ಆ ಒಡೆಯನ ಹೊಲದಾಗ
ಮೂಳೆ ಮುರಿಯೋತನಕ,
ಪುಡಿಪುಡಿಯಾಗೋ ತನಕ ನಾ ದುಡದೀನಿ.
ಹರಕ ಮುರಕ ಝೋಪಡ್ಯಾಗ
ನಾ ದಿನಾ ಕಳದೀನಿ,
ಆದರೂ ನನಗಿಲ್ಲ ಒಪ್ಪೋತ್ತಿನ ಕೂಳ,
ಹಸೀದ ನನ್ನ ಹೊಟ್ಟಿ ಚುರುಚುರು ಅನ್ತಾದ,
ಹೊಟ್ಟಿ ಹೋಗಿ ಬೆನ್ನಿಗಿ ಹತ್ತ್ಯಾದ
ಅಂದಾಗ್ಯೂ ಆ ಮಾಲೀಕ ಬೆಳೆಸ್ಯಾನ
ದೊಡ್ಡ ಗುಡಾಣದಂಥ ಹೊಟ್ಟೇನ,
ಆ ಗುಡಾಣದೊಳಗೇ ಅಡಗಿಸ್ಯಾನ
ನನ್ನ ಶ್ರಮದ ಪ್ರತಿಫಲಾನ,
ನನ್ಮೆಲೆ ಆಗ್ತಿರೋ ಅನ್ಯಾಯ
ಸಹಿಸಿ ಸಹಿಸಿ ನಾ ಸಣ್ಣಾಗಿ ಹೋಗಿನಿ,
ನನ್ನ ತಾಳ್ಮೇನ ನೀ ನೋಡಬ್ಯಾಡ ಪರೀಕ್ಷಿಸಿ,
ನ್ಯಾಯಕ್ಕಾಗಿ ನಾ ಹೋರಾಡಲೇಬೇಕು,
ತೆಪ್ಪಗ ಮುಖ ಸೊಪ್ಪು
ಹಾಕೋದಿಲ್ಲ ನಾನೀಗ
ಸಿಡಿದೇಳತೀನಿ ನಾನು
ಭಂಡರ ಕ್ರೂರ ಮುಷ್ಟಿಯಿಂದ
ಶತಮಾನಗಳ ದಾಸ್ಯ, ಗುಲಾಮಗಿರಿ
ಶೋಷಣೆಯಿಂದ ನಾನು ಎಚ್ಚೆತ್ತಾಗ,
ಕತಕತ ಕುದಿತಾದ ನನರಕ್ತ
ಬಚ್ಚಲು ರೊಜ್ಜಿನ
ಹೊಲಸು ತುಂಬಿದ ಸಮಾಜದ
ಅವ್ಯವಸ್ಥೆಯ ವಿರುದ್ಧ ಹೋರಾಡಲು,
ಶೋಧಿಸಿ ತೆಗದ್ರ ನನ್ನ ದೇಹದಾಗಿಲ್ಲ ಸಿಂಪಿ ರಕ್ತ,
ಆದರೂ ಅದು ಕುದಿತಾದ ಕತಕತ,
ಕ್ರಾಂತಿ ಅದಾ ಈಗ ಬೂದಿ ಮುಚ್ಚಿದ ಕೆಂಡದಾಂಗ
ಶೋಷಣಿಗೊಳಗಾದ ನನ್ನ
ಪ್ರತಿಯೊಂದು ಮೂಳೆಯೂ
ಅಕ್ರೋಶದಿಂದ ಕೂಗತಾವ,
ತನ್ನ ಶ್ರಮದ ಪ್ರತಿಫಲವನ್ನ ಕೇಳತಾವ.
*****
Related Post
ಸಣ್ಣ ಕತೆ
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ಕರಿ ನಾಗರಗಳು
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…
-
ದಾರಿ ಯಾವುದಯ್ಯಾ?
ಮೂವತೈದು ವರ್ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…