ನೆರಳು

ನಡು ಹಗಲಿನ ಉರಿ ಬಿಸಿಲಿಗೆ
ಬೀದಿಯ ಬದಿಯಲ್ಲಿ ನಾನು ನಿಂತಿರುವೆ
ನನ್ನ ಹಿಂಬದಿಗೆ ಮರ
ಅದರ ನೆರಳು ನನ್ನೆದುರು ನಿಂತಿದೆ
ಮರದ ಕೊಂಬೆ ಕಪ್ಪು, ರೆಂಬೆ ಬೂದು ಕಪ್ಪು,
ಎಲೆ ಹಸಿರು, ನೀಲ-ಶ್ಯಾಮಲ ಹೂವು
ಅದರ ಮೇಲೊಂದು ಕರ್ರಗಿನ ಕಾಗೆ ಕೂತಿದೆ
ಮರದಲ್ಲಿ ಬಣ್ಣ ಅನೇಕ
ಕಪ್ಪು, ಬೂದು, ನೀಲ, ಶ್ಯಾಮಲ, ಹಸಿರು
ನನ್ನೆದುರಿನ ನೆರಳು ಮಾತ್ರ ಕಪ್ಪು
ಎಲ್ಲ ಬಣ್ಣ ಭೇದ ಭಾವವ ಮರೆತು
ನೆರಳಲ್ಲಿ ಕಪ್ಪು ಒಂದಾಗಿದೆ.
ಮರ ತನ್ನ ರೂಪವನ್ನು ಅದರಲ್ಲಿ ಕಂಡು
ನಿಜಕ್ಕಿಂತ ಹೆಚ್ಚು ಜೀವಂತವಾಗಿದೆ.

ಮೂಲ: ಶಾಂತಾ ಶೆಳ್ಕೆ
(ಮರಾಠಿ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಗಿದ ಕತೆಗೆ
Next post ಸಾವನ್ನೊಪ್ಪದೆ ಸಂಕಟವನಪ್ಪಿದೊಡೆಂತು?

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…