ನಮ್ಮೂರ ಕೇರಿ

ನಮ್ಮೂರ ಕೇರಿಯಲಿ ಯಾರೂ
ಹಸನಾದ ಬದುಕು ಕಂಡವರಿಲ್ಲ
ಮನುಷ್ಯರ ತರ ಬದುಕಿದವರಿಲ್ಲ

ಇಲ್ಲಿ ಹುಟ್ಟಿದವರು…
ಒಂದು ಹಿಡಿ ಅನ್ನಕ್ಕಾಗಿ
ಬೊಗಸೆ ನೀರಿಗಾಗಿ
ಬಾಯಿತೆರೆದು ಕೈಮಾಡಿ
ಕಾಯುತ್ತಾ ನಿಲ್ಲುವರು.

ಬೈಗುಳಗಳೊಂದಿಗೆ….
ಮುಂಜಾನೆ ಮನೆಗೂಡಿಸಿ
ಅವರ ಮನೆಯಂಗಳ ಹಸನಗೊಳಿಸುತ
ಹೊಲಸಲಿ ಹರಕಲುಗಳಾಗಿಹರು

ಎತ್ತಿಕೊಟ್ಟ, ಅನ್ನ, ನೀರು…
ಹೊಟ್ಟೆ ಹಸಿವು ತುಂಬಿದ
ತೃಪ್ತಿಯಲಿ, ಅತೃಪ್ತ ಬದುಕಲಿವರು
ಒಡೆದ ಕನಸು ಮನಸಲಿ ಬಾಳುತಿಹರು

ತಮ್ಮನ್ನು ಹಡೆದ
ಅಪ್ಪ ಅವ್ವಂದಿರನ್ನೆ
ಅಸ್ಪೃಶ್ಯತೆಯಲಿ ಕಾಣುತಲಿವರು
ತಾವೇ ಅಸ್ಪೃಶ್ಯರಾಗಿಹರು

ಈ ಕೇರಿಯಲಿ ಬದುಕುವ
ಆಶೆ ಯಾರಿಗೂ ಇಲ್ಲ…
ಬದುಕುತ್ತಿದ್ದಾರೆ ಇದ್ದು…
ಸತ್ತಹಾಗೆ ಯಾರ ತಪ್ಪಿಗಾಗಿ?
ಪ್ರಶ್ನೆ ಪ್ರಶ್ನೆಯಾಗಿಯೇ ಇದೆ….

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರೋ ಸಾರೋ ಸಾರೋ ಸುಮ್ಮನೆ
Next post ಕನ್ನಡ ಸಾಹಿತ್ಯ : ಸ್ತ್ರೀಸಂವೇದನೆಯ ನೆಲೆಗಳು

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys