ಬಿಸಿಲು ಬೆಳದಿಂಗಳು

ಹರಿಯೆ ನಿನ್ನ ಮರೆತು ನಾನು
ಭಾವಗಳ ಭಾವದಲಿ ತೇಲಿಹೋದೆ
ದೀಪವೇ ಸುಖ ನೀಡುವದೆಂಬ ಭ್ರಮದಿ
ಪತಂಗ ಸುಳಿದು ಜಲಿಸಿದಂತೆ ಸೋರಿಹೋದೆ

ಬಿಸಿಲೆ ಬೆಳದಿಂಗಳೆಂದು ಚಲ್ಲಾಟವಾಡಿ
ಬದುಕೆಲ್ಲ ಹೋರಾಡಿ ದುಃಖದಿ ಬೆಂದು ಹೋದೆ
ಗಗನ ಕುಸುಮಕ್ಕೆ ಕೈಯ ಚಾಚಿ ನಾನು
ನಶ್ವರ ತನುವಿನ ಸ್ವಾರ್ಥಕ್ಕೆ ನಾನೊಂದೆ

ಲಿಂಗ ಪೂಜೆಯ ಮರೆತು ಅಂಗ ಸುಖಕೆ ಬಯಸಿ
ನರಕ ಕೂಪಕ್ಕೆ ನಿತ್ಯ ಜಾರುತ್ತ ಹೋದೆ
ಜನುಮ ಜನುಮಗಳು ಹೀಗೆ ಪಡೆದು ನಾನು
ಮತ್ತೆ ಇಂದ್ರಿಯ ಸುಖಗಳಿಗೆ ಮೀರುತ್ತ ಹೋದೆ

ಯಾವುದು ನನ್ನಕೈಯ ಹಿಡಿದು ಕಾಪಾಡಲಿಲ್ಲ
ಮಸಣಕ್ಕೆ ಅಟ್ಟುವಂತೆ ಎನ್ನ ಹುನ್ನಾರ ಹೂಡಿತ್ತು
ಅರಿವು ಆ ಚಣ ಎನ್ನಲಿ ಉದಿತಗೊಂಡಿತ್ತು
ಮಾಣಿಕ್ಯ ವಿಠಲನಿಗೆ ಹೂಹಾರ ಮಾಡಿತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ ಒಂದು ಆಸರೆ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೬ನೆಯ ಖಂಡ – ಸಮಯಸಾಫಲ್ಯ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…