ಬಿಡುಗಡೆಯ ಕವಿತೆ

ಹೆಣ್ಣಾಗಿ ಹುಟ್ಟಿದೆನೆಂದು
ಹಣೆಬರಹಕೆ ಹಳಿಯದಿರು,
ನಿನ್ನ ತುಳಿದವರು
ನಾಚಿ ನೀರಾಗುವ ಕಾಲ
ದೂರವಿಲ್ಲ ಕೇಳು.

ಮನು ಮಹಾಶಯರ
ಧರ್ಮ ಶಾಸ್ತ್ರಗಳ ಹೊತ್ತು
ಗೊಡ್ಡು ವಿಚಾರಗಳಿಗೆ ತಲೆಕೊಟ್ಟು
ಕೆರೆ-ಬಾವಿಗಳಿಗೆ
ಹಾರವಾಗುವದ ನಿಲ್ಲಿಸು,

ತುಂಬಿದ ಸಭೆಯಲ್ಲಿ
ಅಸಹಾಯಕಳಾಗಿ ನಿಂತು
ಸೀರೆಯನು ಸೆಳಸಿಕೊಳ್ಳುತ್ತ
ಅವಮಾನದ ಬೆಂಕಿಯಲಿ
ಬೇಯುವದ ನಿಲ್ಲಿಸು.

ಸಂಶಯದ ಸುಳಿಗೆ ಸಿಕ್ಕು
ಅಗ್ನಿ ಪರೀಕ್ಷೆಗೆ ಮೈಯೊಡ್ಡಿ
ಶೀಲವನ್ನು ಶಂಕಿಸಿಕೊಳ್ಳುವ
ಸೀತೆಯಾಗುವದ ನಿಲ್ಲಿಸು.

ಹೃದಯಹೀನರ ಸಂತೆಯಲಿ
ಕೇವಲ ವಸ್ತುವಾಗಿ,
ಹೊಡೆತಕ್ಕೆ ಮೈಕೊಟ್ಟು,
ಒಳಗೊಳಗೇ ರೋದಿಸುವ
ಕಪ್ಪು ಕತ್ತಲೆ ಕೋಣೆಗೆ
ಕೈದಿಯಾಗುವುದ ನಿಲ್ಲಿಸು.

ನಿನ್ನೊಡಲ ತುಂಬ
ಈಡೇರದೇ ಬಿಕ್ಕುತಿಹ
ಸತ್ತಬಯಕೆಗಳ ಚೀತ್ಕಾರ
ಸಂಪ್ರದಾಯಗಳ ಕಪ್ಪು ಹೊಗೆ
ದಟ್ಟ ನೋವಿನ ಛಾಯೆಗೆ
ಧ್ವನಿಯ ನೀಡು.

ನಾನು, ನೀನು, ಸೀತೆ
ಮತ್ತೆ ದೌಪದಿ
ಎಲ್ಲರೂ ನೊಂದವರು,
ದಾಸ್ಯದ ಕೊಂಡಿ ಕಳಚಿ
ಹೊರಗೆ ಬಾ ಗೆಳತಿ,

ಕೈಗೆ ಕೈ ಕೂಡಿಸು
ನವಚೇತನ ನಮ್ಮದು
ಬದುಕಿನ ಹೋರಾಟ
ಮುಗಿಯಲಿಲ್ಲ ಗೆಳತಿ
ಮುಗಿಯಲಿಲ್ಲವೋ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಕ್ತಿ ಮೂಲಗಳೇರದೆ ಪರಿಸರವನುಳಿಸುವುದೆಂತು?
Next post ದೂರ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…