ಪ್ರಾಮಾಣಿಕ ಅನಿಸಿಕೆ

ಸಂಜೆ ಸಮಯ.

ಅವನು ಒಳಗೆ ಬಂದ. ತನ್ನ ಮಾದಕ ನೋಟದಿಂದ ಅವಳು ಅವನನ್ನು ಬಾಗಿಲಲ್ಲಿಯೇ ಸ್ವಾಗತಿಸಿದಳು. ಅವಳ ಲಿಪ್‌ಸ್ಟಿಕ್ ತುಟಿ, ಪೌಡರ್‍ ಮೆತ್ತಿದ ಕೆನ್ನೆಯ ಗುಳಿ ಅವನನ್ನು ರೋಮಾಂಚನಗೊಳಿಸಿದವು. ಆಕೆಯ ತುರುಬು ಶೃಂಗರಿಸಿದ್ದ ಮಲ್ಲಿಗೆಯ ಗಜರಾವನ್ನು ಅವನು ಮೂಸಿದ.

ಪಲ್ಲಂಗದ ಮೇಲೆ ಕುಳಿತುಕೊಳ್ಳುತ್ತ ಅವಳನ್ನು ಬರಸೆಳೆದು ತಬ್ಬಿಕೊಂಡು ಇಡೀ ಮೈಯನನ್ನು ಮುದ್ದಿಸತೊಡಗಿದ. ಅವನೊಂದಿಗೆ ಅವಳೂ ತೀವ್ರವಾಗಿ ಸ್ಪಂದಿಸತೊಡಗಿದಳು.

ಅವಳ ದೇಹ ಸೊಬಗಿಗೆ ಸಂಪೂರ್ಣ ಸೋತುಹೋದ ಅವನು ಉತ್ಕಟವಾಗಿ ಉಲಿತ “ನೀನಿಲ್ಲದ ಪ್ರತಿಯೊಂದು ಕ್ಷಣಗಳು ನನಗೆ ಶೂನ್ಯ.”

“ನನಗೂ ಅಷ್ಟೆ” ಆಕೆ ಮೋಹಕವಾಗಿ ಪ್ರತಿಕ್ರಿಯಿಸಿದಳು.

“ನನ್ನ ನಿನ್ನ ಸಂಬಂಧ ಜನ್ಮಾಂತರದ್ದು ಅನಿಸುವುದು.”

“ಹೌದು”.

“ನನ್ನ ಹೆಂಡತಿಯಲ್ಲಿ ಇಲ್ಲದ ಆಕರ್ಷಣೆ ನಿನ್ನಲ್ಲಿದೆ.”

“ಎಲ್ಲರೂ ಹಾಗೆ ಹೇಳುವರು.”

“ಎಲ್ಲರಂತಲ್ಲ ನಾನು. ನಿನ್ನನ್ನು ತುಂಬಾ ಇಷ್ಟಪಡುತ್ತೇನೆ.”

“ನಾನೂ ಅಷ್ಟೇ.”

“ನಿನಗಾಗಿ ನನ್ನ ಹೆಂಡತಿಯನ್ನು ಬಿಡುತ್ತೇನೆ ನಾನು.”

“ಏಕೆ?”

“ನನ್ನೆದೆಯಲ್ಲಿ ನೀನು ಹೆಪ್ಪುಗಟ್ಟಿರುವೆ.”

ಆಕೆ ಮಾತನಾಡದೆ ಅವನೆದೆಯ ಮೇಲೆ ಒರಗಿ ತನ್ನ ಕಣ್ಣು ರೆಪ್ಪೆ ಪಿಳುಕಿಸಿದಳು.

“ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ.”

ಅವಳು ಉತ್ಸಾಹದಿಂದ ಕೆನ್ನೆ ಕುಣಿಸಿ ನಕ್ಕಳು.

“ನೀನು…..?” ಅವನು ಕೇಳಿದ.

“ನಾನು ನಿನ್ನ ಹಾಗೆ ಸುಳ್ಳು ಹೇಳುವುದಿಲ್ಲ” ಆಕೆ ಎದ್ದು ಕುಳಿತಳು.

“ಅಂದರೆ….?” ಗಲಿಬಿಲಿಯಾಗಿ ಕೇಳಿದ ಅವನು.

“ನಾನು ನಿನ್ನ ಹಣವನ್ನು ಪ್ರೀತಿಸುತ್ತೇನೆ” ಎದೆಯ ಮಾತು ಹೇಳಿದಳಾಕೆ.

ಆಕಾಶದಿಂದ ಬಿದ್ದವನಂತೆ ತತ್ತರಿಸಿದ ಅವನು ಭ್ರಮೆಯ ಪದರುಗಳಿಂದ ಹೊರಬಂದಂತೆ ಕಣ್ಣು ಹಿಗ್ಗಿಸಿ ಹೇಳಿದ “ನೀನು ಪಕ್ಕಾ ವೇಶ್ಯೆ!”

“ಅದು ಜಗತ್ತಿಗೆ ಗೊತ್ತು” ಎಂದಾಕೆ ಅವನು ಮೂಸಿದ ಗಜರಾ ಕಿತ್ತೆಸೆದು ಬಾಗಿಲಿನತ್ತ ಒಗೆದಳು.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೪೨
Next post ಕ್ಯಾಬಿನ್ ನಂ.೬

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…