Home / ಕಥೆ / ಕಿರು ಕಥೆ / ಪ್ರಾಮಾಣಿಕ ಅನಿಸಿಕೆ

ಪ್ರಾಮಾಣಿಕ ಅನಿಸಿಕೆ

ಸಂಜೆ ಸಮಯ.

ಅವನು ಒಳಗೆ ಬಂದ. ತನ್ನ ಮಾದಕ ನೋಟದಿಂದ ಅವಳು ಅವನನ್ನು ಬಾಗಿಲಲ್ಲಿಯೇ ಸ್ವಾಗತಿಸಿದಳು. ಅವಳ ಲಿಪ್‌ಸ್ಟಿಕ್ ತುಟಿ, ಪೌಡರ್‍ ಮೆತ್ತಿದ ಕೆನ್ನೆಯ ಗುಳಿ ಅವನನ್ನು ರೋಮಾಂಚನಗೊಳಿಸಿದವು. ಆಕೆಯ ತುರುಬು ಶೃಂಗರಿಸಿದ್ದ ಮಲ್ಲಿಗೆಯ ಗಜರಾವನ್ನು ಅವನು ಮೂಸಿದ.

ಪಲ್ಲಂಗದ ಮೇಲೆ ಕುಳಿತುಕೊಳ್ಳುತ್ತ ಅವಳನ್ನು ಬರಸೆಳೆದು ತಬ್ಬಿಕೊಂಡು ಇಡೀ ಮೈಯನನ್ನು ಮುದ್ದಿಸತೊಡಗಿದ. ಅವನೊಂದಿಗೆ ಅವಳೂ ತೀವ್ರವಾಗಿ ಸ್ಪಂದಿಸತೊಡಗಿದಳು.

ಅವಳ ದೇಹ ಸೊಬಗಿಗೆ ಸಂಪೂರ್ಣ ಸೋತುಹೋದ ಅವನು ಉತ್ಕಟವಾಗಿ ಉಲಿತ “ನೀನಿಲ್ಲದ ಪ್ರತಿಯೊಂದು ಕ್ಷಣಗಳು ನನಗೆ ಶೂನ್ಯ.”

“ನನಗೂ ಅಷ್ಟೆ” ಆಕೆ ಮೋಹಕವಾಗಿ ಪ್ರತಿಕ್ರಿಯಿಸಿದಳು.

“ನನ್ನ ನಿನ್ನ ಸಂಬಂಧ ಜನ್ಮಾಂತರದ್ದು ಅನಿಸುವುದು.”

“ಹೌದು”.

“ನನ್ನ ಹೆಂಡತಿಯಲ್ಲಿ ಇಲ್ಲದ ಆಕರ್ಷಣೆ ನಿನ್ನಲ್ಲಿದೆ.”

“ಎಲ್ಲರೂ ಹಾಗೆ ಹೇಳುವರು.”

“ಎಲ್ಲರಂತಲ್ಲ ನಾನು. ನಿನ್ನನ್ನು ತುಂಬಾ ಇಷ್ಟಪಡುತ್ತೇನೆ.”

“ನಾನೂ ಅಷ್ಟೇ.”

“ನಿನಗಾಗಿ ನನ್ನ ಹೆಂಡತಿಯನ್ನು ಬಿಡುತ್ತೇನೆ ನಾನು.”

“ಏಕೆ?”

“ನನ್ನೆದೆಯಲ್ಲಿ ನೀನು ಹೆಪ್ಪುಗಟ್ಟಿರುವೆ.”

ಆಕೆ ಮಾತನಾಡದೆ ಅವನೆದೆಯ ಮೇಲೆ ಒರಗಿ ತನ್ನ ಕಣ್ಣು ರೆಪ್ಪೆ ಪಿಳುಕಿಸಿದಳು.

“ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ.”

ಅವಳು ಉತ್ಸಾಹದಿಂದ ಕೆನ್ನೆ ಕುಣಿಸಿ ನಕ್ಕಳು.

“ನೀನು…..?” ಅವನು ಕೇಳಿದ.

“ನಾನು ನಿನ್ನ ಹಾಗೆ ಸುಳ್ಳು ಹೇಳುವುದಿಲ್ಲ” ಆಕೆ ಎದ್ದು ಕುಳಿತಳು.

“ಅಂದರೆ….?” ಗಲಿಬಿಲಿಯಾಗಿ ಕೇಳಿದ ಅವನು.

“ನಾನು ನಿನ್ನ ಹಣವನ್ನು ಪ್ರೀತಿಸುತ್ತೇನೆ” ಎದೆಯ ಮಾತು ಹೇಳಿದಳಾಕೆ.

ಆಕಾಶದಿಂದ ಬಿದ್ದವನಂತೆ ತತ್ತರಿಸಿದ ಅವನು ಭ್ರಮೆಯ ಪದರುಗಳಿಂದ ಹೊರಬಂದಂತೆ ಕಣ್ಣು ಹಿಗ್ಗಿಸಿ ಹೇಳಿದ “ನೀನು ಪಕ್ಕಾ ವೇಶ್ಯೆ!”

“ಅದು ಜಗತ್ತಿಗೆ ಗೊತ್ತು” ಎಂದಾಕೆ ಅವನು ಮೂಸಿದ ಗಜರಾ ಕಿತ್ತೆಸೆದು ಬಾಗಿಲಿನತ್ತ ಒಗೆದಳು.

*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...