Home / ಕವನ / ಅನುವಾದ / ನಾಲ್ಕು ಪುಟ್ಟ ಪದ್ಯಗಳು

ನಾಲ್ಕು ಪುಟ್ಟ ಪದ್ಯಗಳು

ನಡು ಹಗಲಲ್ಲಿ ಹಚ್ಚಿಟ್ಟ ದೀಪ-
ಬೆಳಕಿನಲ್ಲಿ ಕಳೆದುಹೋದ ಬೆಳಕು.
ಬೆಳಕಿನ ಸಿದ್ಧಾಂತ ಮುರಿದು ಬಿತ್ತು :
ದೊಡ್ಡ ಬೆಳಕು ಹಿಮ್ಮೆಟ್ಟಿದೆ
ಹಣ್ಣಿನಿಂದ ಮರ ಬಿದ್ದ ಹಾಗೆ.

ಗಂಟೆಯ ತುಂಬ ಗಾಳಿ,
ಬಾರಿಸದಿದ್ದರೂ.
ಹಕ್ಕಿಯ ಮೈಯ ತುಂಬ ಹಾರಾಟ,
ನಿಶ್ಚಲವಾಗಿದ್ದರೂ.
ಆಕಾಶದ ತುಂಬ ಮೋಡ,
ಒಂಟಿಯಾಗಿದ್ದರೂ,
ಶಬ್ದದ ತುಂಬ ಧ್ವನಿ,
ಯಾರೂ ಮಾತಾಡದಿದ್ದರೂ.
ಎಲ್ಲರ ಎಲ್ಲದರ ತುಂಬ ಓಟ,
ರಸ್ತೆಗಳಿಲ್ಲದಿದ್ದರೂ.
ಎಲ್ಲ ಧಾವಿಸುತ್ತಿವೆ
ಆಗುವುದಕ್ಕೆ.

ನನ್ನ ನೆರಳು ನನಗೆ ವಿಧೇಯತೆ ಕಲಿಸಿದೆ.
ರೈಲಿನ ಮುರುಕು ಸೀಟು
ಸ್ಮಶಾನದ ಗೋಡೆ
ನಗರದ ಕಳ್ಳ ಗಲ್ಲಿ ಎಲ್ಲೆಡೆ
ನನ್ನ ಬೆಂಬಿಡದೆ ಬಂದಿದೆ.
ಮೈ ಹೇಗೇ ಇದ್ದರೂ
ನರಳು ಹೆಜ್ಜೆ ಹೆಜ್ಜೆ ಅನುಕರಿಸಿದೆ.
ಮೂಲೆ ಮುಡುಕುಗಳಿಗೆ ನಡೆದಿದೆ.
ಪ್ರಶ್ನೆಗಳಿಗೆ ಉತ್ತರಿಸದೆ ಸುಮ್ಮನಿದೆ.
ನನ್ನ ನೆರಳು ಇತರ ನೆರಳುಗಳನ್ನು
ಅಳವಡಿಸಿಕೊಳ್ಳಲು ಕಲಿಸಿದೆ.
ನನ್ನ ಮಟ್ಟ ನನಗೆ ತೋರಿಸಿದೆ.

ಪ್ರತಿ ಪದವೂ ಒಂದೊಂದು ಅನುಮಾನ
ಪ್ರತಿ ಮೌನವೂ ಒಂದೊಂದು ಸಂಶಯ.
ಆದರೂ ಇವುಗಳ ಹೆಣಿಗೆಯಲ್ಲಿ ಉಸಿರಾಡೋಣ.
ನಿದ್ದೆಯೆಂದರೆ ಮುಳುಗುವುದು.
ಎಚ್ಚರವೆಂದರೆ ಮತ್ತೆ ಮುಳುಗುವುದು.
ಆದರೂ ಇವುಗಳ ಹೆಣಿಗೆಯಲ್ಲಿ ಎಚ್ಚರಾಗೋಣ.
ಬದುಕೆಂದರೆ ಮಾಯವಾಗುವುದು
ಸಾವೆಂದರೆ ರೂಪಾಂತರವಾಗುವುದು
ಆದರೂ ಇವುಗಳ ಹೆಣಿಗೆಯಲ್ಲಿ
ಶೂನ್ಯದಲ್ಲೊಂದು ರುಜು ಹಾಕೋಣ.
*****
ಮೂಲ: ರಾಬರ್ಟೋ ಜು‌ಅರೋಝ್

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...