Home / ಕವನ / ಕವಿತೆ / ಸ್ವಾತಂತ್ರ್ಯ- ಕನಸು ನನಸು

ಸ್ವಾತಂತ್ರ್ಯ- ಕನಸು ನನಸು

ಅವರು ಬಿಳಿ ಬಣ್ಣದ ಮಾಯಾ
ಮಂದರಿ ಹೊದ್ದು ಬಂದಿದ್ದರು
ತೆವಳುತ್ತ, ಸರ್ಪಸಂತತಿ
ಅನ್ನವಿಕ್ಕಿದ್ದಲ್ಲೇ ಕನ್ನವಿಕ್ಕುವುದು.
ಕಸಿದುಕೊಂಡರು-ಹಕ್ಕು, ಸ್ವಾತಂತ್ರ್ಯ
ದತ್ತು ಮಕ್ಕಳಿಗೆ ಹಕ್ಕಿಲ್ಲ, ಕರಾಕರಣೆ,
ಒಡೆದು ಆಳುವ ತಂತ್ರ ಕುತಂತ್ರ
ಶ್ರೇಷ್ಠ ನಾಗರಿಕತೆಯ ಬುಡದಲ್ಲಿತ್ತು
ಅಪರ ಅನಾಗರಿಕತೆ, ಮತ್ತೆ ಕೆಲವರ
ಕೈಯಲ್ಲಿತ್ತು ಧರ್ಮಗಾಥೆಯ ಹೊತ್ತಿಗೆ
ಬೆಣ್ಣೆಮಾತಿನ ಬುದ್ದಿವಂತರ ಮತ್ತೊಂದು
ಅವತಾರ – ಅವಾಂತರ ಮತಾಂತರ
ಕನಸಾಯಿತು ಸ್ವಾತಂತ್ರ್ಯ
ಹೆಣ್ಣು, ಹೊನ್ನು ಮಣ್ಣುಗಳ ಪರತಂತ್ರ
ಹುಟ್ಟದಿದ್ದರೆ ಹೇಗೆ? ಸೇಡು
ಮನೆ ಮನೆಯಂಗಳದಿ ಒಂದೇ ಕಲರವ
ಹಕ್ಕು-ಸ್ವಾತಂತ್ರ್ಯ, ಅಲ್ಲೊಬ್ಬ ಇಲ್ಲೊಬ್ಬರಲ್ಲ
ಅವರೊಳಗೆಲ್ಲಾ ಒಬ್ಬನೆ-ವೀರ
ಮುತ್ತಿದರು ಅಕ್ಷೋಹಿಣಿ, ಅಕ್ಷೋಹಿಣಿ
ಹಣಾಹಣಿಗೆ, ನೆತ್ತರುಕ್ಕಿಸಿದರು. ಗಲ್ಲು ಗೆದ್ದರು.
ಬೂಟು ಕಾಲಿಗೆ, ತುಪಾಕಿ ಪೀರಂಗಿಗೂ
ಗುಂಡುಗುಂಡಿಗೂ ಗುಂಡಿಗೆಯ ಒಡ್ಡಿದರು.
ಒಂದೇ ಮಂತ್ರಘೋಷ -ಆದ್ಯ ಕನಸು
ತರುಣ ಧಮನಿಗಳಲಿ ಉರಿವ ಶಿಖೆ
ಜಾತಿ ಮತ ಪಂಥಗಳ ನಡುವೆ ಒಂದೇ ಮರ್ಮ
ಸ್ವಾತಂತ್ರ್ಯ ನಮ್ಮ ಧರ್ಮ

ಹುತ್ತ ಬೆಳೆದಿತ್ತು ಬೃಹದಾಕಾರ
ಆದರೆ ಪಕ್ಕದಲ್ಲೊಬ್ಬ ಅರೆನಗ್ನ ಮಂತ್ರವಾದಿ
ನಿಂತಿದ್ದ ಪುಂಗಿ ಹಿಡಿದು, ಹೆಡೆ ಎತ್ತಿದ
ಸರ್ಪಗಳ ಹೆಡೆ ಮುರಿಗೆ ಕಟ್ಟಲು
ಮತ್ತೊಬ್ಬ ಬಿಲ್ಲುಗಾರ ಕೋನೆ ಕೋನೆಗೂ
ಕಣ್ಣು ಮುಚ್ಚಿ ಬಾಣ ಬಿಡತೊಡಗಿದ.
ಇರುವೆ ಕಟ್ಟಿದ ಗೂಡು
ತನ್ನದೆಂದು ಬೀಗುತ್ತಿದ್ದ ಸರ್ಪಗಳು
ಸದ್ದಿಲ್ಲದೇ ಸರಿದು ಹೋದವು
ಹುತ್ತಕ್ಕೆ ಬೆಂಕಿ ಬೀಳತೊಡಗಲು
ನನಸಾಯಿತು ಸ್ವಾತಂತ್ರ್ಯ
ಭಾರತೀಯರ ಎದೆಗೂಡ ಕಹಳೆಯಲ್ಲೀಗ
ಜೈಹಿಂದ ಒಂದೇ ಮಂತ್ರ
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...