ಮರಣಂ ಶರಣಂ

ದಿನಪತ್ರಿಕೆಯ ಪುಟವ ತಿರುಗಿಸಲು
ಕಾಣುತಿಹವು ಸಾವು
ರೈತರ ಆತ್ಮಹತ್ಯೆ ಸಾವು
ಅಲ್ಲಿ ಸಾಯುವನು ಇಲ್ಲಿ ಸಾಯುವನು
ದಿನವು ಸಾಯುವರು ಮಣ್ಣಿನ ಮಕ್ಕಳು
ದಿನವು ಸಾಯುತಿದೆ ದೇಶದೊಕ್ಕಲು
ಬೆನ್ನೆಲುಬು ಬಾನು ಬಿಕ್ಕಲು
ಬೀಜ ಬಂಜೆಯಾಯಿತೋ ರೋಗ ಮುತ್ತಿತೋ
ಮಳೆಯು ಬಾರದೆ ಒಣಗಿ ಹೋಯಿತೋ
ಅಂತೂ ಇಂತೂ ನೆಲದ ಕಂದರಿಗೆ ಉಳಿವಿಲ್ಲವಾಯಿತೋ
ಸಣ್ಣ ಮಕ್ಕಳಿಗೆ ಕೂಳು ಇಲ್ಲವೋ
ಮನೆಯಲೆಲ್ಲರಿಗೆ ಕಾಳು ಇಲ್ಲವೋ
ಹರಕು ಬಟ್ಟೆಗಳೊ ಮುರುಕು ಜೋಪಡಿಯೋ
ಹೇಗೋ ಏನೊ ರೂಢಿಯಾಯಿತೊ
ಸಾಲ ಶೂಲವದು ಬಂದು ಇರಿವಾಗ
ಹೇಗಿದ್ದರೇನು ಸತ್ತರೇನು
ಸರಿ ಮರಣಂ ಶರಣಂ ಗಚ್ಛಾಮಿ

ಕೇಳದಾಗಿದೆ ಕಿವುಡು ಸರಕಾರ
ಕಾಣದಾಗಿದೆ ಕುರುಡು ದರಬಾರ
ಕೋಟಿಗಟ್ಟಲೆ ಬರ ಪರಿಹಾರ
ಹರಿದು ಬರುತಿದೆ ಯಾರ ಬಾಯಿಗೊ ಯಾರ ಜೇಬಿಗೊ
ಎಲ್ಲಿ ಹೋಗುವುದೊ ಯಾರು ಬಲ್ಲರು?
ಬೆವರ ಹನಿ ಹನಿ ಆವಿಯಾಯಿತು
ಸಾಯುವ ಜೀವಕೆ ಬಾಯಿಯೆ ಇಲ್ಲ
ಅಳುವ ಬಾಯಿಗೆ ದನಿಯೆ ಇಲ್ಲ
ರಾಜಧಾನಿಯಲ್ಲಿ ಹವಾನಿಯಂತ್ರದಿ
ನಿದ್ದೆ ಹೋಗಿಹರು ಮಂತ್ರಿ ದಾನವರು
ದಿನವೂ ಸಾರುತಿದೆ ಪತ್ರಿಕೆ
ರೈತನ ಸಾವು, ಸಾಯುವರು ಸಾಯುವರು

ನೆಲದ ನಿಟ್ಟುಸಿರು ಭೋರೆಂಬ ಗಾಳಿ
ಬರಿದೆ ಬೀಸೇ ಬೀಸುತಿರುವುದು
ಮೋಡದೊಡಲು ಗಡಬಡಿಸುತಿದೆ
ಒಂದೆರಡು ಹನಿ ಉದುರಿಸುತಿದೆ
ಅಶ್ರುತರ್ಪಣ ನಿಷ್ಕಾರಣ |
ಸುದ್ದಿ ಸಾರುವುದು ಪತ್ರಿಕೆ
ಮರುದಿನ ರದ್ದಿ ಅದೇ ಹಳೆ ಸುದ್ದಿ
ದಿನವೂ ಸಾಯುವವರಿಗೆ ಅಳುವವರು ಯಾರು
ಯಾರು ಕೆಡಿಸಿಕೊಳ್ಳುತ್ತಾರೆ ನಿದ್ದಿ
ಮರಣಂ ಶರಣಂ ಗಚ್ಛಾಮಿ

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಫ್ರಿಕಾ
Next post ಜೀವನೋದ್ದೇಶ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys