Home / ಕವನ / ಕವಿತೆ / ಮೌನ ಮಾತಾಗುವ ಹೊತ್ತು

ಮೌನ ಮಾತಾಗುವ ಹೊತ್ತು

ಹೂಗಳ ಮೌನ ಮಾತಾಗುವ ಹೊತ್ತು
ನಾನು ಅರಳಬೇಕಷ್ಟೇ…
ವಿಷಾದದ ಹಗಲು
ಹಳತಾದ ರಾತ್ರಿಗಳು
ಹಳೆಯ ಕಾಗದದ ಪುಟದಂತೆ
ಅಟ್ಟಸೇರಿ ಎಷ್ಟೋದಿನ ಮೌನದಿ‌ ಮಲಗಿದಂತೆ
ರಾತ್ರಿಗಳಿಗೂ ವಯಸ್ಸಾಗುತ್ತದೆ
ಮುಪ್ಪಾಗುತ್ತದೆ ; ಚರ್ಮ ಸುಕ್ಕುಗಟ್ಟುತ್ತದೆ ಗೆಳೆಯಾ

ಬಯಲು ಬಿಕ್ಕಳಿಸುವ ಸಮಯ
ನಿನ್ನೆಗಳು ಮುಗ್ಗರಿಸಿ ಬಿದ್ದಿವೆ
ನಿನ್ನೆಗೆ ಕಂದನ ಪಾದವಾಗಿ
ವರ್ತಮಾನದ ಎದೆಗೆ ಒದೆಯುವ ಬಯಕೆ

ನಗರ ವಿಷಾದ ಹೊದ್ದು ಮಲಗುವ ಸಮಯ
ನಿನ್ನೆಗಳು ನಮ್ಮವಾಗಿದ್ದವು
ವರ್ತಮಾನ ನಮ್ಮದಲ್ಲ
ನಾಳೆಯೂ ಗೊತ್ತಿಲ್ಲ
ಗೊಂದಲದ ಬದುಕಿನಲಿ ಹಂಬಲ
ಮೊಳಕೆಗೆ ಮುನ್ನ ಸೋಲುತಿದೆ
ವರ್ತಮಾನಕೆ ಕಳೆದುದರ ಚಿಂತೆ ಹಳಹಳಿಕೆ

ನದಿ ದುಃಖಿಸುವ ಸಮಯ
ಹಾಗಿತ್ತು ಹೀಗಾಗಬೇಕಿತ್ತು ಏನಾಗಿಹೋಯಿತು ಹೀಗೆ ಬದಲಾಗಬಹುದು
ಕಷ್ಟ ; ಈ ಹಾಳು ಮನಸು ಬಂಧನಗಳ ಈ ಬಂಧನದಲ್ಲಿ
ಆ ಅದು ಸಾಧ್ಯವಿಲ್ಲ ಬಿಡು
ಕನಸು ಕಾಣಬೇಡ , ಮಾತು ಕೊಡಲಾರೆ ….

ಹಕ್ಕಿಗಳು ಗೂಡು ಸೇರುವ ಸಮಯ
ಈ ಮನುಷ್ಯರ ಗೊಣಗಾಟಗಳಲ್ಲಿ ವರ್ತಮಾನವೂ ಮುಪ್ಪಾಗಿ
ನಿನ್ನೆಯ ಹಳೆಯ ಪುಟಕ್ಕೆ ಸೇರುವ ಮುನ್ನ

ಎಲ್ಲವೂ ಶೃಂಗಾರ, ನಾನು ನೀನು
ಬೆತ್ತಲೆಯ ನದಿ ಬೆಟ್ಟ ಬಯಲು ಚಂದ್ರ ಹೂ ತಾರೆ

ನಿನ್ನೆ ಇವತ್ತು ನಾಳೆ ನಾಡಿದ್ದು
ನಾಲಿಗೆಗಳು ಶಬ್ದವಿಲ್ಲದ ಯುದ್ಧ ಮಾಡುವ ಸಮಯ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...