Home / ಕವನ / ಅನುವಾದ / ನಾಲ್ಕು ಪುಟ್ಟ ಪದ್ಯಗಳು

ನಾಲ್ಕು ಪುಟ್ಟ ಪದ್ಯಗಳು

ನಡು ಹಗಲಲ್ಲಿ ಹಚ್ಚಿಟ್ಟ ದೀಪ-
ಬೆಳಕಿನಲ್ಲಿ ಕಳೆದುಹೋದ ಬೆಳಕು.
ಬೆಳಕಿನ ಸಿದ್ಧಾಂತ ಮುರಿದು ಬಿತ್ತು :
ದೊಡ್ಡ ಬೆಳಕು ಹಿಮ್ಮೆಟ್ಟಿದೆ
ಹಣ್ಣಿನಿಂದ ಮರ ಬಿದ್ದ ಹಾಗೆ.

ಗಂಟೆಯ ತುಂಬ ಗಾಳಿ,
ಬಾರಿಸದಿದ್ದರೂ.
ಹಕ್ಕಿಯ ಮೈಯ ತುಂಬ ಹಾರಾಟ,
ನಿಶ್ಚಲವಾಗಿದ್ದರೂ.
ಆಕಾಶದ ತುಂಬ ಮೋಡ,
ಒಂಟಿಯಾಗಿದ್ದರೂ,
ಶಬ್ದದ ತುಂಬ ಧ್ವನಿ,
ಯಾರೂ ಮಾತಾಡದಿದ್ದರೂ.
ಎಲ್ಲರ ಎಲ್ಲದರ ತುಂಬ ಓಟ,
ರಸ್ತೆಗಳಿಲ್ಲದಿದ್ದರೂ.
ಎಲ್ಲ ಧಾವಿಸುತ್ತಿವೆ
ಆಗುವುದಕ್ಕೆ.

ನನ್ನ ನೆರಳು ನನಗೆ ವಿಧೇಯತೆ ಕಲಿಸಿದೆ.
ರೈಲಿನ ಮುರುಕು ಸೀಟು
ಸ್ಮಶಾನದ ಗೋಡೆ
ನಗರದ ಕಳ್ಳ ಗಲ್ಲಿ ಎಲ್ಲೆಡೆ
ನನ್ನ ಬೆಂಬಿಡದೆ ಬಂದಿದೆ.
ಮೈ ಹೇಗೇ ಇದ್ದರೂ
ನರಳು ಹೆಜ್ಜೆ ಹೆಜ್ಜೆ ಅನುಕರಿಸಿದೆ.
ಮೂಲೆ ಮುಡುಕುಗಳಿಗೆ ನಡೆದಿದೆ.
ಪ್ರಶ್ನೆಗಳಿಗೆ ಉತ್ತರಿಸದೆ ಸುಮ್ಮನಿದೆ.
ನನ್ನ ನೆರಳು ಇತರ ನೆರಳುಗಳನ್ನು
ಅಳವಡಿಸಿಕೊಳ್ಳಲು ಕಲಿಸಿದೆ.
ನನ್ನ ಮಟ್ಟ ನನಗೆ ತೋರಿಸಿದೆ.

ಪ್ರತಿ ಪದವೂ ಒಂದೊಂದು ಅನುಮಾನ
ಪ್ರತಿ ಮೌನವೂ ಒಂದೊಂದು ಸಂಶಯ.
ಆದರೂ ಇವುಗಳ ಹೆಣಿಗೆಯಲ್ಲಿ ಉಸಿರಾಡೋಣ.
ನಿದ್ದೆಯೆಂದರೆ ಮುಳುಗುವುದು.
ಎಚ್ಚರವೆಂದರೆ ಮತ್ತೆ ಮುಳುಗುವುದು.
ಆದರೂ ಇವುಗಳ ಹೆಣಿಗೆಯಲ್ಲಿ ಎಚ್ಚರಾಗೋಣ.
ಬದುಕೆಂದರೆ ಮಾಯವಾಗುವುದು
ಸಾವೆಂದರೆ ರೂಪಾಂತರವಾಗುವುದು
ಆದರೂ ಇವುಗಳ ಹೆಣಿಗೆಯಲ್ಲಿ
ಶೂನ್ಯದಲ್ಲೊಂದು ರುಜು ಹಾಕೋಣ.
*****
ಮೂಲ: ರಾಬರ್ಟೋ ಜು‌ಅರೋಝ್

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...