ಏನೆಂಬೆ…

ಈ ಊರು ಕೇರಿಗೆ ಅಂತರವೇನು?
ದೇವರಾಣೆ ಕಾಣೆ! ಸತ್ಯಸುಳ್ಳಿನ ಅಂತರ,
ಎಲ್ಲ ಮನುಜರ ಹುಟ್ಟಿನ ಗುಟ್ಟು ಒಂದೇ…
ನಡೆವ ನೆಲ, ಕುಡಿವ ಜಲ,
ಉಂಭೊ ಬಾನ, ಉಡೋ ಬಟ್ಟೆವೊಂದೇ…
ಸುರಿವ ಮಳೆ, ಕರೆವ ಹೆಸರೊಂದೇ…
ಈ ಊರು ಕೇರಿಗೆ ಬಿಸಿಲು, ನೆರಳೂ, ಮಳೆವೊಂದೇ…
ಈ ಮನುಜರಲ್ಲೆಕೋ… ಮೇಲು, ಕೀಳು, ನಾ ಕಾಣೆ!?


ಸತ್ತ ಬಳಿಕ ನೆಲದ ಒಳಗೆ.
ಜಾತಿ, ಭೇದ, ಮನದೊಳಗೆ.
ಈ ಊರು, ಕೇರಿನ, ಬೇರೆ ಮಾಡಿ,
ಕೇರಿಗೂ ಹೊಲಸು,
ಈ ನಿಮ್ಮ ಮನಸು!


ಈ ನಿಮ್ಮ ಕೊಳಕು ಬುದ್ಧಿಗೆ-
ಹಂದಿ, ಕಾಗೆ, ಹದ್ದು, ನಾಯಿ, ಗೂಬೆಗಿಂತ ಕಡೆಯೆಂಬೆ…
ಸತ್ತ ದನ ತಿಂದು, ತಿಂದು,
ಸತ್ತತ್ತಿಹರನು, ಬಡಿದೆಚ್ಚರಿಸದೇ…
ಬಿಡದೆ, ನಿತ್ಯ ಹರಿದು ತಿನ್ನೊ…
ಈ ನಿಮ್ಮ ಜಾಣಕುರುಡಿಗೆ-
‘ಥೂ!’ ಎಂಬೆ…


ಅಸ್ಪೃಶ್ಯರೆಂಬಾಪಟ್ಟಿ ಕಟ್ಟಿ,
ನಮಗೂ ಕೆಟ್ಟದಾಗಿ…
ಈ ನಿಮ್ಮ ಬದುಕು, ಭವಣೆಗೆ-
‘ಛೀ!’ ಎಂಬೆ…


ಈ ಊರು, ಕೇರಿನ, ಒಂದು ಮಾಡಿ,
ಕುಡಿವಾ ನೀರು, ಉಂಬಾ ಬಾನಾ, ಗಾಳಿ ಸೇವನೆ…
ಎಲ್ಲ ಒಂದೂ ಎಂದೂ-
ಅಕ್ಕಪಕ್ಕ ಮನೆಗಳಲ್ಲಿ, ನೆಲಸಬಲ್ಲಿರಾ??
ಆಗ ‘ಹೌದು’ ಎಂಬೆ…


ಹೆಣ್ಣು, ಗಂಡು, ಸಮವೆಂದೂ…
ಲಗ್ನ ಮಾಡಿ, ಜಾತಿ, ಮತ, ಕುಲ, ಭೇದ,
ಮರೆಯ ಬಲ್ಲಿರಾ??
ಆಗ ‘ಭಪ್ಪರೆ’ ಎಂಬೆ…


ಎಂಬೆ… ಎಂಬೆ… ಸರ್ವಜನರೂ…
ಸಮಾನರೆಂಬೆ…
ರಂಬೆ, ಕೊಂಬೆ, ಗೊಂಬೆ, ಆಗುಂಬೆ ಎಂಬೆ…
ಈ ಊರು, ಕೇರಿ, ಕಲಿತ ದಿನವೇ-
‘ಸ್ವರ್ಗ’ ಎಂಬೆ…!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾರೆಯರು
Next post ನರಸಿಯ ಪರಿಸೆ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…