ಬರಲಿವೆ ಚಾಲಕನಿಲ್ಲದ ವಿಮಾನಗಳು !?

ಚಾಲಕ ರಹಿತ ವಿಮಾನಗಳು ಎಂದರೆ ಕೀಲಿಲ್ಲದೆ ಬಂಡಿ ಓಡಿಸಿದಂತೆ ಎಂಬ ಮಾತಿತ್ತು 2010ನೇ ಇಸ್ವಿಯ ಹೊತ್ತಿಗೆ ಬೋಯಿಂಗ್ ಲಾಕ್ ಹೀಡ್ ಮಾರ್ಟಿನ್ ‘ಡಾರ್ಕ್‌ಸ್ಟಾರ್’ ನಂತಹ ಸ್ವಯಂಚಾಲಿತ ವಿಮಾನಗಳು ತಯಾರಾಗುವ  ಸಾಧ್ಯತೆಗಳಿವೆ. ಮತ್ತಿನ್ನಿಷ್ಟು ವರ್ಷಗಳು ಕಳೆದರೆ ರೋಬಟ್ ಹೆಲಿಕ್ಯಾಪ್ಪರ್‌ಗಳು ಸೈನಿಕರನ್ನು ಯುದ್ಧಕ್ಕೆ ಬಿಡಬಹುದು. ಮನುಷ್ಯರ ಮನಸ್ತತ್ವವನ್ನು ಆಧರಿಸಿ ಈ ಚಾಲಕ ರಹಿತ ವಿಮಾನಗಳು ತಯಾರಾಗಲಿವೆ. 21ನೇ ಶತಮಾನದಲ್ಲಿ ಇಂತಹ ವಿಮಾನಗಳು ಚಾಲಕ ರಹಿತ ವಿಮಾನಗಳೂ ಸಹ ಹಳೆಯದಾಗ ಬಹುದು. ಒಬ್ಬ ಪೈಲೆಟ್, ಮತ್ತು 7 ಜನ  ಪ್ರಯಾಣಿಕರೊಂದಿಗೆ ಗಂಟೆಗೆ 220 ಕಿ.ಮೀ. ವೇಗದಲ್ಲಿ ಚಲಿಸುವ ಮಿನಿವ್ಯಾನ್‌ನಂತಹ ವಿಮಾನಗಳು ಪ್ರಪಂಚದ ಎಲ್ಲೆಡೆ ಸಂಚರಿಸುತ್ತವೆ. 21ನೇ ಶತಮಾನದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಸಂಶೋಧನೆಗಳನ್ನು ಮಾಡುವ ಖಾಸಗಿ ಸಂಸ್ಥೆಗಳನ್ನು ಗುರುತಿಸಲು ನಾಸಾ ಸಂಸ್ಥೆಯು ಕೈಕೊಂಡ ಯೋಜನೆಯಾದ Advanced General Eviation Transport Experiment (ಆಗೇಟ್) ಎನ್ನುವ ಪದವನ್ನು ತಮ್ಮ ಸಂಸ್ಥೆಯ ನಿಕ್‌ನೇಮ್ ಆಗಿ ಮಾಡಿಕೊಳ್ಳಲು ಸಂಸ್ಥೆಗಳು ಆತುರದಿಂದ ಕಾಯುತ್ತವೆ. ಕಾಕ್‌ಪಿಟ್ ಪ್ರವೇಶದ್ವಾರದ ಮೇಲೆ ಹೈವೆ ಇನ್ ದಿ ಸ್ಕೈ (Highway in the sky) ಎನ್ನುವ ಬೋರ್ಡು, ಸುತ್ತಲಿನ ದೃಶ್ಯಗಳು ಕಾಣುವಂತೆ ತಲೆಯ ಮೇಲ್ಭಾಗದಲ್ಲಿ ಸುತ್ತಲೂ ಗಾಜಿನ ಆವರಣ, ವಿಮಾನವನ್ನು ಸರಿಯಾಗಿ ನಡೆಸಲು ಡಿಜಿಟಲ್ ವೇಟ್‌ಲಿಂಕ್ಸ್ (Digital Weight Links) ಸಹಕರಿಸುವಿಕೆ, ವಿಮಾನ ಸರಿಯಾದ ಎತ್ತರ ಮತ್ತು ದಿಕ್ಕಿನಲ್ಲಿ ಚಲಿಸಲು ಸೂಕ್ಷ್ಮವಾದ ಕಂಟ್ರೋಲ್ ಪ್ಯಾನಲ್(Control Panel)ಗಳು, ಭವಿಷ್ಯದ ಆಗೆಟ್  Projectಗಳೊಂದಿಗೆ ಹಗುರವಾದ ದೃಢವಾದ ಸಾಮರ್ಧ್ಯವನ್ನು ಹೊಂದಿರುವ ಇಂತಹ ಮಾದರಿಯ ಚಾಲಕನಿಲ್ಲದ ವಿಮಾನಗಳು ತಯಾರಾಗುವ ನಿರೀಕ್ಷೆ ಇದೆ, ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿಗೆ ಕರೆದೊಯ್ಯುವೆ ನೀ?
Next post ಸ್ಮರಣೆಯೊಂದೇ ಸಾಲದೆ ?

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…