ಏನೆಂಬೆ…

ಈ ಊರು ಕೇರಿಗೆ ಅಂತರವೇನು?
ದೇವರಾಣೆ ಕಾಣೆ! ಸತ್ಯಸುಳ್ಳಿನ ಅಂತರ,
ಎಲ್ಲ ಮನುಜರ ಹುಟ್ಟಿನ ಗುಟ್ಟು ಒಂದೇ…
ನಡೆವ ನೆಲ, ಕುಡಿವ ಜಲ,
ಉಂಭೊ ಬಾನ, ಉಡೋ ಬಟ್ಟೆವೊಂದೇ…
ಸುರಿವ ಮಳೆ, ಕರೆವ ಹೆಸರೊಂದೇ…
ಈ ಊರು ಕೇರಿಗೆ ಬಿಸಿಲು, ನೆರಳೂ, ಮಳೆವೊಂದೇ…
ಈ ಮನುಜರಲ್ಲೆಕೋ… ಮೇಲು, ಕೀಳು, ನಾ ಕಾಣೆ!?


ಸತ್ತ ಬಳಿಕ ನೆಲದ ಒಳಗೆ.
ಜಾತಿ, ಭೇದ, ಮನದೊಳಗೆ.
ಈ ಊರು, ಕೇರಿನ, ಬೇರೆ ಮಾಡಿ,
ಕೇರಿಗೂ ಹೊಲಸು,
ಈ ನಿಮ್ಮ ಮನಸು!


ಈ ನಿಮ್ಮ ಕೊಳಕು ಬುದ್ಧಿಗೆ-
ಹಂದಿ, ಕಾಗೆ, ಹದ್ದು, ನಾಯಿ, ಗೂಬೆಗಿಂತ ಕಡೆಯೆಂಬೆ…
ಸತ್ತ ದನ ತಿಂದು, ತಿಂದು,
ಸತ್ತತ್ತಿಹರನು, ಬಡಿದೆಚ್ಚರಿಸದೇ…
ಬಿಡದೆ, ನಿತ್ಯ ಹರಿದು ತಿನ್ನೊ…
ಈ ನಿಮ್ಮ ಜಾಣಕುರುಡಿಗೆ-
‘ಥೂ!’ ಎಂಬೆ…


ಅಸ್ಪೃಶ್ಯರೆಂಬಾಪಟ್ಟಿ ಕಟ್ಟಿ,
ನಮಗೂ ಕೆಟ್ಟದಾಗಿ…
ಈ ನಿಮ್ಮ ಬದುಕು, ಭವಣೆಗೆ-
‘ಛೀ!’ ಎಂಬೆ…


ಈ ಊರು, ಕೇರಿನ, ಒಂದು ಮಾಡಿ,
ಕುಡಿವಾ ನೀರು, ಉಂಬಾ ಬಾನಾ, ಗಾಳಿ ಸೇವನೆ…
ಎಲ್ಲ ಒಂದೂ ಎಂದೂ-
ಅಕ್ಕಪಕ್ಕ ಮನೆಗಳಲ್ಲಿ, ನೆಲಸಬಲ್ಲಿರಾ??
ಆಗ ‘ಹೌದು’ ಎಂಬೆ…


ಹೆಣ್ಣು, ಗಂಡು, ಸಮವೆಂದೂ…
ಲಗ್ನ ಮಾಡಿ, ಜಾತಿ, ಮತ, ಕುಲ, ಭೇದ,
ಮರೆಯ ಬಲ್ಲಿರಾ??
ಆಗ ‘ಭಪ್ಪರೆ’ ಎಂಬೆ…


ಎಂಬೆ… ಎಂಬೆ… ಸರ್ವಜನರೂ…
ಸಮಾನರೆಂಬೆ…
ರಂಬೆ, ಕೊಂಬೆ, ಗೊಂಬೆ, ಆಗುಂಬೆ ಎಂಬೆ…
ಈ ಊರು, ಕೇರಿ, ಕಲಿತ ದಿನವೇ-
‘ಸ್ವರ್ಗ’ ಎಂಬೆ…!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾರೆಯರು
Next post ನರಸಿಯ ಪರಿಸೆ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…