ಗಣೇಶ ಪರ್ವ

ಜೀವನದ ಅಂಗಳದಲಿ ಬಂತು
ಮಂಗಳ ಮೂರ್ತಿ ಗಣೇಶ ಪರ್ವ
ಎತ್ತೆತ್ತ ನೋಡಲು ಸಡಗರ ಸಂಭ್ರಮ
ಎಲ್ಲೆಲ್ಲೂ ಮಂಗಳದ ನಿನಾದ ಸರ್ವ

ವಿದ್ಯೆಯ ಆದಿಪತಿ ಗಜಾನನ ದೇವ
ಮನೆ ಮಠಗಳಲಿ ಅವನದೆ ಶೃಂಗಾರ
ಹಾದಿ ಬೀದಿಗಳಲಿ ಮೆರವಣಿಗೆ ಝೇಂಕಾರ
ಜನಮನಗಳಲಿ ಅವನ ನೆನಪೇ ಬಂಗಾರ

ಅಕ್ಕರಗಳ ಶುಭಾರಂಭಕ್ಕೆ ಮತ್ತೆಲ್ಲದಕ್ಕು
ಮಂಗಲ ಕಾರ್‍ಯಗಳಲ್ಲಿ ವಿಘ್ನೇಶ್ವರ
ಆದರೆ ಜನರು ಅಪಾರ್ಥ ಮಾಡುತ್ತ
ದೇಣಿಗೆ ಬೇಡಿ ಆಗಿಹರು ವಿಘ್ನದಾಗರ

ಹಬ್ಬ ಆಚರಣೆ ಮುಂಚೆ ಬಾಳು ಕಲಿಯಲಿ
ಪೂಜೆಯೆಂಬುದು ತನುಮನ ಭಾವ ಇರಲಿ
ಬಿದ್ದವರನ್ನು ಎತ್ತಿಕೊಳ್ಳುವ ಧರ್ಮವಾಗಲಿ
ಮಾಣಿಕ್ಯ ವಿಠಲನಾಗುವುದೇ ಕರ್ಮವಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗುನೀನು
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೧ನೆಯೆ ಖಂಡ – ಸ್ವಾತಂತ್ರ್ಯ ಪ್ರೀತಿ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys