ಮರಣಂ ಶರಣಂ

ದಿನಪತ್ರಿಕೆಯ ಪುಟವ ತಿರುಗಿಸಲು
ಕಾಣುತಿಹವು ಸಾವು
ರೈತರ ಆತ್ಮಹತ್ಯೆ ಸಾವು
ಅಲ್ಲಿ ಸಾಯುವನು ಇಲ್ಲಿ ಸಾಯುವನು
ದಿನವು ಸಾಯುವರು ಮಣ್ಣಿನ ಮಕ್ಕಳು
ದಿನವು ಸಾಯುತಿದೆ ದೇಶದೊಕ್ಕಲು
ಬೆನ್ನೆಲುಬು ಬಾನು ಬಿಕ್ಕಲು
ಬೀಜ ಬಂಜೆಯಾಯಿತೋ ರೋಗ ಮುತ್ತಿತೋ
ಮಳೆಯು ಬಾರದೆ ಒಣಗಿ ಹೋಯಿತೋ
ಅಂತೂ ಇಂತೂ ನೆಲದ ಕಂದರಿಗೆ ಉಳಿವಿಲ್ಲವಾಯಿತೋ
ಸಣ್ಣ ಮಕ್ಕಳಿಗೆ ಕೂಳು ಇಲ್ಲವೋ
ಮನೆಯಲೆಲ್ಲರಿಗೆ ಕಾಳು ಇಲ್ಲವೋ
ಹರಕು ಬಟ್ಟೆಗಳೊ ಮುರುಕು ಜೋಪಡಿಯೋ
ಹೇಗೋ ಏನೊ ರೂಢಿಯಾಯಿತೊ
ಸಾಲ ಶೂಲವದು ಬಂದು ಇರಿವಾಗ
ಹೇಗಿದ್ದರೇನು ಸತ್ತರೇನು
ಸರಿ ಮರಣಂ ಶರಣಂ ಗಚ್ಛಾಮಿ

ಕೇಳದಾಗಿದೆ ಕಿವುಡು ಸರಕಾರ
ಕಾಣದಾಗಿದೆ ಕುರುಡು ದರಬಾರ
ಕೋಟಿಗಟ್ಟಲೆ ಬರ ಪರಿಹಾರ
ಹರಿದು ಬರುತಿದೆ ಯಾರ ಬಾಯಿಗೊ ಯಾರ ಜೇಬಿಗೊ
ಎಲ್ಲಿ ಹೋಗುವುದೊ ಯಾರು ಬಲ್ಲರು?
ಬೆವರ ಹನಿ ಹನಿ ಆವಿಯಾಯಿತು
ಸಾಯುವ ಜೀವಕೆ ಬಾಯಿಯೆ ಇಲ್ಲ
ಅಳುವ ಬಾಯಿಗೆ ದನಿಯೆ ಇಲ್ಲ
ರಾಜಧಾನಿಯಲ್ಲಿ ಹವಾನಿಯಂತ್ರದಿ
ನಿದ್ದೆ ಹೋಗಿಹರು ಮಂತ್ರಿ ದಾನವರು
ದಿನವೂ ಸಾರುತಿದೆ ಪತ್ರಿಕೆ
ರೈತನ ಸಾವು, ಸಾಯುವರು ಸಾಯುವರು

ನೆಲದ ನಿಟ್ಟುಸಿರು ಭೋರೆಂಬ ಗಾಳಿ
ಬರಿದೆ ಬೀಸೇ ಬೀಸುತಿರುವುದು
ಮೋಡದೊಡಲು ಗಡಬಡಿಸುತಿದೆ
ಒಂದೆರಡು ಹನಿ ಉದುರಿಸುತಿದೆ
ಅಶ್ರುತರ್ಪಣ ನಿಷ್ಕಾರಣ |
ಸುದ್ದಿ ಸಾರುವುದು ಪತ್ರಿಕೆ
ಮರುದಿನ ರದ್ದಿ ಅದೇ ಹಳೆ ಸುದ್ದಿ
ದಿನವೂ ಸಾಯುವವರಿಗೆ ಅಳುವವರು ಯಾರು
ಯಾರು ಕೆಡಿಸಿಕೊಳ್ಳುತ್ತಾರೆ ನಿದ್ದಿ
ಮರಣಂ ಶರಣಂ ಗಚ್ಛಾಮಿ

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಫ್ರಿಕಾ
Next post ಜೀವನೋದ್ದೇಶ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…