ಏಣಿ

ಮೇಲೇರಬೇಕು
ಮೇಲೆ ಬರಲೇ ಬೇಕು
ಮೇಲೇರಿ ಬರುವುದು
ಯಾರೊಬ್ಬನ ಸ್ವತ್ತಲ್ಲ
ಎಲ್ಲರ ಜನ್ಮಸಿದ್ಧ ಹಕ್ಕು.
ಇರುವುದೊಂದೇ ಏಣಿ
ಹತ್ತುವವರೋ ಅಸಂಖ್ಯ
ಗುಂಪು ಗುಂಪು ಮಂದಿ
ಅನೇಕರಿಗೆ ಏಣಿಯ
ಹತ್ತಿರವೂ ಹೋಗಲಾಗುತ್ತಿಲ್ಲ.
ತಾಕತ್ತಿದ್ದವ ನುಗ್ಗಿದ
ಅವನೊಂದಿಗೆ ನೂರಾರು ಜನ
ನುಗ್ಗಿಯೇ ನುಗ್ಗಿದರು.
ಕಾಲ್ಹಿಡಿದು ಜಗ್ಗಿದರು
ಮುಂದೆ ಹೋದವನ ಹಿಂದಕ್ಕೆ
ತಳುತ್ತಾ ಮೇಲೇರೇ ಏರಿದರು.
ಹಿಂದಿದ್ದವರಾರೋ ಮುಂದಿದ್ದವರಾರೋ?
ಸಿಕ್ಕಿದವರಿಗೆ ಸೀರುಂಡೆ.
ಮೇಲೇರಿದಂತೆಲ್ಲಾ ಗುಂಪೇ ಇಲ್ಲ!
ದಾರಿ ಸುಗಮ. ಆದರೆ
ತೀರಾ ಮೇಲೇರಿದಾಗ ತಿಳಿಯಿತು
ಏಣಿಗೆ ಆಧಾರವೇ ಇಲ್ಲ!
ಅದು ನಿಂತಿರುವುದು ಕೆಳಗೆ
ನಿಂತವರ ತಲೆಯ ಮೇಲೆ!
ಮೇಲೇರಿದವ ಇಳಿಯುವಂತಿಲ್ಲ.
ಮತ್ತೆ‌ಏಳಲು ಸ್ಥಳವೇ ಇಲ್ಲ.
ಏರಿದ್ದಂತು ಆಯತು… ಆದರೆ
ಸಾಧಿಸಿದ್ದಾದರೂ ಏನು?
ಏರದಿದ್ದರೆ ಏನೂ
ಮುಳುಗಿ ಹೋಗುತ್ತಿರಲಿಲ್ಲ.
ಏರಿದಷ್ಟೇ ಬಂತು. ಕೆಳಗೆ?
ಗುಂಪು ಗುಂಪು ಜನ
ಮೇಲೇರಲು ತವಕಿಸುತ್ತಿರುವ
ಏರುವವನ ಕಾಲೆಳೆವ
ಏರಲಾರದೆ ಒದ್ದಾಡುತ್ತಿರುವ
ಜನ… ಜನ… ಜನ…
*****
೦೬-೦೭-೧೯೮೮

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿತೆ ಮತ್ತು ಪ್ರಜಾಸತ್ತೆ
Next post ಅನುರಾಗ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys