Home / ಕವನ / ಕವಿತೆ / ಸ್ವಾತಂತ್ರ್ಯ- ಕನಸು ನನಸು

ಸ್ವಾತಂತ್ರ್ಯ- ಕನಸು ನನಸು

ಅವರು ಬಿಳಿ ಬಣ್ಣದ ಮಾಯಾ
ಮಂದರಿ ಹೊದ್ದು ಬಂದಿದ್ದರು
ತೆವಳುತ್ತ, ಸರ್ಪಸಂತತಿ
ಅನ್ನವಿಕ್ಕಿದ್ದಲ್ಲೇ ಕನ್ನವಿಕ್ಕುವುದು.
ಕಸಿದುಕೊಂಡರು-ಹಕ್ಕು, ಸ್ವಾತಂತ್ರ್ಯ
ದತ್ತು ಮಕ್ಕಳಿಗೆ ಹಕ್ಕಿಲ್ಲ, ಕರಾಕರಣೆ,
ಒಡೆದು ಆಳುವ ತಂತ್ರ ಕುತಂತ್ರ
ಶ್ರೇಷ್ಠ ನಾಗರಿಕತೆಯ ಬುಡದಲ್ಲಿತ್ತು
ಅಪರ ಅನಾಗರಿಕತೆ, ಮತ್ತೆ ಕೆಲವರ
ಕೈಯಲ್ಲಿತ್ತು ಧರ್ಮಗಾಥೆಯ ಹೊತ್ತಿಗೆ
ಬೆಣ್ಣೆಮಾತಿನ ಬುದ್ದಿವಂತರ ಮತ್ತೊಂದು
ಅವತಾರ – ಅವಾಂತರ ಮತಾಂತರ
ಕನಸಾಯಿತು ಸ್ವಾತಂತ್ರ್ಯ
ಹೆಣ್ಣು, ಹೊನ್ನು ಮಣ್ಣುಗಳ ಪರತಂತ್ರ
ಹುಟ್ಟದಿದ್ದರೆ ಹೇಗೆ? ಸೇಡು
ಮನೆ ಮನೆಯಂಗಳದಿ ಒಂದೇ ಕಲರವ
ಹಕ್ಕು-ಸ್ವಾತಂತ್ರ್ಯ, ಅಲ್ಲೊಬ್ಬ ಇಲ್ಲೊಬ್ಬರಲ್ಲ
ಅವರೊಳಗೆಲ್ಲಾ ಒಬ್ಬನೆ-ವೀರ
ಮುತ್ತಿದರು ಅಕ್ಷೋಹಿಣಿ, ಅಕ್ಷೋಹಿಣಿ
ಹಣಾಹಣಿಗೆ, ನೆತ್ತರುಕ್ಕಿಸಿದರು. ಗಲ್ಲು ಗೆದ್ದರು.
ಬೂಟು ಕಾಲಿಗೆ, ತುಪಾಕಿ ಪೀರಂಗಿಗೂ
ಗುಂಡುಗುಂಡಿಗೂ ಗುಂಡಿಗೆಯ ಒಡ್ಡಿದರು.
ಒಂದೇ ಮಂತ್ರಘೋಷ -ಆದ್ಯ ಕನಸು
ತರುಣ ಧಮನಿಗಳಲಿ ಉರಿವ ಶಿಖೆ
ಜಾತಿ ಮತ ಪಂಥಗಳ ನಡುವೆ ಒಂದೇ ಮರ್ಮ
ಸ್ವಾತಂತ್ರ್ಯ ನಮ್ಮ ಧರ್ಮ

ಹುತ್ತ ಬೆಳೆದಿತ್ತು ಬೃಹದಾಕಾರ
ಆದರೆ ಪಕ್ಕದಲ್ಲೊಬ್ಬ ಅರೆನಗ್ನ ಮಂತ್ರವಾದಿ
ನಿಂತಿದ್ದ ಪುಂಗಿ ಹಿಡಿದು, ಹೆಡೆ ಎತ್ತಿದ
ಸರ್ಪಗಳ ಹೆಡೆ ಮುರಿಗೆ ಕಟ್ಟಲು
ಮತ್ತೊಬ್ಬ ಬಿಲ್ಲುಗಾರ ಕೋನೆ ಕೋನೆಗೂ
ಕಣ್ಣು ಮುಚ್ಚಿ ಬಾಣ ಬಿಡತೊಡಗಿದ.
ಇರುವೆ ಕಟ್ಟಿದ ಗೂಡು
ತನ್ನದೆಂದು ಬೀಗುತ್ತಿದ್ದ ಸರ್ಪಗಳು
ಸದ್ದಿಲ್ಲದೇ ಸರಿದು ಹೋದವು
ಹುತ್ತಕ್ಕೆ ಬೆಂಕಿ ಬೀಳತೊಡಗಲು
ನನಸಾಯಿತು ಸ್ವಾತಂತ್ರ್ಯ
ಭಾರತೀಯರ ಎದೆಗೂಡ ಕಹಳೆಯಲ್ಲೀಗ
ಜೈಹಿಂದ ಒಂದೇ ಮಂತ್ರ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...