Home / ಕವನ / ಅನುವಾದ / ಸಾವು ಬಂದಾಗ

ಸಾವು ಬಂದಾಗ

ಸಾವು ಬಂದಾಗ ನಾನು ನಿನ್ನೊಡನೆ ಇರಲಿಲ್ಲ.
ಮುನಿಸಿಪಲ್ ಆಸ್ಪತ್ರೆ ನೀನಿದ್ದಕೊನೆಯ ಮನೆ :
ಬಿಳಿಯ ಬಣ್ಣದ ರೂಮು, ಮೂಲೆಯಲ್ಲಿ ಜೇಡರಬಲೆ,
ಚಕ್ಕೆ ಎದ್ದ ಗೋಡೆಯ ಬಣ್ಣ, ಉಪ್ಪಿನ ಕಾಯಿ ಬಾಟಲು,
ನಾಲ್ಕು ತಿಂಗಳು ಹಳೆಯ ವಾರಪತ್ರಿಕೆ, ಕಾಫಿ ಗಸಿ ಇದ್ದ ಎರಡು ಲೋಟ.
ಪಕ್ಕದ ಬೆಡ್ಡಿನಲ್ಲಿ ಕ್ಯಾನ್ಸರ್ ಬಂದ ಟೈಲರು.
ನಿನಗೆಷ್ಟು ವಯಸ್ಸೆಂದರೆ
ಸಾವೂ ಲೆಕ್ಕ ಇಡುವುದು ಮರೆತಿದೆ
ಎಂದು ಡಾಕ್ಬರು ಹೇಳುತಿದ್ದರು.
ನಿನಗೆಷ್ಟು ವಯಸ್ಸೆಂದರೆ
ನಿನ್ನ ಬೀದಿಯ ಮಕ್ಕಳು,
ಹಳ್ಳ ಬಿದ್ದ ಫುಟ್ ಪಾತಿನಲ್ಲಿ
ಕುಗ್ಗಿಕುಸಿದು ಬಿದ್ದ ಸಾಮ್ರಾಜ್ಯದ ಹಾಗೆ,
ನೀನು ಕಳೆದ ಶತಮಾನವೆನ್ನುತ್ತಿದ್ದರು.

ಸಾವು ಬಂದಾಗ ನಿನಗೆ ಯೌವನವೂ ಬಂತು :
ಇದ್ದಕ್ಕಿದ್ದಂತೆ ಬಾಲಭಾಷೆಯಲ್ಲಿ ಮಾತನಾಡಿದೆ,
ನಿನಗೂ ಬದುಕಿದ್ದವರಿಗೂ ನಡುವೆ ಇದ್ದ
ಬಿಳಿಯ ತೆರೆ ಗ್ಲೈಡರಿನ ರೆಕ್ಕೆಯಂತಿತ್ತು.
ನಿನ್ನ ನರಕ್ಕೆ ಚುಚ್ಚಿದ್ದ ಗ್ಲೊಕೋಸು ನಳಿಗೆ
ತೊದಲಿತು, ಚೆಜ್ಜಾದ ಮೇಲೆ ಕುಳಿತ ಪಾರಿವಾಳ
ಪತರ ಗುಟ್ಟಿತು. ನಿನ್ನ ಬಗ್ಗೆಯೇ ನೀನೇ
ಮಾತಾಡಿಕೊಳ್ಳುತ್ತಾ ಈ ಬೇಸತ್ತ ಜಾಗದಿಂದ
ಸಾವಿನ ನಾಡಿಗೆ ನಡೆದಿದ್ದೆ : ಹದಿನೆಂಟರ ಹರೆಯದ
ಹುಮ್ಮಸ್ಸಿನ ಯುವಕ, ವಿದ್ಯಾರ್ಥಿಗಳ ತಲೆಹರಟೆ
ಸಹಿಸದ ಮೂವತ್ತರ ಪ್ರಬುದ್ಧ ಜರ್‍ಮನ್ ಮೇಷ್ಟ್ರು,
ದಿನವೂ ಬೆಳಗ್ಗೆ ಒಂಟಿ ವಾಕಿಂಗ್ ಹೋಗುವ
ಪಿಂಚಣಿದಾರ, ನೀನು ಒಟ್ಟು ನಡೆದ ದೂರ ಲೆಕ್ಕ ಇಟ್ಟಿದ್ದರೆ
ಈ ಭೂಮಿಯಿಂದ ಸ್ವರ್‍ಗವನ್ನೆ ತಲುಪುತ್ತಿದ್ದಯೋ ಏನೋ.
ಸಾವನ್ನು ಸ್ವಾಗತಿಸಲು ನಿನ್ನ ನೀನೇ
ಮತ್ತೆಮೊದಲಿಂದ ಹೊಸಬನಾಗಿ ಮಾಡಿಕೊಂಡೆ.
ಹಾಲ್‍ನಲ್ಲಿ ಕಿಸಕ್ಕನೆ ಯಾತಕ್ಕೋ ನಕ್ಕು
ನಗು ಅದುಮಿಟ್ಟುಕೊಂಡ ನರ್ಸುಗಳು.
ಕಿಟಕಿ ಅಂಚಿನಲ್ಲಿ ಅನ್ನದ ಅಗುಳಿಗೆ
ಜಗಳವಾಡುವ ಗುಬ್ಬಚ್ಚಿಗಳು.
*****
ಮೂಲ: ಆಡಂ ಝಗಯೇವ್ಸ್‍ಕಿ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...