Home / ಕವನ / ಕವಿತೆ / ಹಿತ್ತಲು ಕಲಿಸಿದ ಪಾಠ

ಹಿತ್ತಲು ಕಲಿಸಿದ ಪಾಠ

ಹಿತ್ತಲು ನನ್ನದು
ಯಾಕೆಂದರೆ ಅಲ್ಲಿಯೇ ನನ್ನ
ಕನಸುಗಳು ಚಿಗುರಿದ್ದು
ಪಿಸುಮಾತು ಆಡಿದ್ದು
ನಲ್ಲನ ಜೊತೆ ಕಾಮನಬಿಲ್ಲ ಏರಿದ್ದು
ಗೆಳತಿಗೆ ಎಲ್ಲಾ ಉಸುರಿದ್ದು
ಕಣ್ಣೀರು ಹಾಕಿದ್ದು
ಮತ್ತೆ ಮತ್ತೆ ಕಣ್ಣೋರಿಸಿಕೊಂಡು
ಆತನ ಮಾತು ಕೇಳಿ ಸಮಾಧಾನಿಸಿಕೊಂಡಿದ್ದು
ಮುಳುಗಿಯೇ ಹೋಗಿದ್ದ ಬದುಕಿಗೆ
ಮತ್ತೆ ಬಣ್ಣ ತುಂಬಿದ್ದು ಇದೇ
ಹಿತ್ತಲಲ್ಲಿ
ಅದೇ ಬಸಲೇ ಬಳ್ಳಿ ಚಪ್ಪರದ  ನೆರಳಲ್ಲಿ
ನಡು ಮನೆಯ ಪಡಸಾಲೆ
ಅವ್ವನದು
ಅಲ್ಲಿಯೇ ಅವ್ವನ ಪಾರ್ಮಾನಿಗೆ ಅಪ್ಪ
ತಲೆಯಾಡಿಸಿದ್ದು
ಒಲ್ಲದ ಮನಸ್ಸಿಂದ ಹಳೆಯ ಗೂಟಕ್ಕೆ
ಕೊರಳೊಡ್ಡಿದ್ದು
ಇನ್ನು ಜಗುಲಿ ಅಪ್ಪನದು
ಅಲ್ಲಿಯೇ ಅಪ್ಪನ ಲಕ್ಷ್ಮಣ ರೇಖೆ
ಜಗುಲಿಯ ಮಾತು ಒಳಜಗತ್ತಿಗೆ
ಶಾಸನ
ಉರುಳೋ ಇರುಳೋ
ಕೊರಳೊಡ್ಡಿದ್ದು ಅವ್ವ
ನಂತರದ ಸರದಿ ಹೆಣ್ಣು ಸಂತತಿಯದೇ
ಹೊರ ಜಗತ್ತಿಗೆ ಒಳಗಿನ ಲೋಕ ಕಾಣಲಿಲ್ಲ
ಒಳಗಿದ್ದವರಿಗೆ ಹೊರಲೋಕ ಕಾಣಲಿಲ್ಲ
ಜಗುಲಿ ದರ್ಬಾರಿನಲ್ಲಿ
Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...