ಬಿಡುಗಡೆಯ ಕವಿತೆ

ಹೆಣ್ಣಾಗಿ ಹುಟ್ಟಿದೆನೆಂದು
ಹಣೆಬರಹಕೆ ಹಳಿಯದಿರು,
ನಿನ್ನ ತುಳಿದವರು
ನಾಚಿ ನೀರಾಗುವ ಕಾಲ
ದೂರವಿಲ್ಲ ಕೇಳು.

ಮನು ಮಹಾಶಯರ
ಧರ್ಮ ಶಾಸ್ತ್ರಗಳ ಹೊತ್ತು
ಗೊಡ್ಡು ವಿಚಾರಗಳಿಗೆ ತಲೆಕೊಟ್ಟು
ಕೆರೆ-ಬಾವಿಗಳಿಗೆ
ಹಾರವಾಗುವದ ನಿಲ್ಲಿಸು,

ತುಂಬಿದ ಸಭೆಯಲ್ಲಿ
ಅಸಹಾಯಕಳಾಗಿ ನಿಂತು
ಸೀರೆಯನು ಸೆಳಸಿಕೊಳ್ಳುತ್ತ
ಅವಮಾನದ ಬೆಂಕಿಯಲಿ
ಬೇಯುವದ ನಿಲ್ಲಿಸು.

ಸಂಶಯದ ಸುಳಿಗೆ ಸಿಕ್ಕು
ಅಗ್ನಿ ಪರೀಕ್ಷೆಗೆ ಮೈಯೊಡ್ಡಿ
ಶೀಲವನ್ನು ಶಂಕಿಸಿಕೊಳ್ಳುವ
ಸೀತೆಯಾಗುವದ ನಿಲ್ಲಿಸು.

ಹೃದಯಹೀನರ ಸಂತೆಯಲಿ
ಕೇವಲ ವಸ್ತುವಾಗಿ,
ಹೊಡೆತಕ್ಕೆ ಮೈಕೊಟ್ಟು,
ಒಳಗೊಳಗೇ ರೋದಿಸುವ
ಕಪ್ಪು ಕತ್ತಲೆ ಕೋಣೆಗೆ
ಕೈದಿಯಾಗುವುದ ನಿಲ್ಲಿಸು.

ನಿನ್ನೊಡಲ ತುಂಬ
ಈಡೇರದೇ ಬಿಕ್ಕುತಿಹ
ಸತ್ತಬಯಕೆಗಳ ಚೀತ್ಕಾರ
ಸಂಪ್ರದಾಯಗಳ ಕಪ್ಪು ಹೊಗೆ
ದಟ್ಟ ನೋವಿನ ಛಾಯೆಗೆ
ಧ್ವನಿಯ ನೀಡು.

ನಾನು, ನೀನು, ಸೀತೆ
ಮತ್ತೆ ದೌಪದಿ
ಎಲ್ಲರೂ ನೊಂದವರು,
ದಾಸ್ಯದ ಕೊಂಡಿ ಕಳಚಿ
ಹೊರಗೆ ಬಾ ಗೆಳತಿ,

ಕೈಗೆ ಕೈ ಕೂಡಿಸು
ನವಚೇತನ ನಮ್ಮದು
ಬದುಕಿನ ಹೋರಾಟ
ಮುಗಿಯಲಿಲ್ಲ ಗೆಳತಿ
ಮುಗಿಯಲಿಲ್ಲವೋ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಕ್ತಿ ಮೂಲಗಳೇರದೆ ಪರಿಸರವನುಳಿಸುವುದೆಂತು?
Next post ದೂರ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…