ರೂಹು

ಬಣ್ಣಬಣ್ಣ ಮುಗಿಲ ಮೈತುಂಬ
ಹೂವರಳಿದ ಸಿರಿಸಂಜೆ ಮೋಡದಂಚಿಗೆ
ಜರಿಯ ಅಂಚು ಮೆದು ಮಲ್ಲಿಗೆ
ಅಂಗಳದ ಮೂಲೆಯಲಿ ಸೂಸಿದ ಕಂಪು
ನೀನು ಪ್ರತಿಫಲಿಸಿದ ನನ್ನೆದೆ ಕನ್ನಡಿ.

ಸಿರಿ ಮುಗಿಲ ರಂಗವಲ್ಲಿ ಸ್ಪಂದನಕೆ
ಮೊಗ್ಗಾಗಿ ತಿಳಿಗಾಳಿ ತೀಡಿ ಕೈಯಿಂದ
ಮನಸ್ಸಿಗೆ ತೇಲಿದ ಗಾಳಿಪದ ಅಲ್ಲಿ
ಬಂಗಾರ ಗೌರಿಶಂಕರ ಶಿಖರ ಕವಿತೆ
ಭಾವದ ಪಣತಿಯಲ್ಲಿ ಉರಿಯುವ ಬತ್ತಿ.

ಹೊನ್ನ ಮುಡಿಯಲಿ ಸೇವಂತಿಗೆ ಜಾಜಿ
ದಿಕ್ಕು ದಿಕ್ಕುಗಳಿಗೆಲ್ಲಾ ಕಸ್ತೂರಿ ಚಂದನ ಸೂಸಿ
ನೊರೆತೆರೆಗಳು ಏರಿದ ಕಡಲ ಒಡಲಲಿ
ಉಯ್ಯಾಲೆ ಜೇಕುವ ಹಾಯಿ ದೋಣಿ
ಹುಟ್ಟು ಹಾಕಿದ ಹೊಸ ಬಗೆಯ ಬಂಧ

ನನ್ನೊಳಗೆ ನಿನ್ನೊಳಗೆ ಇರುವ ಭಾನು
ಭೂಮಿ ಬಯಲು ಆಲಯ ಸಪ್ತಾಂತರಾಳ
ಬೇರು ಇಳಿದ ಹರವನಲಿ ಟೊಂಗೆ ಚಾಚಿದ
ದಿಗಂತ ಕತ್ತಲಾಯಿತು ಬೆಳಕಾಯಿತು
ಬೀಜದಲಿ ರೂಹುಗೊಂಡ ಅಖಂಡ ಸಂಸಾರ ಸಂಬಂಧ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ ಕಲ್ಪನೆ
Next post ಜನರ ಬಾಯಿ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…