ಏನೆಂಬೆ…

ಈ ಊರು ಕೇರಿಗೆ ಅಂತರವೇನು?
ದೇವರಾಣೆ ಕಾಣೆ! ಸತ್ಯಸುಳ್ಳಿನ ಅಂತರ,
ಎಲ್ಲ ಮನುಜರ ಹುಟ್ಟಿನ ಗುಟ್ಟು ಒಂದೇ…
ನಡೆವ ನೆಲ, ಕುಡಿವ ಜಲ,
ಉಂಭೊ ಬಾನ, ಉಡೋ ಬಟ್ಟೆವೊಂದೇ…
ಸುರಿವ ಮಳೆ, ಕರೆವ ಹೆಸರೊಂದೇ…
ಈ ಊರು ಕೇರಿಗೆ ಬಿಸಿಲು, ನೆರಳೂ, ಮಳೆವೊಂದೇ…
ಈ ಮನುಜರಲ್ಲೆಕೋ… ಮೇಲು, ಕೀಳು, ನಾ ಕಾಣೆ!?


ಸತ್ತ ಬಳಿಕ ನೆಲದ ಒಳಗೆ.
ಜಾತಿ, ಭೇದ, ಮನದೊಳಗೆ.
ಈ ಊರು, ಕೇರಿನ, ಬೇರೆ ಮಾಡಿ,
ಕೇರಿಗೂ ಹೊಲಸು,
ಈ ನಿಮ್ಮ ಮನಸು!


ಈ ನಿಮ್ಮ ಕೊಳಕು ಬುದ್ಧಿಗೆ-
ಹಂದಿ, ಕಾಗೆ, ಹದ್ದು, ನಾಯಿ, ಗೂಬೆಗಿಂತ ಕಡೆಯೆಂಬೆ…
ಸತ್ತ ದನ ತಿಂದು, ತಿಂದು,
ಸತ್ತತ್ತಿಹರನು, ಬಡಿದೆಚ್ಚರಿಸದೇ…
ಬಿಡದೆ, ನಿತ್ಯ ಹರಿದು ತಿನ್ನೊ…
ಈ ನಿಮ್ಮ ಜಾಣಕುರುಡಿಗೆ-
‘ಥೂ!’ ಎಂಬೆ…


ಅಸ್ಪೃಶ್ಯರೆಂಬಾಪಟ್ಟಿ ಕಟ್ಟಿ,
ನಮಗೂ ಕೆಟ್ಟದಾಗಿ…
ಈ ನಿಮ್ಮ ಬದುಕು, ಭವಣೆಗೆ-
‘ಛೀ!’ ಎಂಬೆ…


ಈ ಊರು, ಕೇರಿನ, ಒಂದು ಮಾಡಿ,
ಕುಡಿವಾ ನೀರು, ಉಂಬಾ ಬಾನಾ, ಗಾಳಿ ಸೇವನೆ…
ಎಲ್ಲ ಒಂದೂ ಎಂದೂ-
ಅಕ್ಕಪಕ್ಕ ಮನೆಗಳಲ್ಲಿ, ನೆಲಸಬಲ್ಲಿರಾ??
ಆಗ ‘ಹೌದು’ ಎಂಬೆ…


ಹೆಣ್ಣು, ಗಂಡು, ಸಮವೆಂದೂ…
ಲಗ್ನ ಮಾಡಿ, ಜಾತಿ, ಮತ, ಕುಲ, ಭೇದ,
ಮರೆಯ ಬಲ್ಲಿರಾ??
ಆಗ ‘ಭಪ್ಪರೆ’ ಎಂಬೆ…


ಎಂಬೆ… ಎಂಬೆ… ಸರ್ವಜನರೂ…
ಸಮಾನರೆಂಬೆ…
ರಂಬೆ, ಕೊಂಬೆ, ಗೊಂಬೆ, ಆಗುಂಬೆ ಎಂಬೆ…
ಈ ಊರು, ಕೇರಿ, ಕಲಿತ ದಿನವೇ-
‘ಸ್ವರ್ಗ’ ಎಂಬೆ…!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾರೆಯರು
Next post ನರಸಿಯ ಪರಿಸೆ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys