ಮಿಂಚು

ನನ್ನೊಡಲ ತುಂಬ
ನೋವಿನ ಧ್ವನಿಗಳು, ಚೀತ್ಕಾರಗಳು.
ಉಸಿರುಗಟ್ಟಿ ಸಾಯುತ್ತಿರುವ
ಹತಾಶ ಕನಸುಗಳು
ಹೆಡೆಬಿಚ್ಚಿ ಹೊಗೆಯಾಡುವ
ಬುಸುಗುಡುವ ಬಯಕೆಗಳು,
ಬಾಡಿ ಮುದುಡಿ –
ಕಮರಿ ಕರಕಾರಿ
ಭಸ್ಮವಾದ ಚಿಗುರುಗಳು –
ನಿನ್ನ ಕಾಲಡಿ ಸಿಕ್ಕು –
ಬದುಕು ಮರಮರ ಎನುತ್ತಿದೆ.

ನಿನ್ನ ದಟ್ಟ ಕಡು
ಕಪ್ಪು ಛಾಯಿಯ
ಅಡಿಯಲ್ಲಿ ನುಚ್ಚುನೂರಾದ
ನನ್ನ ಆಶಾ ಗೋಪುರಗಳು
ನನ್ನ ನಿಟ್ಟುಸಿರು
ಹೊಗೆಯಾಗಿ ಕಪ್ಪನೆ
ಮೋಡವಾಗಿ
ಆಗಸದ ತುಂಬಾ
ಕತ್ತಲೋ ಕತ್ತಲು
ಭೀಕರ ಕತ್ತಲು
ಸುತ್ತ ಮುತ್ತಲೂ,
ಕಾಲಗರ್ಭದ ಹೊಟ್ಟೆ
ಸೀಳಿಕೊಂಡು,
ಅಗೋ ಬರುತ್ತಿದೆ
ಮಿಂಚು,
ಆಗಸದ ತುಂಬಾ ಈ
ಗುಡುಗು ಸಿಡಿಲು
ಮಿಂಚೋ ಮಿಂಚು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಂಥ ವೇಗದೋಟದಲ್ಲಿ ನೋಟ ಸಾಧ್ಯವಾ?
Next post ನೆನಪಾಯ್ತು

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…