಗಿಲ್ಲ ಸಿಂಪಿ ರಕ್ತ,
ಆದರೂ ಅದು ಕುದಿತಾದ ಕತಕತ,
ಕ್ರಾಂತಿ ಅದಾ ಈಗ ಬೂದಿ ಮುಚ್ಚಿದ ಕೆಂಡದಾಂಗ
ಶೋಷಣಿಗೊಳಗಾದ ನನ್ನ
ಪ್ರತಿಯೊಂದು ಮೂಳೆಯೂ
ಅಕ್ರೋಶದಿಂದ ಕೂಗತಾವ,
ತನ್ನ ಶ್ರಮದ ಪ್ರತಿಫಲವನ್ನ ಕೇಳತಾವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರೊ ದುಡಿದರೆ ಇನ್ನಾರಿಗೋ ಆರೋಗ್ಯ ಸಿಕ್ಕೀತೇ?
Next post ಮರೆಯೋಕಾಗಲ್ಲ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…