Home / ಲೇಖನ / ವಿಜ್ಞಾನ / ಬರಲಿವೆ ಚಾಲಕನಿಲ್ಲದ ವಿಮಾನಗಳು !?

ಬರಲಿವೆ ಚಾಲಕನಿಲ್ಲದ ವಿಮಾನಗಳು !?

ಚಾಲಕ ರಹಿತ ವಿಮಾನಗಳು ಎಂದರೆ ಕೀಲಿಲ್ಲದೆ ಬಂಡಿ ಓಡಿಸಿದಂತೆ ಎಂಬ ಮಾತಿತ್ತು 2010ನೇ ಇಸ್ವಿಯ ಹೊತ್ತಿಗೆ ಬೋಯಿಂಗ್ ಲಾಕ್ ಹೀಡ್ ಮಾರ್ಟಿನ್ ‘ಡಾರ್ಕ್‌ಸ್ಟಾರ್’ ನಂತಹ ಸ್ವಯಂಚಾಲಿತ ವಿಮಾನಗಳು ತಯಾರಾಗುವ  ಸಾಧ್ಯತೆಗಳಿವೆ. ಮತ್ತಿನ್ನಿಷ್ಟು ವರ್ಷಗಳು ಕಳೆದರೆ ರೋಬಟ್ ಹೆಲಿಕ್ಯಾಪ್ಪರ್‌ಗಳು ಸೈನಿಕರನ್ನು ಯುದ್ಧಕ್ಕೆ ಬಿಡಬಹುದು. ಮನುಷ್ಯರ ಮನಸ್ತತ್ವವನ್ನು ಆಧರಿಸಿ ಈ ಚಾಲಕ ರಹಿತ ವಿಮಾನಗಳು ತಯಾರಾಗಲಿವೆ. 21ನೇ ಶತಮಾನದಲ್ಲಿ ಇಂತಹ ವಿಮಾನಗಳು ಚಾಲಕ ರಹಿತ ವಿಮಾನಗಳೂ ಸಹ ಹಳೆಯದಾಗ ಬಹುದು. ಒಬ್ಬ ಪೈಲೆಟ್, ಮತ್ತು 7 ಜನ  ಪ್ರಯಾಣಿಕರೊಂದಿಗೆ ಗಂಟೆಗೆ 220 ಕಿ.ಮೀ. ವೇಗದಲ್ಲಿ ಚಲಿಸುವ ಮಿನಿವ್ಯಾನ್‌ನಂತಹ ವಿಮಾನಗಳು ಪ್ರಪಂಚದ ಎಲ್ಲೆಡೆ ಸಂಚರಿಸುತ್ತವೆ. 21ನೇ ಶತಮಾನದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಸಂಶೋಧನೆಗಳನ್ನು ಮಾಡುವ ಖಾಸಗಿ ಸಂಸ್ಥೆಗಳನ್ನು ಗುರುತಿಸಲು ನಾಸಾ ಸಂಸ್ಥೆಯು ಕೈಕೊಂಡ ಯೋಜನೆಯಾದ Advanced General Eviation Transport Experiment (ಆಗೇಟ್) ಎನ್ನುವ ಪದವನ್ನು ತಮ್ಮ ಸಂಸ್ಥೆಯ ನಿಕ್‌ನೇಮ್ ಆಗಿ ಮಾಡಿಕೊಳ್ಳಲು ಸಂಸ್ಥೆಗಳು ಆತುರದಿಂದ ಕಾಯುತ್ತವೆ. ಕಾಕ್‌ಪಿಟ್ ಪ್ರವೇಶದ್ವಾರದ ಮೇಲೆ ಹೈವೆ ಇನ್ ದಿ ಸ್ಕೈ (Highway in the sky) ಎನ್ನುವ ಬೋರ್ಡು, ಸುತ್ತಲಿನ ದೃಶ್ಯಗಳು ಕಾಣುವಂತೆ ತಲೆಯ ಮೇಲ್ಭಾಗದಲ್ಲಿ ಸುತ್ತಲೂ ಗಾಜಿನ ಆವರಣ, ವಿಮಾನವನ್ನು ಸರಿಯಾಗಿ ನಡೆಸಲು ಡಿಜಿಟಲ್ ವೇಟ್‌ಲಿಂಕ್ಸ್ (Digital Weight Links) ಸಹಕರಿಸುವಿಕೆ, ವಿಮಾನ ಸರಿಯಾದ ಎತ್ತರ ಮತ್ತು ದಿಕ್ಕಿನಲ್ಲಿ ಚಲಿಸಲು ಸೂಕ್ಷ್ಮವಾದ ಕಂಟ್ರೋಲ್ ಪ್ಯಾನಲ್(Control Panel)ಗಳು, ಭವಿಷ್ಯದ ಆಗೆಟ್  Projectಗಳೊಂದಿಗೆ ಹಗುರವಾದ ದೃಢವಾದ ಸಾಮರ್ಧ್ಯವನ್ನು ಹೊಂದಿರುವ ಇಂತಹ ಮಾದರಿಯ ಚಾಲಕನಿಲ್ಲದ ವಿಮಾನಗಳು ತಯಾರಾಗುವ ನಿರೀಕ್ಷೆ ಇದೆ, ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...