Home / ಕವನ / ಕವಿತೆ / ಅವರು ತಾಯಂದಿರು

ಅವರು ತಾಯಂದಿರು

ಅವರು ತಾಯಂದಿರು ಮತ್ತೆ
ಕತ್ತಲ ರಾತ್ರಿಯ ಬಿಕ್ಕುಗಳ
ನಕ್ಷತ್ರಗಳ ತಂಪು ಆಗಸಕೆ ಒಡ್ಡಿ
ಒಡಲ ಸೆರಗತುಂಬ ಬೆಳದಿಂಗಳು
ತುಂಬಿಕೊಂಡವರು.

ಹಾರುವ ಹಕ್ಕಿ ತೇಲುವ ಮೋಡಗಳು
ಎಳೆಯುವ ತೇರಿನ ನಕ್ಷೆಗಳ
ಕಸೂತಿ ಅರಳಿಸಿಕೊಂಡು ಮತ್ತೆ
ಅಂಗಳದ ತುಂಬ ಸಡಗರದ
ದೀಪಾವಳಿ ದೀಪಗಳ ಹಚ್ಚಿದವರು.

ಹರಿಯುವ ನದಿಯ ನೀರು.
ಥಳಥಳ ಹೊಳೆಯುವ ಕೊಡಪಾನ
ಗಳಲಿ ತುಂಬಿ ಹೊಗೆ ಹಾರುವ
ಒಲೆಯ ಮೇಲೆ ಕಾಯಿಸಿ ಎಣ್ಣೇಹಚ್ಚಿ
ಬಿಸಿನೀರು ಅಭ್ಯಂಜನ ಸ್ನಾನ ಪುಳಕ ಹುಟ್ಟಿಸಿದವರು.

ಎಲ್ಲಾ ದಾರಿಗಳ ಕಲ್ಲು ಕಣಿವೆಯ
ದಾಟಿಸಿ ಕೈ ಹಿಡಿದು ಹಾಲು ಕುಡಿಸಿ
ಮೆಲ್ಲಗೆ ಬಯಲ ಹಸಿರು ನದಿಗುಡ್ಡ
ಹಸಿರ ಹೊಳಪಿಗೆ ಬಿಸಿಲಿಗೊಡ್ಡಿ ತಂದು
ಗುಬ್ಬಚ್ಚಿ ಗೂಡು ಕಟ್ಟಿಸಿದವರು.

ಬಿರುಬಿಸಿಲ ಕೆಂಡದಲಿ ಬೇಯುವಾಗ
ಅದೃಷ್ಟದ ಮಳೆ ಮೋಡ ಹರಿಸಿದ ಪ್ರೀತಿ
ಭೋರೆಂದು ಸುರಿದ ಮಳೆಯಲಿ
ತಬ್ಬಿ ಅಂಗಳದ ಮಲ್ಲಿಗೆ ಮುಡಿಗೇರಿಸಿ –
ಬಯಲಗಾಳಿಯಲಿ ಹೂವಹಕ್ಕಿ ಹಾಡು ಕೇಳಿಸಿದವರು.

ಜಾತ್ರೆಯಲಿ ಬಣ್ಣದ ಬಲೂನ ಬಳೆ
ಜರಿಲಂಗ ತೊಡಿಸಿ ಜಡೆತುಂಬ ಕೇದಿಗೆ
ಅರಸಿನ ಚಂದನ ಆರತಿ ಬೆಳಗಿ ಒಡಲಲಿ
ನೂಲನೇಯ್ದು ಬಟ್ಟೆ ಬಯಲ ದಾರಿ
ನಮಗೂ ನಿಮಗೂ ಅರಳಿಸಿ ತೋರಿಸಿದವರು.

ಅವರು ತಾಯಂದಿರು ಮಾತಿನ
ಮಂತ್ರ ಪುಷ್ಪ ಎದೆಗೆ ಅವಚಿಕೊಂಡ
ಗಾಳಿಗಂಧ ಸೇರಿಸಿ ಬೆರಗಿಗೆ ಉತ್ತರಿಸಿ
ಚರಿತೆ ಹುಟ್ಟಿಸಿ ಬತ್ತದ ಒರತ
ಎಲ್ಲರ ಒಡಲಲಿ ಜೀವಜಲವಾಗಿ ಹರಿದವರು.

ಅವರು ಜಗದ ತಾಯಂದಿರು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...