Home / ಕಥೆ / ಕಿರು ಕಥೆ / ಪ್ರಾಮಾಣಿಕ ಅನಿಸಿಕೆ

ಪ್ರಾಮಾಣಿಕ ಅನಿಸಿಕೆ

ಸಂಜೆ ಸಮಯ.

ಅವನು ಒಳಗೆ ಬಂದ. ತನ್ನ ಮಾದಕ ನೋಟದಿಂದ ಅವಳು ಅವನನ್ನು ಬಾಗಿಲಲ್ಲಿಯೇ ಸ್ವಾಗತಿಸಿದಳು. ಅವಳ ಲಿಪ್‌ಸ್ಟಿಕ್ ತುಟಿ, ಪೌಡರ್‍ ಮೆತ್ತಿದ ಕೆನ್ನೆಯ ಗುಳಿ ಅವನನ್ನು ರೋಮಾಂಚನಗೊಳಿಸಿದವು. ಆಕೆಯ ತುರುಬು ಶೃಂಗರಿಸಿದ್ದ ಮಲ್ಲಿಗೆಯ ಗಜರಾವನ್ನು ಅವನು ಮೂಸಿದ.

ಪಲ್ಲಂಗದ ಮೇಲೆ ಕುಳಿತುಕೊಳ್ಳುತ್ತ ಅವಳನ್ನು ಬರಸೆಳೆದು ತಬ್ಬಿಕೊಂಡು ಇಡೀ ಮೈಯನನ್ನು ಮುದ್ದಿಸತೊಡಗಿದ. ಅವನೊಂದಿಗೆ ಅವಳೂ ತೀವ್ರವಾಗಿ ಸ್ಪಂದಿಸತೊಡಗಿದಳು.

ಅವಳ ದೇಹ ಸೊಬಗಿಗೆ ಸಂಪೂರ್ಣ ಸೋತುಹೋದ ಅವನು ಉತ್ಕಟವಾಗಿ ಉಲಿತ “ನೀನಿಲ್ಲದ ಪ್ರತಿಯೊಂದು ಕ್ಷಣಗಳು ನನಗೆ ಶೂನ್ಯ.”

“ನನಗೂ ಅಷ್ಟೆ” ಆಕೆ ಮೋಹಕವಾಗಿ ಪ್ರತಿಕ್ರಿಯಿಸಿದಳು.

“ನನ್ನ ನಿನ್ನ ಸಂಬಂಧ ಜನ್ಮಾಂತರದ್ದು ಅನಿಸುವುದು.”

“ಹೌದು”.

“ನನ್ನ ಹೆಂಡತಿಯಲ್ಲಿ ಇಲ್ಲದ ಆಕರ್ಷಣೆ ನಿನ್ನಲ್ಲಿದೆ.”

“ಎಲ್ಲರೂ ಹಾಗೆ ಹೇಳುವರು.”

“ಎಲ್ಲರಂತಲ್ಲ ನಾನು. ನಿನ್ನನ್ನು ತುಂಬಾ ಇಷ್ಟಪಡುತ್ತೇನೆ.”

“ನಾನೂ ಅಷ್ಟೇ.”

“ನಿನಗಾಗಿ ನನ್ನ ಹೆಂಡತಿಯನ್ನು ಬಿಡುತ್ತೇನೆ ನಾನು.”

“ಏಕೆ?”

“ನನ್ನೆದೆಯಲ್ಲಿ ನೀನು ಹೆಪ್ಪುಗಟ್ಟಿರುವೆ.”

ಆಕೆ ಮಾತನಾಡದೆ ಅವನೆದೆಯ ಮೇಲೆ ಒರಗಿ ತನ್ನ ಕಣ್ಣು ರೆಪ್ಪೆ ಪಿಳುಕಿಸಿದಳು.

“ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ.”

ಅವಳು ಉತ್ಸಾಹದಿಂದ ಕೆನ್ನೆ ಕುಣಿಸಿ ನಕ್ಕಳು.

“ನೀನು…..?” ಅವನು ಕೇಳಿದ.

“ನಾನು ನಿನ್ನ ಹಾಗೆ ಸುಳ್ಳು ಹೇಳುವುದಿಲ್ಲ” ಆಕೆ ಎದ್ದು ಕುಳಿತಳು.

“ಅಂದರೆ….?” ಗಲಿಬಿಲಿಯಾಗಿ ಕೇಳಿದ ಅವನು.

“ನಾನು ನಿನ್ನ ಹಣವನ್ನು ಪ್ರೀತಿಸುತ್ತೇನೆ” ಎದೆಯ ಮಾತು ಹೇಳಿದಳಾಕೆ.

ಆಕಾಶದಿಂದ ಬಿದ್ದವನಂತೆ ತತ್ತರಿಸಿದ ಅವನು ಭ್ರಮೆಯ ಪದರುಗಳಿಂದ ಹೊರಬಂದಂತೆ ಕಣ್ಣು ಹಿಗ್ಗಿಸಿ ಹೇಳಿದ “ನೀನು ಪಕ್ಕಾ ವೇಶ್ಯೆ!”

“ಅದು ಜಗತ್ತಿಗೆ ಗೊತ್ತು” ಎಂದಾಕೆ ಅವನು ಮೂಸಿದ ಗಜರಾ ಕಿತ್ತೆಸೆದು ಬಾಗಿಲಿನತ್ತ ಒಗೆದಳು.

*****

 

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...