ಗಣೇಶ ಪರ್ವ

ಜೀವನದ ಅಂಗಳದಲಿ ಬಂತು
ಮಂಗಳ ಮೂರ್ತಿ ಗಣೇಶ ಪರ್ವ
ಎತ್ತೆತ್ತ ನೋಡಲು ಸಡಗರ ಸಂಭ್ರಮ
ಎಲ್ಲೆಲ್ಲೂ ಮಂಗಳದ ನಿನಾದ ಸರ್ವ

ವಿದ್ಯೆಯ ಆದಿಪತಿ ಗಜಾನನ ದೇವ
ಮನೆ ಮಠಗಳಲಿ ಅವನದೆ ಶೃಂಗಾರ
ಹಾದಿ ಬೀದಿಗಳಲಿ ಮೆರವಣಿಗೆ ಝೇಂಕಾರ
ಜನಮನಗಳಲಿ ಅವನ ನೆನಪೇ ಬಂಗಾರ

ಅಕ್ಕರಗಳ ಶುಭಾರಂಭಕ್ಕೆ ಮತ್ತೆಲ್ಲದಕ್ಕು
ಮಂಗಲ ಕಾರ್‍ಯಗಳಲ್ಲಿ ವಿಘ್ನೇಶ್ವರ
ಆದರೆ ಜನರು ಅಪಾರ್ಥ ಮಾಡುತ್ತ
ದೇಣಿಗೆ ಬೇಡಿ ಆಗಿಹರು ವಿಘ್ನದಾಗರ

ಹಬ್ಬ ಆಚರಣೆ ಮುಂಚೆ ಬಾಳು ಕಲಿಯಲಿ
ಪೂಜೆಯೆಂಬುದು ತನುಮನ ಭಾವ ಇರಲಿ
ಬಿದ್ದವರನ್ನು ಎತ್ತಿಕೊಳ್ಳುವ ಧರ್ಮವಾಗಲಿ
ಮಾಣಿಕ್ಯ ವಿಠಲನಾಗುವುದೇ ಕರ್ಮವಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗುನೀನು
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೧ನೆಯೆ ಖಂಡ – ಸ್ವಾತಂತ್ರ್ಯ ಪ್ರೀತಿ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…