ಹಿತ್ತಲು ಕಲಿಸಿದ ಪಾಠ

ಹಿತ್ತಲು ನನ್ನದು
ಯಾಕೆಂದರೆ ಅಲ್ಲಿಯೇ ನನ್ನ
ಕನಸುಗಳು ಚಿಗುರಿದ್ದು
ಪಿಸುಮಾತು ಆಡಿದ್ದು
ನಲ್ಲನ ಜೊತೆ ಕಾಮನಬಿಲ್ಲ ಏರಿದ್ದು
ಗೆಳತಿಗೆ ಎಲ್ಲಾ ಉಸುರಿದ್ದು
ಕಣ್ಣೀರು ಹಾಕಿದ್ದು
ಮತ್ತೆ ಮತ್ತೆ ಕಣ್ಣೋರಿಸಿಕೊಂಡು
ಆತನ ಮಾತು ಕೇಳಿ ಸಮಾಧಾನಿಸಿಕೊಂಡಿದ್ದು
ಮುಳುಗಿಯೇ ಹೋಗಿದ್ದ ಬದುಕಿಗೆ
ಮತ್ತೆ ಬಣ್ಣ ತುಂಬಿದ್ದು ಇದೇ
ಹಿತ್ತಲಲ್ಲಿ
ಅದೇ ಬಸಲೇ ಬಳ್ಳಿ ಚಪ್ಪರದ  ನೆರಳಲ್ಲಿ
ನಡು ಮನೆಯ ಪಡಸಾಲೆ
ಅವ್ವನದು
ಅಲ್ಲಿಯೇ ಅವ್ವನ ಪಾರ್ಮಾನಿಗೆ ಅಪ್ಪ
ತಲೆಯಾಡಿಸಿದ್ದು
ಒಲ್ಲದ ಮನಸ್ಸಿಂದ ಹಳೆಯ ಗೂಟಕ್ಕೆ
ಕೊರಳೊಡ್ಡಿದ್ದು
ಇನ್ನು ಜಗುಲಿ ಅಪ್ಪನದು
ಅಲ್ಲಿಯೇ ಅಪ್ಪನ ಲಕ್ಷ್ಮಣ ರೇಖೆ
ಜಗುಲಿಯ ಮಾತು ಒಳಜಗತ್ತಿಗೆ
ಶಾಸನ
ಉರುಳೋ ಇರುಳೋ
ಕೊರಳೊಡ್ಡಿದ್ದು ಅವ್ವ
ನಂತರದ ಸರದಿ ಹೆಣ್ಣು ಸಂತತಿಯದೇ
ಹೊರ ಜಗತ್ತಿಗೆ ಒಳಗಿನ ಲೋಕ ಕಾಣಲಿಲ್ಲ
ಒಳಗಿದ್ದವರಿಗೆ ಹೊರಲೋಕ ಕಾಣಲಿಲ್ಲ
ಜಗುಲಿ ದರ್ಬಾರಿನಲ್ಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಛತ್ರಿ
Next post ಗೋಕಾಕ್ ವರದಿ – ೩

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…