Home / ಕವನ / ಕವಿತೆ / ಕಳ್ಳುಬೇರು

ಕಳ್ಳುಬೇರು

ನೀತಿ ನೇಮಾ, ರಾಜಕೀಯಾ, ಧರ್ಮ, ಕುಲ
ಆಚಾರ ಇವೆಲ್ಲ ಮೈಮ್ಯಾಲಿನ ಬಟ್ಟೆಗಳಂಗೆ
ಕಾಲಕಾಲಕ್ಕೆ ಅವಶ್ಯಬಿದ್ದಂಗೆ ಹೊತ್ತು ಬಂದಂಗೆ
ಹಿಗ್ಗಿಸಿಯೋ, ಕುಗ್ಗಿಸಿಯೋ, ಕತ್ತರಿಸಿಯೋ, ಸೇರಿಸಿಯೋ
ಬದಲಾವಣೆ ಮಾಡಿಕೊಂತೀವಿ
ಬ್ಯಾರೆ ಬ್ಯಾರೆ ರೀತಿ ಹೊಂದಿಸಿ ಉಟುಗೊಂತೀವಿ

ಎಲ್ಲಕ್ಮೊದಲು ಕಳ್ಳುಬೇರು ಗಟ್ಟಿ ಇರಬೇಕು
ಡಬಗಳ್ಳಿಯಂಗೆ, ಕರಿಕಿ-ಜಾಲಿಯಂಗೆ,
ಎಳೀ ಸಿಕ್ರೆ ಹಚಡಾ ನುಂಗೋದು, ರವಷ್ಟು ಸಂದು ಸಿಕ್ರು
ಬೇರಿಳಿಸಿ ಸೀಮೇನೇ ವ್ಯಾಪಿಸೋದು,
ಈ ನೆಲದಾಗಿಂದ ಇನ್ನೊಂದು ನೆಲಕ್ಕೊಯ್ದು
ಅಂಟಿಸಿದರೂ ಗಪ್ಪನೆ ಹತಿಗೆಂಡು ಕಸಿಯಾಗಿ
ಕಸುವಾಗೋದು,

ಉಸಿರಿನೆಳೆಯಾಗೂ ನಾಡಿಕೂದಲಾಗೂ ಟುಕು ಟುಕು ಅಂತ
ಮಿಡುಕು ಇದ್ರುಸಾಕು ಬಾಳಬೇಕೆಂಬ ಹಂಬಲ
ಗುಡ್ಡದಷ್ಟಿರಾದು, ಮುಗಿಲಿಗೇರಾಕ ಬಯಸಾದು
ಇವೆಲ್ಲಾ ಆ ಕಳ್ಳೀ ಲಕ್ಷಣಗಳು

ಮಳೆ-ಗಾಳಿ-ಚಳಿ-ಬಿಸಿಲು
ಉಪವಾಸ ವನವಾಸ, ರೋಗ ವೈಭೋಗ
ಎಲ್ಲದರಾಗೂ ಮ್ಯಾಲೆ ಅಲ್ಲಾಡಿಸಿದಂಗೆಲ್ಲಾ
ಒಳಾಗೆ ಬೇರು ಅದಿರ್ತಾತೆ-ಬೇರು ಅದಿರಿದಂಗೆಲ್ಲಾ
ತನ್ನ ಬೆಳ್ಳು ನೆಲದಾಗ ಚಾಚಿ ಚಾಚಿ ಆಳಕ್ಕೆ ಅಗಲಕ್ಕೆ
ತನ್ನ ಬೇರು ಭದ್ರಾ ಮಾಡಿಕೆಂತಾತೆ

ಈ ಜಿಗುಟು ತಲಿತಲಾಂತರ ಹರಿದು ಬರ್ತಾತೆ
ಮಣ್ಣಾಗೊಂದಾಗಿ ದುಡತಾನೇ ಉಸರಾಗಿ ಬಾಳೋದರಿಂದ
ತಾಳ್ತಾತೆ-ಬಾಳ್ತಾತೆ. ಬೆವರಿನ ನೀರು ಬೇರಿಗೆ ನೀರು
ಹೊಲಸು ತೊಳಿಯಾಕೆ, ಕಸಾ ಸುಡಾಕೆ, ನೂರು ವರ್ಷ ಬಾಳಾಕೆ
ಭಂಡವಾಳ,

ಗಟ್ಟಿ ಮುಟ್ಟ ಆರೋಗ್ಯಕ್ಕೆ ಗುಟ್ಟು ಸಂತಾನಕ್ಕೆ ಅಸಲ ಸತ್ವ
ಇದೇ ದಾರ್ಯಾಗೆ ಹೋದ್ರೆ ಎಲ್ಲೆಲ್ಲಿ ರಸಾ ಕಾಣ್ತದೋ
ಅಲ್ಲಲ್ಲಿ ಎದೀ ತುಂಬ್ತತೆ
ಎದೀ ಗೊತ್ತಿಗೊಂತಾತೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...