Home / ಕವನ / ಕವಿತೆ / ಸ್ಥಿತಿ

ಸ್ಥಿತಿ

ಹೂವಿನ ಗೋಣು ಮುರಿದು
ಹೂದಾನಿಯಲ್ಲಿ ಇರಿಸುತ್ತೇನೆ.

ಗೆದ್ದಲು ಹುಳುಗಳು ಗೋಡೆಯ
ಮೇಲೆ ಶಿಲ್ಪ ಕಡೆದಿದ್ದರೆ
ಭಗ್ನಗೊಳಿಸುತ್ತೇನೆ.

ಸಕ್ಕರೆಯ ಬೆಟ್ಟು ಹೊತ್ತು
ಹರಿವ ಸಾಲು ಇರುವೆಗಳನ್ನು
ಒತ್ತರಿಸಿ ಗುಡಿಸಿಹಾಕುತ್ತೇನೆ.

ಸೂರಿನಡಿ ಗುಬ್ಬಿಗಳು
ಕಾಳು ಕಡ್ಡಿ ಹೆಕ್ಕಿ ಗೂಡು
ಹೆಣೆದಿದ್ದರೆ ಕಿತ್ತು ಬೀದಿಗೆಸೆಯುತ್ತೇನೆ.

ಗುಬ್ಬಿಯ ಸೂರನ್ನು
ಇರುವೆಯ ಅನ್ನವನ್ನೂ
ಹೂವಿನ ಬದುಕನ್ನೂ
ಕಸಿದುಕೊಳ್ಳುವ ಈ
ಕೊಲೆಪಾತಕ ಕೈಗಳಿಗೆ
ಯಾರ ಭಯವೂ ಇಲ್ಲ.

ಜಗತ್ತಿನ ಸಂಕಟಗಳಿಗೆ
ಕಿಟಿಕಿ ಮುಚ್ಚಿ ಕುಳಿತರೆ
ತೆರೆಯಲು ಯಾರೂ ಬರುವುದಿಲ್ಲ.
ನೋವು, ನಿಟ್ಟುಸಿರು
ಅಸಮತೆ, ಅನ್ಯಾಯ
ಈ ಗಾಳಿಯಲ್ಲೇ ಇದೆ.
ನಾನೂ ಅದನ್ನು ನಿರ್‍ಲಜ್ಜೆಯಿಂದ
ಉಸಿರಾಡುತ್ತಿದ್ದೇನೆ.

ಎಲ್ಲರಿಗೆ ಅನಿಸುವಂತೆ
ನನಗೂ ಒಮ್ಮೊಮ್ಮೆ ಅನಿಸುತ್ತದೆ
ನನ್ನೆದೆಯ ಸೂರ್‍ಯ
ಇನ್ನು ಹೆಚ್ಚು ದಿನ ಉರಿಯಲಾರ.

ಹಸಿವು, ದುಃಖ, ಕ್ರೌರ್‍ಯ
ಎಲ್ಲವನ್ನೂ ಇನ್ನಿಲ್ಲದಷ್ಟು
ಸಹಜವಾಗಿ ಚಿತ್ರಿಸಿ
ಜೀವ ತುಂಬಿದ ಕಲಾವಿದ
ಯಾರೋ ಎಂದು
ನನ್ನನ್ನೇ ಕೇಳಿಕೊಳ್ಳುತ್ತೇನೆ.

ಗಂಧವನ್ನೂ ವಿಷವನ್ನೂ
ಒಂದೇ ಎಂದು
ಉಸಿರಾಡುತ್ತಿರುವೆನಾದರೆ
ನನಗಿನ್ನೂ ಆಸೆ ಇದೆ.

ಮುಳ್ಳಿನದೊಂದು ಹೆಜ್ಜೆ
ಮಣ್ಣಿನದೊಂದು ಹೆಜ್ಜೆ
ದಾರಿ ದೂರವಿದೆ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...