Home / ಕವನ / ಕವಿತೆ / ಏನೆಂಬೆ…

ಏನೆಂಬೆ…

ಈ ಊರು ಕೇರಿಗೆ ಅಂತರವೇನು?
ದೇವರಾಣೆ ಕಾಣೆ! ಸತ್ಯಸುಳ್ಳಿನ ಅಂತರ,
ಎಲ್ಲ ಮನುಜರ ಹುಟ್ಟಿನ ಗುಟ್ಟು ಒಂದೇ…
ನಡೆವ ನೆಲ, ಕುಡಿವ ಜಲ,
ಉಂಭೊ ಬಾನ, ಉಡೋ ಬಟ್ಟೆವೊಂದೇ…
ಸುರಿವ ಮಳೆ, ಕರೆವ ಹೆಸರೊಂದೇ…
ಈ ಊರು ಕೇರಿಗೆ ಬಿಸಿಲು, ನೆರಳೂ, ಮಳೆವೊಂದೇ…
ಈ ಮನುಜರಲ್ಲೆಕೋ… ಮೇಲು, ಕೀಳು, ನಾ ಕಾಣೆ!?


ಸತ್ತ ಬಳಿಕ ನೆಲದ ಒಳಗೆ.
ಜಾತಿ, ಭೇದ, ಮನದೊಳಗೆ.
ಈ ಊರು, ಕೇರಿನ, ಬೇರೆ ಮಾಡಿ,
ಕೇರಿಗೂ ಹೊಲಸು,
ಈ ನಿಮ್ಮ ಮನಸು!


ಈ ನಿಮ್ಮ ಕೊಳಕು ಬುದ್ಧಿಗೆ-
ಹಂದಿ, ಕಾಗೆ, ಹದ್ದು, ನಾಯಿ, ಗೂಬೆಗಿಂತ ಕಡೆಯೆಂಬೆ…
ಸತ್ತ ದನ ತಿಂದು, ತಿಂದು,
ಸತ್ತತ್ತಿಹರನು, ಬಡಿದೆಚ್ಚರಿಸದೇ…
ಬಿಡದೆ, ನಿತ್ಯ ಹರಿದು ತಿನ್ನೊ…
ಈ ನಿಮ್ಮ ಜಾಣಕುರುಡಿಗೆ-
‘ಥೂ!’ ಎಂಬೆ…


ಅಸ್ಪೃಶ್ಯರೆಂಬಾಪಟ್ಟಿ ಕಟ್ಟಿ,
ನಮಗೂ ಕೆಟ್ಟದಾಗಿ…
ಈ ನಿಮ್ಮ ಬದುಕು, ಭವಣೆಗೆ-
‘ಛೀ!’ ಎಂಬೆ…


ಈ ಊರು, ಕೇರಿನ, ಒಂದು ಮಾಡಿ,
ಕುಡಿವಾ ನೀರು, ಉಂಬಾ ಬಾನಾ, ಗಾಳಿ ಸೇವನೆ…
ಎಲ್ಲ ಒಂದೂ ಎಂದೂ-
ಅಕ್ಕಪಕ್ಕ ಮನೆಗಳಲ್ಲಿ, ನೆಲಸಬಲ್ಲಿರಾ??
ಆಗ ‘ಹೌದು’ ಎಂಬೆ…


ಹೆಣ್ಣು, ಗಂಡು, ಸಮವೆಂದೂ…
ಲಗ್ನ ಮಾಡಿ, ಜಾತಿ, ಮತ, ಕುಲ, ಭೇದ,
ಮರೆಯ ಬಲ್ಲಿರಾ??
ಆಗ ‘ಭಪ್ಪರೆ’ ಎಂಬೆ…


ಎಂಬೆ… ಎಂಬೆ… ಸರ್ವಜನರೂ…
ಸಮಾನರೆಂಬೆ…
ರಂಬೆ, ಕೊಂಬೆ, ಗೊಂಬೆ, ಆಗುಂಬೆ ಎಂಬೆ…
ಈ ಊರು, ಕೇರಿ, ಕಲಿತ ದಿನವೇ-
‘ಸ್ವರ್ಗ’ ಎಂಬೆ…!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...