ಕೇವಲ ನಗೆ

ಬೋಟಿನಲ್ಲಿ ಸಹಪ್ರಯಾಣ
ಕೆಲೆ ನಿಲ್ದಾಣದಲ್ಲಿ ಕೇವಲ ನಗೆ
ನಂತರ ಲೂವ್ರ್‌ ಮ್ಯೂಸಿಯಮಿನಲ್ಲಿ
ಬೆರಗಿನಿಂದ
ಎಲ್ಲರೂ ಕತ್ತೆತ್ತಿ ನೋಡುತಿದ್ದಾಗ
ನಾನು ಕಂಡದ್ದೇನು–
ನೋಡಲೆಂದು ಇಲ್ಲಿಯ ತನಕ ಬಂದ
ಮೋನಾ ಲಿಸಾ ಚಿತ್ರವನ್ನೆ ಅಥವ
ಹೆಸರು ಸ್ಥಳ ಗೊತ್ತಿರದ
ಕೇವಲ ಒಬ್ಬಳು ಹೆಂಗಸನ್ನೆ?

ಹೊರಗೆ ತಣ್ಣನೆ ಗಾಳಿಯಿದೆ
ಒಬ್ಬ ವ್ಯಾಪಾರಿ
ವಿದ್ಯುಚ್ಚಾಲಿತ ಹಕ್ಕಿಗಳನ್ನು ಮಾರುತ್ತಾನೆ
ಆ ಹಕ್ಕಿಗಳೋ ! ನಿಜವಾದ ಹಕ್ಕಿಗಳನ್ನು
ಅಣಕಿಸುವಂತೆ ಅಷ್ಟು ದೂರಕ್ಕೆ ಹಾರಿ
ಕೆಳಗೆ ಬಂದಿಳಿಯುತ್ತಿವೆ!
ಮಕ್ಕಳ ದೊಡ್ಡ ಗುಂಪೇ ಸೇರಿದೆ!

ಜಿನುಗು ಮಳೆಯಲ್ಲಿ ನಾನಿದೋ ಹೊರಟೆ
ಸಿಯೆನ್ ನದಿಯ ದಂಡೆಯ ಮೇಲೆ
ಹಲವು ವಿರೋಧಾಭಾಸಗಳನ್ನು
ತಲೆಯಲ್ಲಿ ಹೊತ್ತು
ಹುಡುಕಲೆಂದು ಆ
ಮಹಾ ಕಲಾವಿದನ ಜಗತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಪ್ತಗಾಮಿನಿ
Next post ಸನ್ಮಾನ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys