ದೈವಕ್ಕೆ ಯಾವ ಬಣ್ಣ?

ಎರಡು ಗುಡಿ ಗೋಪುರಗಳು ಒಂದರ ಹಿಂದೆ ಒಂದು ಇತ್ತು. ಒಂದರಲ್ಲಿ ಬಿಳಿ ಪಾರಿವಾಳಗಳು, ಇನ್ನೊಂದು ಗೋಪುರದಲ್ಲಿ ಕರಿ ಬಣ್ಣದ ಪಾರಿವಾಳಗಳು ವಾಸವಾಗಿದ್ದವು. ಎರಡು ಗುಂಪಿನ ಪಾರಿವಾಳಗಳು ಆಗಸದಲ್ಲಿ ಹಾರಾಡುವಾಗ ತಮ್ಮ ದೇವಾಲಯದ, ದೈವದ ಹೆಮ್ಮೆ ಸಾರುತ್ತಿದ್ದವು.

“ನಮ್ಮ ದೇವರ ಬಣ್ಣ ಬಿಳಿ” ಎಂದು ಬಿಳಿ ಪಾರಿವಾಳಗಳು ಹೇಳಿದವು.

ಕರಿ ಪಾರಿವಾಳಗಳ ಗುಂಪು ಹೇಳಿತು “ನಮ್ಮ ದೇವರ ಬಣ್ಣ ಕಪ್ಪು” ಎಂದು ಒಂದಕ್ಕೊಂದು ರೆಕ್ಕೆ ಬಡಿದುಕೊಂಡು ಪಟ ಪಟ ವಾದ ಮಾಡುತಿದ್ದವು.

ಮೇಲೆ ಆಗಸದಲ್ಲಿ ಹಾರಾಡುತ್ತಿದ್ದ ದೊಡ್ಡ ಹಂಸ ಒಂದು, ಪಾರಿವಾಳಗಳೆ! ಜಗಳ ನಿಲ್ಲಿಸಿ, ದೇವರು ಬಿಳಿಯೂ ಅಲ್ಲ, ಕಪ್ಪು ಅಲ್ಲ ಅವನು ಆಗಸದಂತೆ ನೀಲಿ, ಭೂಮಿಯಂತೆ ಹಸಿರು” ಎಂದಿತು.

ಪಾರಿವಾಳಗಳು ಗುಟುರು ಹಾಕುತ್ತ ಹಂಸದ ಹೇಳಿಕೆಗೆ ತಲೆ ತೂಗಿದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲವಿದ್ದು ನಾವಿಷ್ಟಭಿಮಾನ ಶೂನ್ಯರಾಗಬಹುದೇ?
Next post ಸುಹೃದ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys