Home / ಲೇಖನ / ವಿಜ್ಞಾನ / ಭತ್ತದ ಸಿಪ್ಪೆ ಹೊಂಗೆ ಎಣ್ಣೆಯಿಂದ ವಿದ್ಯುತ್ ಉತ್ಪಾದನೆ

ಭತ್ತದ ಸಿಪ್ಪೆ ಹೊಂಗೆ ಎಣ್ಣೆಯಿಂದ ವಿದ್ಯುತ್ ಉತ್ಪಾದನೆ

ಸಾಂಪ್ರದಾಯಿಕ ಮೂಲದಿಂದ ದೊರೆಯುವ ವಿದ್ಯುತ್ ಇಂದಿನ ಜನಸಂಖ್ಯೆಗೆ ಏನೂ ಸಾಕಾಗುವದಿಲ್ಲ ಅಸಂಪ್ರಾದಾಯಿಕವಾಗಿ ವಿದ್ಯುತ್ತು ಉತ್ಪಾದಿಸಿ ಸಮಸ್ಯೆಗೆ ಉತ್ತರವನ್ನು ಕಂಡುಹಿಡಿಯಲು ಇತ್ತೀಚೆಗೆ ಅನೇಕ ವಿಜ್ಞಾನಿಗಳು ಪ್ರಯೋಗಗಳನ್ನು ನಡೆಯಿಸಿ ಸಫಲರಾಗಿದ್ದಾರೆ. ಬದಲಿ ಇಂಧನದ ಅಗತ್ಯತೆಗೆ ನಿಧಾನವಾಗಿ ಉತ್ತರಗಳು ದೊರೆಯುತ್ತಲಿವೆ. 1998ರಲ್ಲಿ ಕರ್ನಾಟಕ ರಾಜ್ಯದ ತುಮಕೂರಿನ 4 ಹಳ್ಳಿಗಳು ಹೊಂಗೆ ಎಣ್ಣೆಯಿಂದ ವಿದ್ಯುತ್ ಉತ್ಪಾದಿಸಿಕೊಂಡು ಬೆಳಗುತ್ತಿವೆ. ಎಂದರೆ ಆಶ್ಚರ್ಯವಾಗದಿರದು. ಈಗಾಗಲೇ ಆಸ್ಟ್ರೇಲಿಯಾ, ಪಿಜಿ ಮೊದಲಾದ ದೇಶಗಳಲ್ಲಿ ಡಿಸೆಲ್‌ಗೆ ಬದಲಾಗಿ ಹೊಂಗೆ ಎಣ್ಣೆಯನ್ನು ಬಳಸಲಾಗುತ್ತದೆ. ಸ ಸ್ಟೆನೇಬಲ್ ಟ್ರಾನ್ಸ್ ಫಾರ್ಮೇಶನ್ ಆಫ್ ರೂರಲ್ ಏರಿಯಾಸ್ ಎಂಬ ಸಂಸ್ಥೆಯ ನೇತೃತ್ವದಲ್ಲಿ ತುಮಕೂರಿನ ಪ್ರದೇಶದ ಹಳ್ಳಿಗಳಲ್ಲಿ ವಿದ್ಯುತ್‌ನ್ನು ಉತ್ಪಾದಿಸಿ ಉಪಯೋಗಿಸಿಲಾಗುತ್ತದೆ. ಮೇಲ್ಕಂಡ ಕಂಪನಿಯು ಹಳ್ಳಿಗಳಲ್ಲಿ ವಿಫಲವಾಗಿ ಹೊಂಗೆ ಮರಗಳನ್ನು ಬೆಳೆಸುವ ಯೋಜನೆ ಹಾಕಿದೆ. ಒಂದು ಮರದಿಂದ ಕನಿಷ್ಟ 90 ಕೆ.ಜಿ.ಗಳಷ್ಟು ತೈಲ ಬೀಜ ದೊರೆಯುತ್ತಿದ್ದು ಈ ಬೀಜದಿಂದ ಎಣ್ಣೆ ತಯಾರಿಸಿ ವಿದ್ಯುತ್‌ನ್ನು ಪಡೆಯಲಾಗುತ್ತದೆ. ಪ್ರತಿಯೊಂದು ಕುಟುಂಬವೂ 20 ರಿಂದ 30 ಹೊಂಗೆ ಮರಗಳನ್ನು ಹೊಂದಿದ್ದರೆ ಇಡೀ ವರ್ಷ ಆ ಮನೆಗೆ ಬೆಳಕಿನ ಭಾಗ್ಯ ಕಲ್ಪಿಸಿದಂತೆ ಈ ಎಲ್ಲ ಮರಗಳಿಂದ ತಿಂಗಳಿಗೆ 120 ಯುನಿಟ್‌ಗಳಷ್ಟು ವಿದ್ಯುತ್‌ನ್ನು ಸಂಪಾದಿಸಬಹುದು.

ಇದರಂತೆ ನಮ್ಮ ದೇಶದ ಪ್ರಮುಖ ಆಹಾರವಾದ ಭತ್ತವು ಆಕ್ಕಿಯಾಗಿ ಪರಿವರ್ತನೆಗೊಂಡು, ಉಳಿದ ಸಿಪ್ಪೆಯು ಉಪ ಉತ್ಪನ್ನವಾಗಿ ಬಳಕೆಗೆ ಬರುತ್ತದೆ. ವಿಶಾಖ ಪಟ್ಟಣದಲ್ಲಿರುವ ”ಘನ ವ್ಯರ್ಥ ವಸ್ತು ಸಂಶೋಧನೆ ಮತ್ತು ಪರಿಸರ ಸಂರಕ್ಷಣೆ ಸಂಸ್ಥೆಯ ನಿರ್ದೇಶಕರಾದ ಕಾಳಿದಾಸರ ಪ್ರಕಾರ ಭತ್ತದ ಸಿಪ್ಪೆಯನ್ನು ವಿದ್ಯುತ್ ಶಕ್ತಿ ಉತ್ಪಾದನೆಯಾಗಿ ಬಳಸಿಕೊಂಡಲ್ಲಿ ದೇಶದ ಸಮಗ್ರ ಚಿತ್ರವೇ ಬದಲಾಗುತ್ತದೆಂದು ಹೇಳುತ್ತಾರೆ. ಒಂದು ಮೆಗಾವಾಟ್ ಸಾಮರ್ಥ್ಯದ ಭತ್ತದ ಸಿಪ್ಪೆ ಆಧಾರಿತ ವಿದ್ಯುತ್ ಉತ್ಪಾದನಾ ಘಟಕವು 70 ಲಕ್ಷ ಯುನಿಟ್‌ಗಳ ವಿದ್ಯುತ್‌ನ್ನು ಪಡೆಯಬಹುದೆಂದು ಪ್ರಯೋಗಗಳಿಂದ ದೃಢಪಟ್ಟಿದೆ. ಭತ್ತದ ಸಿಪ್ಪೆಯನ್ನು ಸುಟ್ಟು ಅದರ ಉಷ್ಪತೆಯನ್ನು ಬಳಸಿಕೊಂಡು ವಿದ್ಯುತ್ ತಯಾರಿಸಬಹುದು. ಈ ಕಾರ್ಯದಲ್ಲಿ ಸಿಗುವ ಬೂದಿ ರಾಸಾಯನಿಕ ದೃಷ್ಟಿಯಿಂದ ಅತ್ಯಂತ ಅಮುಲ್ಯವಾದುದಾಗಿದೆ. ಈ ವಿದ್ಯುತ್ ಉತ್ಪಾದನೆಯನ್ನು ಸುಟ್ಟ ಭತ್ತದ ಹೊಟ್ಟಿನ ರಫ್ತಿನಿಂದ ಪಡೆಯಬಹುದೆಂಬ ಸಲಹೆಗಳಿವೆ. ಎಲ್ಲೆಲ್ಲಿ ಭತ್ತದ ಗಿರಣಿಗಳಿವೆಯೋ ಅಂಥಹ ಸ್ವಳಗಳಲ್ಲಿ ರೈತರೆ ಸಹಕಾರಿ ತತ್ವದ ಮೇಲೆ ಸೇರಿಕೊಂಡು ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಊರಿಗೆ ವಿದ್ಯುತ್‌ನ್ನು ಪಡೆಯಬಹುದಾಗಿದೆ.

ಈ ಭತ್ತದ ಹೊಟ್ಟಿನಿಂದ (ಒಂದು ಮೆಗಾವ್ಯಾಟ್‌ನಿಂದ) ತಯಾರಾದ ವಿದ್ಯುತ್ ಉತ್ಪಾದನೆಯು 87,000ರಷ್ಟು, ಜನರಿಗೆ ಸಾಕಾಗುತ್ತದೆ. ಸರಾಸರಿ ಒಂದು ಹಳ್ಳಿಯಲ್ಲಿ ಎರಡು ಸಾವಿರ ಜನರಿದ್ದರೆ ಒಂದು ವಿದ್ಯುತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದರೆ 40ಕ್ಕೂ ಹೆಚ್ಚು ಹಳ್ಳಿಗಳಿಗೆ ಬೆಳಕು ನೀಡಬಹುದು. ಇಂಥಹ ಒಂದು ಕಿರು ಘಟಕಕ್ಕೆ ನಾಲ್ಕುವರೆ ಸಾವಿರ ಟನ್‌ಗಳಷ್ಟು ಸಿಪ್ಪೆಯ ಅಗತ್ಯವಾದರೆ ಇದರಿಂದ 900 ಟನ್‌ಗಳಿಗೂ ಹೆಚ್ಚು ಬೂದಿಯನ್ನು ಪಡೆಯಬಹುದು. ಇದರ ರಫ್ತಿನಿಂದ 20 ಲಕ್ಷ ರೂಪಾಯಿಗಳ ಆದಾಯವಿದೆ. ಈ ಆದಾಯದಿಂದ ಈ ಘಟಕಕ್ಕೆ ಸಂಬಂಧಿಸಿದ ಖರ್ಚನ್ನು ಸರಿದೂಗಿಸಬಹುದು. ಈ ತಂತ್ರ ವ್ಯಾಪಕ ಪ್ರಚಾರ ಪಡೆಯಬೇಕಿದೆ.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...