ಮಸ್ಸೂರಿ

ಗುರಿ ಮಸ್ಸೂರಿ ಮಹತ್ವಾಕಾಂಕ್ಷೆ ಗರಿ ಕೆದರಿ
ಎತ್ತರಕೆ ನಿಂತಿತ್ತು ನೋಡಿದರೆ ಕತ್ತು ನೋಯುತ್ತಿತ್ತು
ಕೆಳಗೆ ಸುಣ್ಣದಕಲ್ಲು ಮೇಲೆ ಹುಲ್ಲಿನ ಮಖಮಲ್ಲು
ಎರಡು ಜಗತ್ತುಗಳ ನಡುವೆ ಇಷ್ಟು ವ್ಯತ್ಯಾಸವೆ!

ರಸ್ತೆಯೋ ಬಹಳ ಕಡಿದು ಜೀವ ಕೈಯಲ್ಲಿ ಹಿಡಿದು
ಕುಳಿತಿದ್ದೆವು ಕಾರಿನಲ್ಲಿ ಅಪಘಾತಗಳ ನೋಟ ಅಲ್ಲಲ್ಲಿ
ನಮ್ಮ ಚಾಲಕನೂ ತೋರಿಸುತ್ತಿದ್ದ ತನ್ನ ಕೈಚಳಕ
“ಇಂಥ ಹಾದಿಗಳೇ ಹೀಗೆ!” ಎಂದುಕೊಂಡೆವು ನಮ್ಮೊಳಗೆ

ಸುತ್ತಿ ಬಳಸಿ ಹತ್ತಿ ಕುಳಿತಲ್ಲೆ ತಲೆ ಸುತ್ತಿ
ಮುಗಿಯುವುದೆಂದು ಈ ಆರೋಹಣವೆಂದು
ನೊಡಿದರೆ ಎಲಾ! ಎದುರು ಮಸ್ಸೂರಿಯ ಬಜಾರು
ಇನ್ನು ನಮ್ಮನ್ನು ಹಿಡಿದು ನಿಲ್ಲಿಸುವವರಾರು?

ಬಿಟ್ಟು ನಮ್ಮೂರ ಬಂದಿದ್ದೆವು ಬಹಳ ದೂರ
ಈಗೇಕೆ ಆ ಗೊಡವೆ ಇಂಥ ಬೀದಿಗಳ ನಡುವೆ
ಬೇಕಾದವರು ಹೊರಡಿ ಹೇಸರಗತ್ತೆಗಳ ಗಾಡಿ
ಪಾದಚಾರಿಗಳಾಗಿಯೆ ನಾವು ಇಲ್ಲಿ ಸಂಚರಿಸುವೆವು

ಕೊಡು ಎವೆಗೆ ಎವೆಯ ನೆಲೆ ಬೆಟ್ಟದ ಚೆಲುವೆ
ಇಲ್ಲಿಯ ತನಕವು ಬಂದೆ ನಿನ್ನ ನೋಡಲೆಂದೆ
ಏನ ಮಾರುವೆ ನನಗೆ ಬೇಕಾದ್ದು ನಿನ್ನ ನಗೆ
ಮಾರುವೆಯ ನನಗೊಂದು ಮಂಜಿನರಮನೆಯ ?

ಕಟಾಂಜಣದ ಬಳಿ ಸಿಗರೇಟಿನ ಹೊಗೆಯುಗುಳಿ
ನೋಡಿದೆನು ಡೆಹರಾಡೂನು ಆಚೆಗಿನ್ನೊಂದು ಸಾನು
ನಿಂತಿದ್ದೆನಲ್ಲಿ ಮರೆತು ಹೀಗೆಷ್ಟು ಹೊತ್ತು
ಬಂದ ದಾರಿಯ ಪಯಣ ಉಳಿದಿತ್ತು ಅವರೋಹಣ

ಆವರಿಸಿದಾಗ ಕತ್ತಲು ತಲಪಿದ್ದೆವು ಕೆಳಗಿನ ತಪ್ಪಲು
ಎಲ್ಲಿ ಮುಂಜಾನೆ ಎಲ್ಲಿ ನನ್ನ ಮಂಜಿನರಮನೆ ?
ಎದ್ದೆ ಹಾಸಿಗೆಯಿಂದ ಧಾವಿಸಿದೆ ಅಂಗಳದ ಬದಿಗೆ
ತೇಲಿ ಹೋಗುತ್ತಿತ್ತು ಅದು ಮಸ್ಸೂರಿಯ ಕಡೆಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದಲಾವಣೆ: ಯಾಕೆ ಓದಬೇಕು?
Next post ಅವಳಂತಿರಲು ಬಿಡಿ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys