Home / ಕವನ / ಕವಿತೆ / ಬಯಲ-ಪಾರಿಜಾತ

ಬಯಲ-ಪಾರಿಜಾತ

ಬೀದಿ ಗುಡಿಸುವ ಆ ಹುಡುಗಿ
ಬಯಲಲ್ಲಿ ಬುಟ್ಟಿ ಕಟ್ಟುವ ಪಾರಿಜಾತ
ಬೆಳ್ಳಂಬೆಳಿಗ್ಗೆ ಕಣ್ಣ ತುಂಬೆಲ್ಲಾ
ಕನಸು ಹೊತ್ತು ಕಸವ ರಸ ಮಾಡುತ್ತಾ
ಪಾದಕ್ಕೆ ಚುಚ್ಚಿದ ಪಿಂಗಾಣಿ ಗಾಜುಗಳ
ಮೆಲ್ಲಗೆ ಸವರಿ, ಮುಖ ಕಿವಿಚಿ ಸರಕ್ಕನೇ
ಎಳೆದು ಬಿಡುತ್ತಾಳೆ.

ಅವಳ ಮನ ದೀನತೆಯ
ಕಂದಕದಲ್ಲಿಯ ಮನೆ
ನಳನಳಿಸಿ ಚಿಗುರು ಚೆಲ್ಲುವ ಹಸ್ತವೆಲ್ಲ
ಬಿರುಸು ಕೊರಡಿನ ಹಾಗೆ
ಆದರೂ ನಾಳೆಯ ರಥವೇರುತ್ತಾಳೆ
ದಕ್ಕಿಸಿಕೊಂಡು
ಮನೋವೇಗದ ಕುದುರೆ ಕುಗ್ಗುವುದಿಲ್ಲ

ಪಾರಿಜಾತ ಹೂಗಳೇ
ಶ್ವೇತ ಸೀರೆಯ ತುಂಬೆಲ್ಲಾ
ಸಿಂಧೂರ ಬೈತಲೆಯ ನಡು ನಟ್ಟಿದೆ.
ಗಿಡದ ಬುಡದಲ್ಲಿ ಹೂ ಮಂಟಪ ಕಂಡು
ಉಲ್ಲಸಿತ ವದನ.

ಕಟ್ಟುತ್ತಾ ಹಾಡು, ಪೋಣಿಸಿ ಮಾಲೆ
ಮರೆಯಾಗುತ್ತದೆ ಪಾರಿಜಾತ
ಮಂದಾರ ಪರ್ವತದ ಮಗ್ಗುಲಿಗೆ
ಛೀದ್ರಗೊಂಡ ಭಗ್ನ ಅವಶೇಷಗಳ
ನಡುವೆ ಮಂಡಿಯೂರಿ ರೋಧಿಸುವ ಮುಖ
ನಿರಾಶೆ ಮಡಿಲ ಒಡವೆ ವ್ಯಥೆ ಉಸುರುತ್ತವೆ

ಹೆಜ್ಜೆಗಳು ಕಿತ್ತೇಳುವುದಿಲ್ಲ
ಕಂಪು ನಾಸಿಕದ ಆಳ ಸೇರಿದೆ
ಪುಟಿದೆದ್ದಿವೆ ಗಿಡದ ಮೈದುಂಬಿ
ಕೆಂಪು ಹೊಕ್ಕಳ ಹೊತ್ತ
ಬಿಳಿಮೈಯ ಪಾರಿಜಾತಗಳು
ಫಳಫಳನೆ ಹೊಳೆಯುತ್ತಿವೆ..
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...