ಗಣೇಶ ಪರ್ವ

ಜೀವನದ ಅಂಗಳದಲಿ ಬಂತು
ಮಂಗಳ ಮೂರ್ತಿ ಗಣೇಶ ಪರ್ವ
ಎತ್ತೆತ್ತ ನೋಡಲು ಸಡಗರ ಸಂಭ್ರಮ
ಎಲ್ಲೆಲ್ಲೂ ಮಂಗಳದ ನಿನಾದ ಸರ್ವ

ವಿದ್ಯೆಯ ಆದಿಪತಿ ಗಜಾನನ ದೇವ
ಮನೆ ಮಠಗಳಲಿ ಅವನದೆ ಶೃಂಗಾರ
ಹಾದಿ ಬೀದಿಗಳಲಿ ಮೆರವಣಿಗೆ ಝೇಂಕಾರ
ಜನಮನಗಳಲಿ ಅವನ ನೆನಪೇ ಬಂಗಾರ

ಅಕ್ಕರಗಳ ಶುಭಾರಂಭಕ್ಕೆ ಮತ್ತೆಲ್ಲದಕ್ಕು
ಮಂಗಲ ಕಾರ್‍ಯಗಳಲ್ಲಿ ವಿಘ್ನೇಶ್ವರ
ಆದರೆ ಜನರು ಅಪಾರ್ಥ ಮಾಡುತ್ತ
ದೇಣಿಗೆ ಬೇಡಿ ಆಗಿಹರು ವಿಘ್ನದಾಗರ

ಹಬ್ಬ ಆಚರಣೆ ಮುಂಚೆ ಬಾಳು ಕಲಿಯಲಿ
ಪೂಜೆಯೆಂಬುದು ತನುಮನ ಭಾವ ಇರಲಿ
ಬಿದ್ದವರನ್ನು ಎತ್ತಿಕೊಳ್ಳುವ ಧರ್ಮವಾಗಲಿ
ಮಾಣಿಕ್ಯ ವಿಠಲನಾಗುವುದೇ ಕರ್ಮವಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗುನೀನು
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೧ನೆಯೆ ಖಂಡ – ಸ್ವಾತಂತ್ರ್ಯ ಪ್ರೀತಿ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…