Home / ಕವನ / ಕವಿತೆ / ಕಳ್ಳುಬೇರು

ಕಳ್ಳುಬೇರು

ನೀತಿ ನೇಮಾ, ರಾಜಕೀಯಾ, ಧರ್ಮ, ಕುಲ
ಆಚಾರ ಇವೆಲ್ಲ ಮೈಮ್ಯಾಲಿನ ಬಟ್ಟೆಗಳಂಗೆ
ಕಾಲಕಾಲಕ್ಕೆ ಅವಶ್ಯಬಿದ್ದಂಗೆ ಹೊತ್ತು ಬಂದಂಗೆ
ಹಿಗ್ಗಿಸಿಯೋ, ಕುಗ್ಗಿಸಿಯೋ, ಕತ್ತರಿಸಿಯೋ, ಸೇರಿಸಿಯೋ
ಬದಲಾವಣೆ ಮಾಡಿಕೊಂತೀವಿ
ಬ್ಯಾರೆ ಬ್ಯಾರೆ ರೀತಿ ಹೊಂದಿಸಿ ಉಟುಗೊಂತೀವಿ

ಎಲ್ಲಕ್ಮೊದಲು ಕಳ್ಳುಬೇರು ಗಟ್ಟಿ ಇರಬೇಕು
ಡಬಗಳ್ಳಿಯಂಗೆ, ಕರಿಕಿ-ಜಾಲಿಯಂಗೆ,
ಎಳೀ ಸಿಕ್ರೆ ಹಚಡಾ ನುಂಗೋದು, ರವಷ್ಟು ಸಂದು ಸಿಕ್ರು
ಬೇರಿಳಿಸಿ ಸೀಮೇನೇ ವ್ಯಾಪಿಸೋದು,
ಈ ನೆಲದಾಗಿಂದ ಇನ್ನೊಂದು ನೆಲಕ್ಕೊಯ್ದು
ಅಂಟಿಸಿದರೂ ಗಪ್ಪನೆ ಹತಿಗೆಂಡು ಕಸಿಯಾಗಿ
ಕಸುವಾಗೋದು,

ಉಸಿರಿನೆಳೆಯಾಗೂ ನಾಡಿಕೂದಲಾಗೂ ಟುಕು ಟುಕು ಅಂತ
ಮಿಡುಕು ಇದ್ರುಸಾಕು ಬಾಳಬೇಕೆಂಬ ಹಂಬಲ
ಗುಡ್ಡದಷ್ಟಿರಾದು, ಮುಗಿಲಿಗೇರಾಕ ಬಯಸಾದು
ಇವೆಲ್ಲಾ ಆ ಕಳ್ಳೀ ಲಕ್ಷಣಗಳು

ಮಳೆ-ಗಾಳಿ-ಚಳಿ-ಬಿಸಿಲು
ಉಪವಾಸ ವನವಾಸ, ರೋಗ ವೈಭೋಗ
ಎಲ್ಲದರಾಗೂ ಮ್ಯಾಲೆ ಅಲ್ಲಾಡಿಸಿದಂಗೆಲ್ಲಾ
ಒಳಾಗೆ ಬೇರು ಅದಿರ್ತಾತೆ-ಬೇರು ಅದಿರಿದಂಗೆಲ್ಲಾ
ತನ್ನ ಬೆಳ್ಳು ನೆಲದಾಗ ಚಾಚಿ ಚಾಚಿ ಆಳಕ್ಕೆ ಅಗಲಕ್ಕೆ
ತನ್ನ ಬೇರು ಭದ್ರಾ ಮಾಡಿಕೆಂತಾತೆ

ಈ ಜಿಗುಟು ತಲಿತಲಾಂತರ ಹರಿದು ಬರ್ತಾತೆ
ಮಣ್ಣಾಗೊಂದಾಗಿ ದುಡತಾನೇ ಉಸರಾಗಿ ಬಾಳೋದರಿಂದ
ತಾಳ್ತಾತೆ-ಬಾಳ್ತಾತೆ. ಬೆವರಿನ ನೀರು ಬೇರಿಗೆ ನೀರು
ಹೊಲಸು ತೊಳಿಯಾಕೆ, ಕಸಾ ಸುಡಾಕೆ, ನೂರು ವರ್ಷ ಬಾಳಾಕೆ
ಭಂಡವಾಳ,

ಗಟ್ಟಿ ಮುಟ್ಟ ಆರೋಗ್ಯಕ್ಕೆ ಗುಟ್ಟು ಸಂತಾನಕ್ಕೆ ಅಸಲ ಸತ್ವ
ಇದೇ ದಾರ್ಯಾಗೆ ಹೋದ್ರೆ ಎಲ್ಲೆಲ್ಲಿ ರಸಾ ಕಾಣ್ತದೋ
ಅಲ್ಲಲ್ಲಿ ಎದೀ ತುಂಬ್ತತೆ
ಎದೀ ಗೊತ್ತಿಗೊಂತಾತೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...