Home / ಕವನ / ಕವಿತೆ / ದೊಡ್ಡ ಜನರು

ದೊಡ್ಡ ಜನರು

ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು
ಹಳೆ ಕಾಡುಗಳಿಂದ ಉರುಳಿಸಿದರು.  ಚಿತ್ತಾರದ ಮಂಚಗಳನ್ನು
ಪಳಗಿದ ಕೆಲಸದವರಿಂದ ಮಾಡಿಸಿದರು.  ನೆಲಕ್ಕೆ ಹಾಸಿದ ಬಣ್ಣಬಣ್ಣದ
ಕಲ್ಲುಗಳನ್ನು ಬಹುದೂರದಿಂದ ತರಿಸಿದರು.  ಪಡಸಾಲೆಯಲ್ಲಿ ತೂಗಿದ
ಬೃಹತ್ತಾದ ತೈಲಚಿತ್ರಗಳು ಹಿರಿಯರದು.  ಆ ಮೂಲೆಯಲ್ಲೊಂದು
ಎರಕದ ಬುದ್ಧ. ಇಲ್ಲೊಂದು ಕಪ್ಪು ಶಿಲೆಯ ಗೊಮ್ಮಟ.
ದೊಡ್ಡ ಜನರು ದೊಡ್ಡ ಮನೆಗಳಲ್ಲಿ ವಾಸ ಮಾಡುತ್ತಾರೆ.

ಸರ್ವಸೇವಾ ಸಂಸ್ಥೆಯ ಅಧ್ಯಕ್ಷಿಣಿ ಕಾಮಾಕ್ಷಮ್ಮ
ನೆಲ ಮುಟ್ಟಿದ್ದೆ ಅಪರೂಪ.  ಚಿನ್ನದ ಬಣ್ಣದ ಸಾಂಡಲುಗಳನ್ನು
ಸ್ನಾನಗೃಹದ ಹೊರಗೊಮ್ಮೆ, ಶಯನಗೃಹದ ಒಳಗೊಮ್ಮೆ
ತೆಗೆಯುತ್ತಾರಷ್ಟೆ. ಮತ್ತೆ ಒಂದು ರಾಬಿನ್ಸನೊಂದಿಗೇ
ಒಂದು ಭೈರಪ್ಪನೊಂದಿಗೋ ಮೆತ್ತೆಯಲ್ಲಿ ಮಲಗಿ ನಿದ್ದೆಹೋದರೆ
ಎಬ್ಬಿಸಬೇಕು ಅಡಿಗೆಯವಳು ಅಥವ ಸ್ಥಳೀಯ ಮುಖಂಡರು.
ದೊಡ್ಡ ಜನರು ದೊಡ್ಡ ಹೆಂಗಸರನ್ನು ಮದುವೆಯಾಗುತ್ತಾರೆ.

ಬೇಸಿಗೆಯ ಇಳಿಹೊತ್ತಿನಲ್ಲಿ ಹೊರಗೆ ಕುಳಿತುಕೊಳ್ಳುವುದು ಆರಾಮ.
ಗುಲ್ಮೊಹರ್‍ ಮರಗಳ ಕೆಳಗೆ ಬೆತ್ತದ ಆಸನಗಳನ್ನು ಹಾಕಿದೆ.
ಟೀಪಾಯಿಯ ಮೇಲೆ ಚಹಾದ ಕೆಟ್ಟಲು ಕಪ್ಪುಗಳು.
ಸೆಕೆಗಾಲದಲ್ಲಿ ಲಿಂಬೆಹಣ್ಣಿನ ಚಹಾವನ್ನೆ ಎಲ್ಲರೂ ಇಷ್ಟಪಡುತ್ತಾರೆ.
ಮಾನವೀಯ ಹಕ್ಕುಗಳೆ? ನೇಪಾಳವನ್ನು ತಗೊಳ್ಳಿ, ಉದಾಹರಣೆಗೆ.
ಹಿಂದೆ ನಾನು ಡಾರ್ಜೀಲಿಂಗಿನಲ್ಲಿದ್ದಾಗ ಒಬ್ಬಳು ನೇಪಾಳಿ ಸಿಕ್ಕಿದಳು.
ದೊಡ್ಡ ಜನರು ದೊಡ್ಡ ಸಂಗತಿಗಳನ್ನು ಚರ್ಚಿಸುತ್ತಾರೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ