Home / ಕವನ / ಕವಿತೆ / ಅವರು ತಾಯಂದಿರು

ಅವರು ತಾಯಂದಿರು

ಅವರು ತಾಯಂದಿರು ಮತ್ತೆ
ಕತ್ತಲ ರಾತ್ರಿಯ ಬಿಕ್ಕುಗಳ
ನಕ್ಷತ್ರಗಳ ತಂಪು ಆಗಸಕೆ ಒಡ್ಡಿ
ಒಡಲ ಸೆರಗತುಂಬ ಬೆಳದಿಂಗಳು
ತುಂಬಿಕೊಂಡವರು.

ಹಾರುವ ಹಕ್ಕಿ ತೇಲುವ ಮೋಡಗಳು
ಎಳೆಯುವ ತೇರಿನ ನಕ್ಷೆಗಳ
ಕಸೂತಿ ಅರಳಿಸಿಕೊಂಡು ಮತ್ತೆ
ಅಂಗಳದ ತುಂಬ ಸಡಗರದ
ದೀಪಾವಳಿ ದೀಪಗಳ ಹಚ್ಚಿದವರು.

ಹರಿಯುವ ನದಿಯ ನೀರು.
ಥಳಥಳ ಹೊಳೆಯುವ ಕೊಡಪಾನ
ಗಳಲಿ ತುಂಬಿ ಹೊಗೆ ಹಾರುವ
ಒಲೆಯ ಮೇಲೆ ಕಾಯಿಸಿ ಎಣ್ಣೇಹಚ್ಚಿ
ಬಿಸಿನೀರು ಅಭ್ಯಂಜನ ಸ್ನಾನ ಪುಳಕ ಹುಟ್ಟಿಸಿದವರು.

ಎಲ್ಲಾ ದಾರಿಗಳ ಕಲ್ಲು ಕಣಿವೆಯ
ದಾಟಿಸಿ ಕೈ ಹಿಡಿದು ಹಾಲು ಕುಡಿಸಿ
ಮೆಲ್ಲಗೆ ಬಯಲ ಹಸಿರು ನದಿಗುಡ್ಡ
ಹಸಿರ ಹೊಳಪಿಗೆ ಬಿಸಿಲಿಗೊಡ್ಡಿ ತಂದು
ಗುಬ್ಬಚ್ಚಿ ಗೂಡು ಕಟ್ಟಿಸಿದವರು.

ಬಿರುಬಿಸಿಲ ಕೆಂಡದಲಿ ಬೇಯುವಾಗ
ಅದೃಷ್ಟದ ಮಳೆ ಮೋಡ ಹರಿಸಿದ ಪ್ರೀತಿ
ಭೋರೆಂದು ಸುರಿದ ಮಳೆಯಲಿ
ತಬ್ಬಿ ಅಂಗಳದ ಮಲ್ಲಿಗೆ ಮುಡಿಗೇರಿಸಿ –
ಬಯಲಗಾಳಿಯಲಿ ಹೂವಹಕ್ಕಿ ಹಾಡು ಕೇಳಿಸಿದವರು.

ಜಾತ್ರೆಯಲಿ ಬಣ್ಣದ ಬಲೂನ ಬಳೆ
ಜರಿಲಂಗ ತೊಡಿಸಿ ಜಡೆತುಂಬ ಕೇದಿಗೆ
ಅರಸಿನ ಚಂದನ ಆರತಿ ಬೆಳಗಿ ಒಡಲಲಿ
ನೂಲನೇಯ್ದು ಬಟ್ಟೆ ಬಯಲ ದಾರಿ
ನಮಗೂ ನಿಮಗೂ ಅರಳಿಸಿ ತೋರಿಸಿದವರು.

ಅವರು ತಾಯಂದಿರು ಮಾತಿನ
ಮಂತ್ರ ಪುಷ್ಪ ಎದೆಗೆ ಅವಚಿಕೊಂಡ
ಗಾಳಿಗಂಧ ಸೇರಿಸಿ ಬೆರಗಿಗೆ ಉತ್ತರಿಸಿ
ಚರಿತೆ ಹುಟ್ಟಿಸಿ ಬತ್ತದ ಒರತ
ಎಲ್ಲರ ಒಡಲಲಿ ಜೀವಜಲವಾಗಿ ಹರಿದವರು.

ಅವರು ಜಗದ ತಾಯಂದಿರು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ