Home / ಕವನ / ಕವಿತೆ / ದೊಡ್ಡ ಜನರು

ದೊಡ್ಡ ಜನರು

ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು
ಹಳೆ ಕಾಡುಗಳಿಂದ ಉರುಳಿಸಿದರು.  ಚಿತ್ತಾರದ ಮಂಚಗಳನ್ನು
ಪಳಗಿದ ಕೆಲಸದವರಿಂದ ಮಾಡಿಸಿದರು.  ನೆಲಕ್ಕೆ ಹಾಸಿದ ಬಣ್ಣಬಣ್ಣದ
ಕಲ್ಲುಗಳನ್ನು ಬಹುದೂರದಿಂದ ತರಿಸಿದರು.  ಪಡಸಾಲೆಯಲ್ಲಿ ತೂಗಿದ
ಬೃಹತ್ತಾದ ತೈಲಚಿತ್ರಗಳು ಹಿರಿಯರದು.  ಆ ಮೂಲೆಯಲ್ಲೊಂದು
ಎರಕದ ಬುದ್ಧ. ಇಲ್ಲೊಂದು ಕಪ್ಪು ಶಿಲೆಯ ಗೊಮ್ಮಟ.
ದೊಡ್ಡ ಜನರು ದೊಡ್ಡ ಮನೆಗಳಲ್ಲಿ ವಾಸ ಮಾಡುತ್ತಾರೆ.

ಸರ್ವಸೇವಾ ಸಂಸ್ಥೆಯ ಅಧ್ಯಕ್ಷಿಣಿ ಕಾಮಾಕ್ಷಮ್ಮ
ನೆಲ ಮುಟ್ಟಿದ್ದೆ ಅಪರೂಪ.  ಚಿನ್ನದ ಬಣ್ಣದ ಸಾಂಡಲುಗಳನ್ನು
ಸ್ನಾನಗೃಹದ ಹೊರಗೊಮ್ಮೆ, ಶಯನಗೃಹದ ಒಳಗೊಮ್ಮೆ
ತೆಗೆಯುತ್ತಾರಷ್ಟೆ. ಮತ್ತೆ ಒಂದು ರಾಬಿನ್ಸನೊಂದಿಗೇ
ಒಂದು ಭೈರಪ್ಪನೊಂದಿಗೋ ಮೆತ್ತೆಯಲ್ಲಿ ಮಲಗಿ ನಿದ್ದೆಹೋದರೆ
ಎಬ್ಬಿಸಬೇಕು ಅಡಿಗೆಯವಳು ಅಥವ ಸ್ಥಳೀಯ ಮುಖಂಡರು.
ದೊಡ್ಡ ಜನರು ದೊಡ್ಡ ಹೆಂಗಸರನ್ನು ಮದುವೆಯಾಗುತ್ತಾರೆ.

ಬೇಸಿಗೆಯ ಇಳಿಹೊತ್ತಿನಲ್ಲಿ ಹೊರಗೆ ಕುಳಿತುಕೊಳ್ಳುವುದು ಆರಾಮ.
ಗುಲ್ಮೊಹರ್‍ ಮರಗಳ ಕೆಳಗೆ ಬೆತ್ತದ ಆಸನಗಳನ್ನು ಹಾಕಿದೆ.
ಟೀಪಾಯಿಯ ಮೇಲೆ ಚಹಾದ ಕೆಟ್ಟಲು ಕಪ್ಪುಗಳು.
ಸೆಕೆಗಾಲದಲ್ಲಿ ಲಿಂಬೆಹಣ್ಣಿನ ಚಹಾವನ್ನೆ ಎಲ್ಲರೂ ಇಷ್ಟಪಡುತ್ತಾರೆ.
ಮಾನವೀಯ ಹಕ್ಕುಗಳೆ? ನೇಪಾಳವನ್ನು ತಗೊಳ್ಳಿ, ಉದಾಹರಣೆಗೆ.
ಹಿಂದೆ ನಾನು ಡಾರ್ಜೀಲಿಂಗಿನಲ್ಲಿದ್ದಾಗ ಒಬ್ಬಳು ನೇಪಾಳಿ ಸಿಕ್ಕಿದಳು.
ದೊಡ್ಡ ಜನರು ದೊಡ್ಡ ಸಂಗತಿಗಳನ್ನು ಚರ್ಚಿಸುತ್ತಾರೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...