ಉದಯಾಚಲದಲಿ ಮೂಡಿದ ಸೂರ್ಯ

ಉದಯಾಚಲದಲಿ ಮೂಡಿದ ಸೂರ್ಯ
ಹಿಡಿದನು ಕನ್ನಡ ಬಾವುಟವ
ಹಾರಿದ ಹಕ್ಕಿಗಳೆಲ್ಲವು ಮೊರೆದವು
ಕನ್ನಡ ನಾಡ ಗೀತವ ||

ಓಡುವ ನದಿಗಳು ಕಲಕಲ ರವದಲಿ
ನಲಿಸಲಿ ಕರುನಾಡ
ಹೆಜ್ಜೆಯ ಹಾಕಿದ ಪಚ್ಚನೆ ಪಯಿರು
ಮೆರೆಸಲಿ ಸಿರಿನಾಡ
ಪಡುವಣ ತೀರದ ಸಹ್ಯಾದ್ರಿಯ ಸಿರಿ
ಸ್ಫೂರ್ತಿಯ ಸೆಲೆಯಾಗಿ
ಉಳಿಸಲಿ ಬೆಳೆಸಲಿ ಕನ್ನಡ ಸತ್ವವ
ಚಿರನೂತನವಾಗಿ

ಸುರಿಯಲಿ ಎಲ್ಲೂ ಕನ್ನಡದಾ ಮಳೆ
ಸ್ವಾತಿಯ ಮುತ್ತಾಗಿ
ತೊನೆಯಲಿ ಎಲ್ಲೆಡೆ ಭ್ರಾತೃತ್ವದ ಬೆಳೆ
ಉಸಿರು ಉಸಿರಾಗಿ
ಮೊಳಗಲಿ ಎಲ್ಲೆಡೆ ಕನ್ನಡ ಸ್ವರಗಳು
ಸರಿಗಮ ಪದವಾಗಿ
ಬೆಳೆಯಲಿ ಸರ್ವರ ಹೃದಯ ತೋಟದಲಿ
ತರು ಲತೆ ಒಂದಾಗಿ

ಏರಲಿ ಮುಗಿಲಿಂದಾಚೆಗೆ ಹಾರಲಿ
ಕನ್ನಡ ಬಾವುಟವು
ಸೂರ್ಯನ ಮೀರಿದ ಗ್ರಹತಾರೆಗಳು
ಸೂಸಲಿ ಸ್ವಾಗತವು
ಕನ್ನಡ ಕನ್ನಡ ಐಸಿರಿಗನ್ನಡ
ಎಂದೂ ಚೇತನವು
ಕನ್ನಡ ನುಡಿಯಲಿ ತೇಲಿದ ಜೀವಿಯ
ಬದುಕು ಪಾವನವು

ಕಸ್ತೂರಿಯಲಿ ಮೈತಳೆದ ಸಿರಿ
ನಮ್ಮೀ ಕನ್ನಡವು
ಬಿಟ್ಟರೆ ಬಾಯಿ ಕವಿತೆಯು ಅಲ್ಲಿ
ಎಂಥಾ ಸೋಜಿಗವು
ಸುಂದರ ಕನ್ನಡ ನಾಡನು ಹೊತ್ತ
ಭೂಮಿ ಸಾರ್ಥಕವು
ಇಂತಹ ನಾಡನು ನೋಡದ ಮಂದಿಯ
ಜನ್ಮ ನಿರರ್ಥಕವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋತಿಷ್ಯ
Next post ಹಸಿವು ೨

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…