ರೂಹು

ಬಣ್ಣಬಣ್ಣ ಮುಗಿಲ ಮೈತುಂಬ
ಹೂವರಳಿದ ಸಿರಿಸಂಜೆ ಮೋಡದಂಚಿಗೆ
ಜರಿಯ ಅಂಚು ಮೆದು ಮಲ್ಲಿಗೆ
ಅಂಗಳದ ಮೂಲೆಯಲಿ ಸೂಸಿದ ಕಂಪು
ನೀನು ಪ್ರತಿಫಲಿಸಿದ ನನ್ನೆದೆ ಕನ್ನಡಿ.

ಸಿರಿ ಮುಗಿಲ ರಂಗವಲ್ಲಿ ಸ್ಪಂದನಕೆ
ಮೊಗ್ಗಾಗಿ ತಿಳಿಗಾಳಿ ತೀಡಿ ಕೈಯಿಂದ
ಮನಸ್ಸಿಗೆ ತೇಲಿದ ಗಾಳಿಪದ ಅಲ್ಲಿ
ಬಂಗಾರ ಗೌರಿಶಂಕರ ಶಿಖರ ಕವಿತೆ
ಭಾವದ ಪಣತಿಯಲ್ಲಿ ಉರಿಯುವ ಬತ್ತಿ.

ಹೊನ್ನ ಮುಡಿಯಲಿ ಸೇವಂತಿಗೆ ಜಾಜಿ
ದಿಕ್ಕು ದಿಕ್ಕುಗಳಿಗೆಲ್ಲಾ ಕಸ್ತೂರಿ ಚಂದನ ಸೂಸಿ
ನೊರೆತೆರೆಗಳು ಏರಿದ ಕಡಲ ಒಡಲಲಿ
ಉಯ್ಯಾಲೆ ಜೇಕುವ ಹಾಯಿ ದೋಣಿ
ಹುಟ್ಟು ಹಾಕಿದ ಹೊಸ ಬಗೆಯ ಬಂಧ

ನನ್ನೊಳಗೆ ನಿನ್ನೊಳಗೆ ಇರುವ ಭಾನು
ಭೂಮಿ ಬಯಲು ಆಲಯ ಸಪ್ತಾಂತರಾಳ
ಬೇರು ಇಳಿದ ಹರವನಲಿ ಟೊಂಗೆ ಚಾಚಿದ
ದಿಗಂತ ಕತ್ತಲಾಯಿತು ಬೆಳಕಾಯಿತು
ಬೀಜದಲಿ ರೂಹುಗೊಂಡ ಅಖಂಡ ಸಂಸಾರ ಸಂಬಂಧ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ ಕಲ್ಪನೆ
Next post ಜನರ ಬಾಯಿ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys