ಬಯಲ-ಪಾರಿಜಾತ

ಬೀದಿ ಗುಡಿಸುವ ಆ ಹುಡುಗಿ
ಬಯಲಲ್ಲಿ ಬುಟ್ಟಿ ಕಟ್ಟುವ ಪಾರಿಜಾತ
ಬೆಳ್ಳಂಬೆಳಿಗ್ಗೆ ಕಣ್ಣ ತುಂಬೆಲ್ಲಾ
ಕನಸು ಹೊತ್ತು ಕಸವ ರಸ ಮಾಡುತ್ತಾ
ಪಾದಕ್ಕೆ ಚುಚ್ಚಿದ ಪಿಂಗಾಣಿ ಗಾಜುಗಳ
ಮೆಲ್ಲಗೆ ಸವರಿ, ಮುಖ ಕಿವಿಚಿ ಸರಕ್ಕನೇ
ಎಳೆದು ಬಿಡುತ್ತಾಳೆ.

ಅವಳ ಮನ ದೀನತೆಯ
ಕಂದಕದಲ್ಲಿಯ ಮನೆ
ನಳನಳಿಸಿ ಚಿಗುರು ಚೆಲ್ಲುವ ಹಸ್ತವೆಲ್ಲ
ಬಿರುಸು ಕೊರಡಿನ ಹಾಗೆ
ಆದರೂ ನಾಳೆಯ ರಥವೇರುತ್ತಾಳೆ
ದಕ್ಕಿಸಿಕೊಂಡು
ಮನೋವೇಗದ ಕುದುರೆ ಕುಗ್ಗುವುದಿಲ್ಲ

ಪಾರಿಜಾತ ಹೂಗಳೇ
ಶ್ವೇತ ಸೀರೆಯ ತುಂಬೆಲ್ಲಾ
ಸಿಂಧೂರ ಬೈತಲೆಯ ನಡು ನಟ್ಟಿದೆ.
ಗಿಡದ ಬುಡದಲ್ಲಿ ಹೂ ಮಂಟಪ ಕಂಡು
ಉಲ್ಲಸಿತ ವದನ.

ಕಟ್ಟುತ್ತಾ ಹಾಡು, ಪೋಣಿಸಿ ಮಾಲೆ
ಮರೆಯಾಗುತ್ತದೆ ಪಾರಿಜಾತ
ಮಂದಾರ ಪರ್ವತದ ಮಗ್ಗುಲಿಗೆ
ಛೀದ್ರಗೊಂಡ ಭಗ್ನ ಅವಶೇಷಗಳ
ನಡುವೆ ಮಂಡಿಯೂರಿ ರೋಧಿಸುವ ಮುಖ
ನಿರಾಶೆ ಮಡಿಲ ಒಡವೆ ವ್ಯಥೆ ಉಸುರುತ್ತವೆ

ಹೆಜ್ಜೆಗಳು ಕಿತ್ತೇಳುವುದಿಲ್ಲ
ಕಂಪು ನಾಸಿಕದ ಆಳ ಸೇರಿದೆ
ಪುಟಿದೆದ್ದಿವೆ ಗಿಡದ ಮೈದುಂಬಿ
ಕೆಂಪು ಹೊಕ್ಕಳ ಹೊತ್ತ
ಬಿಳಿಮೈಯ ಪಾರಿಜಾತಗಳು
ಫಳಫಳನೆ ಹೊಳೆಯುತ್ತಿವೆ..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೭
Next post ಗೋಡ್ಸೆ ಗುಣ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…