Home / ಕವನ / ಕವಿತೆ / ಕಳ್ಳುಬೇರು

ಕಳ್ಳುಬೇರು

ನೀತಿ ನೇಮಾ, ರಾಜಕೀಯಾ, ಧರ್ಮ, ಕುಲ
ಆಚಾರ ಇವೆಲ್ಲ ಮೈಮ್ಯಾಲಿನ ಬಟ್ಟೆಗಳಂಗೆ
ಕಾಲಕಾಲಕ್ಕೆ ಅವಶ್ಯಬಿದ್ದಂಗೆ ಹೊತ್ತು ಬಂದಂಗೆ
ಹಿಗ್ಗಿಸಿಯೋ, ಕುಗ್ಗಿಸಿಯೋ, ಕತ್ತರಿಸಿಯೋ, ಸೇರಿಸಿಯೋ
ಬದಲಾವಣೆ ಮಾಡಿಕೊಂತೀವಿ
ಬ್ಯಾರೆ ಬ್ಯಾರೆ ರೀತಿ ಹೊಂದಿಸಿ ಉಟುಗೊಂತೀವಿ

ಎಲ್ಲಕ್ಮೊದಲು ಕಳ್ಳುಬೇರು ಗಟ್ಟಿ ಇರಬೇಕು
ಡಬಗಳ್ಳಿಯಂಗೆ, ಕರಿಕಿ-ಜಾಲಿಯಂಗೆ,
ಎಳೀ ಸಿಕ್ರೆ ಹಚಡಾ ನುಂಗೋದು, ರವಷ್ಟು ಸಂದು ಸಿಕ್ರು
ಬೇರಿಳಿಸಿ ಸೀಮೇನೇ ವ್ಯಾಪಿಸೋದು,
ಈ ನೆಲದಾಗಿಂದ ಇನ್ನೊಂದು ನೆಲಕ್ಕೊಯ್ದು
ಅಂಟಿಸಿದರೂ ಗಪ್ಪನೆ ಹತಿಗೆಂಡು ಕಸಿಯಾಗಿ
ಕಸುವಾಗೋದು,

ಉಸಿರಿನೆಳೆಯಾಗೂ ನಾಡಿಕೂದಲಾಗೂ ಟುಕು ಟುಕು ಅಂತ
ಮಿಡುಕು ಇದ್ರುಸಾಕು ಬಾಳಬೇಕೆಂಬ ಹಂಬಲ
ಗುಡ್ಡದಷ್ಟಿರಾದು, ಮುಗಿಲಿಗೇರಾಕ ಬಯಸಾದು
ಇವೆಲ್ಲಾ ಆ ಕಳ್ಳೀ ಲಕ್ಷಣಗಳು

ಮಳೆ-ಗಾಳಿ-ಚಳಿ-ಬಿಸಿಲು
ಉಪವಾಸ ವನವಾಸ, ರೋಗ ವೈಭೋಗ
ಎಲ್ಲದರಾಗೂ ಮ್ಯಾಲೆ ಅಲ್ಲಾಡಿಸಿದಂಗೆಲ್ಲಾ
ಒಳಾಗೆ ಬೇರು ಅದಿರ್ತಾತೆ-ಬೇರು ಅದಿರಿದಂಗೆಲ್ಲಾ
ತನ್ನ ಬೆಳ್ಳು ನೆಲದಾಗ ಚಾಚಿ ಚಾಚಿ ಆಳಕ್ಕೆ ಅಗಲಕ್ಕೆ
ತನ್ನ ಬೇರು ಭದ್ರಾ ಮಾಡಿಕೆಂತಾತೆ

ಈ ಜಿಗುಟು ತಲಿತಲಾಂತರ ಹರಿದು ಬರ್ತಾತೆ
ಮಣ್ಣಾಗೊಂದಾಗಿ ದುಡತಾನೇ ಉಸರಾಗಿ ಬಾಳೋದರಿಂದ
ತಾಳ್ತಾತೆ-ಬಾಳ್ತಾತೆ. ಬೆವರಿನ ನೀರು ಬೇರಿಗೆ ನೀರು
ಹೊಲಸು ತೊಳಿಯಾಕೆ, ಕಸಾ ಸುಡಾಕೆ, ನೂರು ವರ್ಷ ಬಾಳಾಕೆ
ಭಂಡವಾಳ,

ಗಟ್ಟಿ ಮುಟ್ಟ ಆರೋಗ್ಯಕ್ಕೆ ಗುಟ್ಟು ಸಂತಾನಕ್ಕೆ ಅಸಲ ಸತ್ವ
ಇದೇ ದಾರ್ಯಾಗೆ ಹೋದ್ರೆ ಎಲ್ಲೆಲ್ಲಿ ರಸಾ ಕಾಣ್ತದೋ
ಅಲ್ಲಲ್ಲಿ ಎದೀ ತುಂಬ್ತತೆ
ಎದೀ ಗೊತ್ತಿಗೊಂತಾತೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...