ಪರರ ಜಾಡನು ಹಿಡಿದು
ಪರದಾಡಬೇಡ
ಪ್ರೌಢಿಮೆಯ ಪರಿಪೂರ್ಣತೆಯಲ್ಲಿ
ಪರವಶನಾಗು ಮನವೇ
ಅಪಸ್ವರವು ನುಡಿಯೆಂದು
ಅವಮಾನ ಬೇಡ
ಅವಿರತದ ಸಾಧನೆಗೆ
ಅವಸರಿಸು ಮನವೇ
ದುಡ್ಡನ್ನು ಗಳಿಸುವಲಿ
ದೌರ್ಜನ್ಯ ಬೇಡ
ದರ್ಪವನ್ನು ತ್ಯಜಿಸಿ
ದಯಾಮಯಿಯಾಗು ಮನವೇ
ತಮವೆಂದು ಬದುಕು
ತಲ್ಲಣವು ಬೇಡ
ತರಣಿಯನು ಅನುವಲಿ
ತತ್ವರನಾಗು ಮನವೇ
ಹೆಣ್ಣು ಹೊನ್ನು ಮಣ್ಣಿಗೆ
ಹೆಣಗಾಡಬೇಡ
ಹದವರಿತು ಬದುಕಿನಲ್ಲಿ
ಹಾಯಾಗಿರು ಮನವೇ
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.