Home / ಕವನ / ಕವಿತೆ / ಮೌನ ಮಾತಾಗುವ ಹೊತ್ತು

ಮೌನ ಮಾತಾಗುವ ಹೊತ್ತು

ಹೂಗಳ ಮೌನ ಮಾತಾಗುವ ಹೊತ್ತು
ನಾನು ಅರಳಬೇಕಷ್ಟೇ…
ವಿಷಾದದ ಹಗಲು
ಹಳತಾದ ರಾತ್ರಿಗಳು
ಹಳೆಯ ಕಾಗದದ ಪುಟದಂತೆ
ಅಟ್ಟಸೇರಿ ಎಷ್ಟೋದಿನ ಮೌನದಿ‌ ಮಲಗಿದಂತೆ
ರಾತ್ರಿಗಳಿಗೂ ವಯಸ್ಸಾಗುತ್ತದೆ
ಮುಪ್ಪಾಗುತ್ತದೆ ; ಚರ್ಮ ಸುಕ್ಕುಗಟ್ಟುತ್ತದೆ ಗೆಳೆಯಾ

ಬಯಲು ಬಿಕ್ಕಳಿಸುವ ಸಮಯ
ನಿನ್ನೆಗಳು ಮುಗ್ಗರಿಸಿ ಬಿದ್ದಿವೆ
ನಿನ್ನೆಗೆ ಕಂದನ ಪಾದವಾಗಿ
ವರ್ತಮಾನದ ಎದೆಗೆ ಒದೆಯುವ ಬಯಕೆ

ನಗರ ವಿಷಾದ ಹೊದ್ದು ಮಲಗುವ ಸಮಯ
ನಿನ್ನೆಗಳು ನಮ್ಮವಾಗಿದ್ದವು
ವರ್ತಮಾನ ನಮ್ಮದಲ್ಲ
ನಾಳೆಯೂ ಗೊತ್ತಿಲ್ಲ
ಗೊಂದಲದ ಬದುಕಿನಲಿ ಹಂಬಲ
ಮೊಳಕೆಗೆ ಮುನ್ನ ಸೋಲುತಿದೆ
ವರ್ತಮಾನಕೆ ಕಳೆದುದರ ಚಿಂತೆ ಹಳಹಳಿಕೆ

ನದಿ ದುಃಖಿಸುವ ಸಮಯ
ಹಾಗಿತ್ತು ಹೀಗಾಗಬೇಕಿತ್ತು ಏನಾಗಿಹೋಯಿತು ಹೀಗೆ ಬದಲಾಗಬಹುದು
ಕಷ್ಟ ; ಈ ಹಾಳು ಮನಸು ಬಂಧನಗಳ ಈ ಬಂಧನದಲ್ಲಿ
ಆ ಅದು ಸಾಧ್ಯವಿಲ್ಲ ಬಿಡು
ಕನಸು ಕಾಣಬೇಡ , ಮಾತು ಕೊಡಲಾರೆ ….

ಹಕ್ಕಿಗಳು ಗೂಡು ಸೇರುವ ಸಮಯ
ಈ ಮನುಷ್ಯರ ಗೊಣಗಾಟಗಳಲ್ಲಿ ವರ್ತಮಾನವೂ ಮುಪ್ಪಾಗಿ
ನಿನ್ನೆಯ ಹಳೆಯ ಪುಟಕ್ಕೆ ಸೇರುವ ಮುನ್ನ

ಎಲ್ಲವೂ ಶೃಂಗಾರ, ನಾನು ನೀನು
ಬೆತ್ತಲೆಯ ನದಿ ಬೆಟ್ಟ ಬಯಲು ಚಂದ್ರ ಹೂ ತಾರೆ

ನಿನ್ನೆ ಇವತ್ತು ನಾಳೆ ನಾಡಿದ್ದು
ನಾಲಿಗೆಗಳು ಶಬ್ದವಿಲ್ಲದ ಯುದ್ಧ ಮಾಡುವ ಸಮಯ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...