ಒಂದು ಬೇಸಿಗೆ

ಖಾಲಿಯಾದ ಬಾನು ನೀಲಿಯಾಗಿದೆ
ಬಿಸಿಲು ಬಗೆಯ ಬೆರಗಿಗೆ
ಮೋಡಗಳು ವಲಸೆ ಹೋಗಿವೆ
ಒಂಟಿ ಹಕ್ಕಿ ಬಿರುಬಿಸಿಲಲ್ಲೂ ಹಾಡುತಿದೆ.

ನೆತ್ತರದ ಕೆಂಪು ಧರೆಯ
ಕಾನ್ವಾಸಿನ ತುಂಬೆಲ್ಲಾ
ತಿಳಿ ಹಸಿರು ಚಿಗುರು ಮರಗಿಡಗಳು
ದಾರಿಯಲಿ ಯಾರ್‍ಯಾರೋ ದಾಟಿ ಹೋದ ಹೆಜ್ಜೆಗಳು.

ಕರಿ ಡಾಂಬರು ರಸ್ತೆ ಹುಟ್ಟು
ಹಾಕಿವೆ ಬಿಸಿಲ ಕುದುರೆ
ಮೌನದಾರಿಯಲಿ ಮಾತುಗಳು
ಸುಮ್ಮನೆ ಬಾಯಿ ಮುಚ್ಚಿಕೊಂಡಿವೆ

ನದಿಯ ನೀರು ಇಂಗಿ ಜಲ
ತುಸು ಬಿಣಚು ಕಲ್ಲುಗಳು
ಯಾರ್‍ಯಾರೋ ದಾರಿ ಹೋಕರು
ಹೇಳಲಿಲ್ಲ ವಿದಾಯ ಉಸಿರು ಕಂಪಿಸಿತು.

ಹಸಿವೆಯ ಜೀವ ನಿರಂತರ
ಮಿಡಿಯುತಿದೆ ಒಂದು ದಿನ
ಮೇಲಿಂದ ಇಳಿದು ಬರುವ ಜೀವ
ಜಲ ಹರಿದು ಜಗದ ಪರಿವರ್ತನೆ.

ಅರೆದುಕೊಂಡ ಬದುಕಿಗೊಂದು ಕಾಲ
ಋತು ಹಕ್ಕಿ ಹಾರಬೇಕು ಬಾನು ನೀಲಿಯಲಿ
ಎಲ್ಲೋ ಹಬ್ಬಿದ ಸಂಬಂಧದ ಎಳೆಗಳು
ಬೆಳೆಸಬೇಕಾದ ಬೆಳಕು ಸೂರ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ಸಮುದ್ರದಾಚೆಯಲ್ಲಿ
Next post ಸೂತ್ರಧಾರ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys