Home / ಕವನ / ಭಾವಗೀತೆ / ಉದಯಾಚಲದಲಿ ಮೂಡಿದ ಸೂರ್ಯ

ಉದಯಾಚಲದಲಿ ಮೂಡಿದ ಸೂರ್ಯ

ಉದಯಾಚಲದಲಿ ಮೂಡಿದ ಸೂರ್ಯ
ಹಿಡಿದನು ಕನ್ನಡ ಬಾವುಟವ
ಹಾರಿದ ಹಕ್ಕಿಗಳೆಲ್ಲವು ಮೊರೆದವು
ಕನ್ನಡ ನಾಡ ಗೀತವ ||

ಓಡುವ ನದಿಗಳು ಕಲಕಲ ರವದಲಿ
ನಲಿಸಲಿ ಕರುನಾಡ
ಹೆಜ್ಜೆಯ ಹಾಕಿದ ಪಚ್ಚನೆ ಪಯಿರು
ಮೆರೆಸಲಿ ಸಿರಿನಾಡ
ಪಡುವಣ ತೀರದ ಸಹ್ಯಾದ್ರಿಯ ಸಿರಿ
ಸ್ಫೂರ್ತಿಯ ಸೆಲೆಯಾಗಿ
ಉಳಿಸಲಿ ಬೆಳೆಸಲಿ ಕನ್ನಡ ಸತ್ವವ
ಚಿರನೂತನವಾಗಿ

ಸುರಿಯಲಿ ಎಲ್ಲೂ ಕನ್ನಡದಾ ಮಳೆ
ಸ್ವಾತಿಯ ಮುತ್ತಾಗಿ
ತೊನೆಯಲಿ ಎಲ್ಲೆಡೆ ಭ್ರಾತೃತ್ವದ ಬೆಳೆ
ಉಸಿರು ಉಸಿರಾಗಿ
ಮೊಳಗಲಿ ಎಲ್ಲೆಡೆ ಕನ್ನಡ ಸ್ವರಗಳು
ಸರಿಗಮ ಪದವಾಗಿ
ಬೆಳೆಯಲಿ ಸರ್ವರ ಹೃದಯ ತೋಟದಲಿ
ತರು ಲತೆ ಒಂದಾಗಿ

ಏರಲಿ ಮುಗಿಲಿಂದಾಚೆಗೆ ಹಾರಲಿ
ಕನ್ನಡ ಬಾವುಟವು
ಸೂರ್ಯನ ಮೀರಿದ ಗ್ರಹತಾರೆಗಳು
ಸೂಸಲಿ ಸ್ವಾಗತವು
ಕನ್ನಡ ಕನ್ನಡ ಐಸಿರಿಗನ್ನಡ
ಎಂದೂ ಚೇತನವು
ಕನ್ನಡ ನುಡಿಯಲಿ ತೇಲಿದ ಜೀವಿಯ
ಬದುಕು ಪಾವನವು

ಕಸ್ತೂರಿಯಲಿ ಮೈತಳೆದ ಸಿರಿ
ನಮ್ಮೀ ಕನ್ನಡವು
ಬಿಟ್ಟರೆ ಬಾಯಿ ಕವಿತೆಯು ಅಲ್ಲಿ
ಎಂಥಾ ಸೋಜಿಗವು
ಸುಂದರ ಕನ್ನಡ ನಾಡನು ಹೊತ್ತ
ಭೂಮಿ ಸಾರ್ಥಕವು
ಇಂತಹ ನಾಡನು ನೋಡದ ಮಂದಿಯ
ಜನ್ಮ ನಿರರ್ಥಕವು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...