ಸುತ್ತದಿರಿ ಸಂಕೋಲೆ
ಅಂಗಾಂಗಗಳ ಮೇಲೆ
ಹಾರಲಿ ಅವಳು
ನಿಮ್ಮಂತೆ ಮುಗುದೆ.
ಸ್ವಚ್ಛಂದತೆಯ ಆನಂದ
ಪಡೆಯಲಿ ಬಿಡಿ
ಇರಲಿ ಅವಳಿಗೂ
ಕೊಂಚ ಎಡೆ
ನತ್ತಿನಲಿ ಮೂಗುತಿ
ಕಾಲಲ್ಲಿ ಉಂಗುರ ಖಡುಗ
ಕೈಯಲ್ಲಿ ಬಳೆ
ತಲೆಗೆ ಮಲ್ಲಿಗೆಯ ದಂಡೆ
ತಾಲೀಮು ತಂಗಿಗೆ
ಹುಟ್ಟುತ್ತಲೇ ತಡೆದುಕೊಳ್ಳಲು
ಹೊರೆ ಭಾರ.
ಗರತಿ ಪಟ್ಟದ ಗದ್ಯಗಳ
ಊರುಹೊಡೆಸಿ
ಮುತೈದೆ ಮಂಗಳೆ ಎಂದೆನಿಸಿ
ಕಟ್ಟಿ ಹಾಕದಿರಿ
ಅಂತರಂಗದ ಬಯಕೆಗಳ
ವ್ಯಕ್ತಿತ್ವದ ಕನಸುಗಳ
ಕೊಳ್ಳೆಹೊಡೆಯದಿರಿ
ಅಬಲೆಗೆ ಸುಭದ್ರತೆಯ
ಬೋಗಸ್ಸು ಭರವಸೆಯ
ನೀಡಿ ದಮನಗೈಯದಿರಿ
ಹೊಂಗಿರಣ ಹೂರಣವ
ಬಿಟ್ಟುಬಿಡಿ ಹಾಗೆ,
ಬಿಡಿ ಅವಳಂತಿರಲು ಬಿಡಿ.
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.