ಏಣಿ

ಮೇಲೇರಬೇಕು
ಮೇಲೆ ಬರಲೇ ಬೇಕು
ಮೇಲೇರಿ ಬರುವುದು
ಯಾರೊಬ್ಬನ ಸ್ವತ್ತಲ್ಲ
ಎಲ್ಲರ ಜನ್ಮಸಿದ್ಧ ಹಕ್ಕು.
ಇರುವುದೊಂದೇ ಏಣಿ
ಹತ್ತುವವರೋ ಅಸಂಖ್ಯ
ಗುಂಪು ಗುಂಪು ಮಂದಿ
ಅನೇಕರಿಗೆ ಏಣಿಯ
ಹತ್ತಿರವೂ ಹೋಗಲಾಗುತ್ತಿಲ್ಲ.
ತಾಕತ್ತಿದ್ದವ ನುಗ್ಗಿದ
ಅವನೊಂದಿಗೆ ನೂರಾರು ಜನ
ನುಗ್ಗಿಯೇ ನುಗ್ಗಿದರು.
ಕಾಲ್ಹಿಡಿದು ಜಗ್ಗಿದರು
ಮುಂದೆ ಹೋದವನ ಹಿಂದಕ್ಕೆ
ತಳುತ್ತಾ ಮೇಲೇರೇ ಏರಿದರು.
ಹಿಂದಿದ್ದವರಾರೋ ಮುಂದಿದ್ದವರಾರೋ?
ಸಿಕ್ಕಿದವರಿಗೆ ಸೀರುಂಡೆ.
ಮೇಲೇರಿದಂತೆಲ್ಲಾ ಗುಂಪೇ ಇಲ್ಲ!
ದಾರಿ ಸುಗಮ. ಆದರೆ
ತೀರಾ ಮೇಲೇರಿದಾಗ ತಿಳಿಯಿತು
ಏಣಿಗೆ ಆಧಾರವೇ ಇಲ್ಲ!
ಅದು ನಿಂತಿರುವುದು ಕೆಳಗೆ
ನಿಂತವರ ತಲೆಯ ಮೇಲೆ!
ಮೇಲೇರಿದವ ಇಳಿಯುವಂತಿಲ್ಲ.
ಮತ್ತೆ‌ಏಳಲು ಸ್ಥಳವೇ ಇಲ್ಲ.
ಏರಿದ್ದಂತು ಆಯತು… ಆದರೆ
ಸಾಧಿಸಿದ್ದಾದರೂ ಏನು?
ಏರದಿದ್ದರೆ ಏನೂ
ಮುಳುಗಿ ಹೋಗುತ್ತಿರಲಿಲ್ಲ.
ಏರಿದಷ್ಟೇ ಬಂತು. ಕೆಳಗೆ?
ಗುಂಪು ಗುಂಪು ಜನ
ಮೇಲೇರಲು ತವಕಿಸುತ್ತಿರುವ
ಏರುವವನ ಕಾಲೆಳೆವ
ಏರಲಾರದೆ ಒದ್ದಾಡುತ್ತಿರುವ
ಜನ… ಜನ… ಜನ…
*****
೦೬-೦೭-೧೯೮೮

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿತೆ ಮತ್ತು ಪ್ರಜಾಸತ್ತೆ
Next post ಅನುರಾಗ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…