ಧ್ಯಾನಕ್ಕೆ ಹುಡುಕಾಟವೇಕೆ?

ದೇವಾಲಯದಲ್ಲಿ ಕುಳಿತಿದ್ದ ಓರ್‍ವ ಸ್ವಾಮಿಗಳ ಬಳಿ ಒಬ್ಬ ಶಿಷ್ಯ ಬಂದ. ಅವನಿಗೆ ಧ್ಯಾನ ಕಲಿಯುವ ಬಲು ಕಾತುರ.

ಗುರುಗಳ ಮುಂದೆ ಕೈ ಜೋಡಿಸಿ “ನನಗೆ ಧ್ಯಾನ ಕಲಿಸಬೇಕೆಂದು” ಬಿನ್ನವಿಸಿಕೊಂಡ.
“ಊಟ ಮಾಡಿದೆಯಾ? ಹೊಟ್ಟೆ ತುಂಬಿತೇ? ಮೊದಲು ಜೀರ್‍ಣಿಸಿಕೊ. ಹೊಟ್ಟೆ ಸ್ವಚ್ಛವಾಲಿ.” ಎಂದರು. “ಆಯಿತು ಗುರುಗಳೇ, ಇನ್ನು ಧ್ಯಾನ ಕಲಿಸುವಿರಾ?” ಎಂದ ಶಿಷ್ಯ.

“ಮೊದಲು ಅಡ್ಡಾಡಿ ವಿಹರಿಸಿ, ಗಾಳಿ ಕುಡಿದು ಬಾ” ಎಂದರು ಗುರುಗಳು.

“ಆಯಿತು ಗುರುಗಳೇ, ಇನ್ನು ಧ್ಯಾನ ಕಲಿಸುವಿರಾ?” ಎಂದ ಶಿಷ್ಯ.

“ವಿಹರಿಸಿ, ಶ್ವಾಸ ಕೋಶ ಸ್ವಚ್ಛವಾಯಿತೆ? ಪ್ರಾಣದಲ್ಲಿ ನೆಲೆ ನಿಲ್ಲು,” ಎಂದರು ಗುರುಗಳು.

“ನೀನಿಂತಾಗ ಪ್ರಾಣ ನಿಲ್ಲುತ್ತದೆ, ನೀಕುಳಿತಾಗ ಕೂಡುತ್ತದೆ” ಎಂದರು ಗುರುಗಳು.

“ನಿನ್ನಲ್ಲಿರುವ ಧ್ಯಾನಕ್ಕೆ ಹುಡುಕಾಟ ಬೇಡ” ಎಂದಾಗ ಗುರುಗಳು, ಶಿಷ್ಯ ತೃಪ್ತನಾದ ಸಹಜ ಧ್ಯಾನದಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲ ರೋಗದ ಮೂಲ ಮಾಲಿನ್ಯವೆಲ್ಲಿಹುದು ಗೊತ್ತಾ?
Next post ಹಾಳಿ ಹಡಗ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…