ನಿನ್ನ ಕೆಂದುಟಿಯಿಂದ

ನಿನ್ನ ಕೆಂದುಟಿಯಿಂದ ಬರೆ ಪ್ರೇಮ ಕಾವ್ಯವನು
ತೆರೆದಿರುವ ನನ್ನೆದೆಯ ಹಾಳೆ ಮೇಲೆ
ಭಾವಗೀತೆಯ ಮೀರಿ ಮಹಾಕಾವ್ಯ ಮೂಡಲಿ
ಅದ ಓದಿ ದಾಟುವೆನು ಜಗದ ಎಲ್ಲೆ //ಪ//

ಗಿಳಿ ಕೋಗಿಲೆ ಬೇಡ ನಿನ್ನ ಹಾಡಿನ ಎದುರು
ನವಿಲ ನರ್ತನವೇಕೆ ನೀನು ನಡೆವಾಗ
ಚುಕ್ಕಿ ಚಂದ್ರಮರೇಕೆ ನೀ ಕಣ್ಣು ತೆರೆದಾಗ
ಬೆಳದಿಂಗಳು ಬೇಡ ನೀನೆ ಇರುವಾಗ

ಹುಬ್ಬು ಹಾರಿಸಬೇಡ ರೆಪ್ಪೆ ಬಡಿಯಲುಬೇಡ
ಹಕ್ಕಿ ಸಹ ಗರಿ ಬಿಚ್ಚಿ ಮೇಲೆ ಹಾರಲಿ
ತುಟಿಯ ಕೊಂಕಿಸುವಾಗ ತಾವರೆಯು ನಿಸ್ತೇಜ
ಚೆಲುವ ಪ್ರಕೃತಿ ಮೇಲೆ ಕರುಣೆ ಇರಲಿ

ನಿನಗಿಲ್ಲ ಉಪಮಾನ ರೂಪಕವು ಸಹ ಇಲ್ಲ
ನಿನ್ನ ಸಂಗದ ಬಲವೆ ಕಾವ್ಯ ಸ್ಫೂರ್ತಿ
ಬರೆದ ಕಾವ್ಯಕೆ ನಾನು ಲಿಪಿಕಾರ, ಕವಿ ನೀನು
ಇದು ಅಲ್ಲವೆ ನಿನ್ನ ಪ್ರೀತಿ ನೀತಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಮುಂಜಾವಿನಲಿ
Next post ಕನ್ನಡ ಮಾಧ್ಯಮ : ಸಂವಿಧಾನದ ಸುತ್ತ ವ್ಯಾಖ್ಯಾನದ ಹುತ್ತ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…