ಪುಷ್ಪ… ಪುಷ್ಪ…

ಪುಷ್ಪ… ಪುಷ್ಪ…
ಕಣ್ಣು ಪುಷ್ಪ ನೋಟ ಪುಷ್ಪ
ನುಡಿವ ಮಾತು ಮಿಡಿವ ಹೃದಯ
ನಗೆಯೂ ಬಗೆಯೂ ಪುಷ್ಪ ಪುಷ್ಪ ||ಪ||

ಒಲುಮೆ ಪುಷ್ಪ ನಲುಮೆ ಪುಷ್ಪ
ಚಲನ ವಲನ ಮಿಲನ ಪುಷ್ಪ
ಕರುಣೆ ಪುಷ್ಪ ಸ್ಫುರಣೆ ಪುಷ್ಪ
ಕಣ್ಣೂರಲ್ಲಿ ತಳೆದ ಪುಷ್ಪ
ಕನಸಾಗುವುದೆ? ನನಸಾಗುವುದೆ?
ಕನವರಿಕೆಯಲಿ ಕೃಪೆ ಕಾಣುವುದೆ? ||೧||

ಸರಳ ಪುಷ್ಪ ವಿರಳ ಪುಷ್ಪ
ಅರಳು ಮರಳು ಕರುಳು ಪುಷ್ಪ
ಸನಿಹ ಪುಷ್ಪ ದೂರ ಪುಷ್ಪ
ಸ್ನೇಹಾಂತರದ ಸಿಹಿಯು ಪುಷ್ಪ
ಸಿಹಿಯಾಗುವುದೆ? ಕಹಿಯಾಗುವುದೆ?
ಕಾಣದ ಕಡಲಿಗೆ ಕರೆದೊಯ್ಯುವುದೆ? ||೨||

(ಲಾಲ್‌ಬಾಗ್‌ನ ಪುಷ್ಪೋದ್ಯಾನದಲ್ಲಿ ಮನ ಸೆಳೆದ ಪುಷ್ಪವೊಂದರ ಪ್ರೇರಣೆಯಲ್ಲಿ ಮೂಡಿದ ಕವಿತೆ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವ ಬಂಧನ
Next post ಏರಿಕೆ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…