ಆ ಸಮುದ್ರದಾಚೆಯಲ್ಲಿ

ಆ ಸಮುದ್ರದಾಚೆಯಲ್ಲಿ
ಮುಗಿಲು ನೆಲವ ಕೂಡುವಲ್ಲಿ
ಹಿರಿಯಲೆಗಳ ಮಡಿಲಿನಲ್ಲಿ
ದೀಪವೊಂದಿದೆ
ನಿನ್ನ – ಜೀವವಲ್ಲಿದೆ !

ನೆಲವಾಗಸ ಸೇರುವಂತೆ
ನಮ್ಮಿಬ್ಬರ ಒಲವಿನ ಜತೆ
ಆ ಕೊನೆಯಲ್ಲಿ ಒಂದೆ ಅಂತೆ
ನನ್ನ ಕನಸದು
ಬರಿಯ – ಹೊನ್ನ ಕನಸದು

ಅಂತು ಅಂದು ನಿನ್ನ ಜೀವ
-ನನ್ನ ಹೃದಯದೊಂದು ಭಾವ-
ನೋವನಿತ್ತು ಜಗದ ಸಾವ
ಉಡಿಗೆ ಮರಳಿತು
ನನ್ನ – ಕನಸು ಉರುಳಿತು

ನಿನ್ನ ಕೂಡುವಾಸೆಯಿಂದೆ
ನನ್ನೆದೆ ಕಿರುದೋಣಿಯೊದೆಂದೆ
ಮುಂದೆ ಸಾಗೆ, ಮುಗಿಲು ಮುಂದೆ
ಮುಂದೆ ಸಾಗಿದೆ
ನಿನ್ನ ನೆಲೆಯ ತೋರದೆ!

ಇಂತಿರಲೆದೆಗೇನು ಗತಿ?
ಮುಂದೆ ಸಾಗಲೇನು ಪ್ರತಿ?
ಕಳೆವುದಿಲ್ಲ ಜಗದ ಮಿತಿ?
– ಹೃದಯ ಬಿರಿದಿದೆ
ನನ್ನ- ದೋಣಿ ಮುಳುಗಿದೆ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರೋಪ – ೧
Next post ಒಂದು ಬೇಸಿಗೆ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys