Home / ಕವನ / ಕವಿತೆ / ಆಗಮನ

ಆಗಮನ

ವಾಯುಸಂಚಾರಿ ಒಂದು ಪಟ್ಟಣದಿಂದ ಇನ್ನೊಂದಕ್ಕೆ ಹಾರಿ
ಬರುತ್ತಿದ್ದಾನೆ, ಕೆಳಗೆ ಮೋಡಗಳ ಮೇಲೆ ಮೋಡಗಳು ಬಿದ್ದು
ಅವುಗಳಂಚಿನಲಿ ಸೂರ್ಯನ ರಶ್ಮಿಗಳೆದ್ದು
ನಿಮಿಷಗಳು ಸರಿದರೂ ಸರಿಯುವುದಿಲ್ಲ ದಾರಿ

ಹೊಸೆಯುತ್ತಾನೆ ಮನಸ್ಸಿನಲ್ಲಿ ಒಂದು ಕವಿತೆಯ ಚರಣ:
ಎಲೆಲೆ ಗಗನ ಸಖಿ ಚಂದ್ರಮುಖಿ ಬಾರೆ
ಕಳಚಿ ಈ ಸೂಟುಬೂಟು ಆ ಅನಗತ್ಯದ ಸೀರೆ
ಮೋಡಗಳ ಮೆತ್ತೆಯೊಳಕ್ಕೆ ಹಾರೋಣ!

ಫಾರೂಕಬ್ದುಲ್ಲನ ಪತನ ವಿರೋಧಪಕ್ಷಗಳ ಪ್ರಕ್ಷೋಭನ
ಆಂತುಲೆಯ ವಿಚಾರಣೆ ಮುಂಬರುವ ಲೋಕಸಭಾ ಚುನಾವಣೆ
ಶೇರುಗಳ ಏರಿಳಿತ ಡಾಲರಿನ ಅನಿರೀಕ್ಷಿತ ಕುಸಿತ
ಶಬನಾ ಆಜ್ಮಿ ಸ್ಮಿತಾಪಾಟೀಲರ ಒಳಜಗಳ

ಆಹ! ಎಂತಹ- ಪೃಷ್ಠ!
ತಬ್ಬಿಕೊಳ್ಳಲೆಂದೇ ಉಬ್ಬಿನಿಂತ ಮಾಟ
ಕೇವಲ ಒಂದು ಒಳಚಡ್ಡಿಯ ಜಾಹೀರು
ಇರಲಿರಲಿ! ಈ ವಾರದ ಭವಿಷ್ಯ
ಏನು ವಿಷಯ?

“ಇಳಿಯಲಿದ್ದೇವೆ ನಾವೀಗ!
ದಯವಿಟ್ಟು ನಿಮ್ಮ ನಿಮ್ಮ
ಸೀಟು ಬೆಲ್ಟುಗಳನ್ನು ಕಟ್ಟಿಕೊಳ್ಳಿರಿ!
ಹೊಗೆಬತ್ತಿ ಸೇದದಿರಿ ! ಕೃತಜ್ಞತೆಗಳು !”
ಎನ್ನುತ್ತಾಳವಳು.

ಹೊರಗೆ ನೋಡುತ್ತಾನೆ-ಮೋಡಗಳಿಲ್ಲ
(ಶುಭ್ರ ವಾತಾವರಣ, ಸುಖಾಗಮನ)
ಎಷ್ಟೋ ದೂರ ಕೆಳಗೆ
ನೆಲ ಬಿದ್ದಿದೆ ಚಾಪೆಯ ಹಾಗೆ
ಮನೆ ಮರ ಕಾರ್ಖಾನೆ
ಮರೆತುಬಿಟ್ಪ ಆಟಿಕೆಗಳಂತೆ
ಮೊಡವೆಗಳಂಥ ಬಂಡೆಗಳು
ಇರುವೆಗಳಂತೆ ಸರಿಯುವ ಮನುಷ್ಯರು
ಇಷ್ಟೆತ್ತರದಿಂದಲೇ ಹೀಗೆ ಕಾಣಿಸಿದರೆ
ಇನ್ನೊಂದು ಗ್ರಹದಿಂದ ಹೇಗೆ ಕಾಣಿಸಬೇಡ!
ಎಂದುಕೊಳ್ಳುತ್ತಾನೆ-ಸೆಜಿಟೇರಿಯಸ್
ಧನುರ್ಧಾರಿ ಎಷ್ಟೋ ಬೇಟೆಗಳ ಹೊಡೆದವನು
ಸೀಟಿನೊಳಕ್ಕೆ ಜಾರಿ

ಎಂಥ ಸೆಕೆ ನೆಲದ ಮೇಲೆ
ನೂಕು ನುಗ್ಗಲು ಬೇರೆ!
ಯಾರ ಹೆಂಡಿರು ಯಾರ ಮಕ್ಕಳು
ಯಾರು ಯಾರಿಗೆ ಹಿಡಿದು ನಿಂತ ಹಾರಗಳು?
ಬಾಗಿಲಿನಿಂದಾಚೆ ಇರಿಸುತ್ತಾನೆ ಪಾದ
ಪರಿಚಯದ ಮುಖಗಳಿಗಾಗಿ ಹುಡುಕುತ್ತಾನೆ
ಇವನಲ್ಲ! ಇವನಲ್ಲ! ಎನ್ನುತ್ತವೆ
ಪ್ರತಿಯೊಂದು ಜತೆ ಕಣ್ಣುಗಳು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...