Home / ಕವನ / ಕವಿತೆ / ನನ್ನ ಕನ್ನಡ

ನನ್ನ ಕನ್ನಡ

ನನ್ನ ಕನ್ನಡವೆಂತು ಬಾಳಿ ಬದುಕೀತು!
ಉನ್ನತದ ಶಿಖರವನ್ನೇರಿ ಮೆರೆದೀತು!

ನುಡಿಯೊಂದೆ ನಾಡೊಂದೆ ಜನವೆಲ್ಲ ಒಂದೆ
ನಡೆಯೊ೦ದೆ ಗುಡಿಯೊಂದೆ ಮನದಾಳ ಒಂದೆ
ಗುರಿಯೊಂದೆ ಸಿರಿಯೊಂದೆ ಸೌಭಾಗ್ಯ ಒಂದೆ
ಅರಿವೊಂದೆ ಇರುವೊಂದೆ ಜೀವಿತವದೊಂದೆ
ನೆಲವೊಂದೆ ಕುಲವೊಂದೆ ದೈವತವದೊಂದೆ
ಛಲವೊಂದೆ ಬಲವೊಂದೆ ಭವಿತವ್ಯವೊಂದೆ

ಈ ಕನಸು ಮೈಗೊಂಡು ಬರುವ ದಿನವೆಂದು!
ಈ ನನಸು ಫಲಿಸಿ ಬಹ ಮಾಗಿ ದಿನವೆಂದು!

ಕನ್ನಡವ ಎತ್ತಿ ಹದಗೊಳಿಪ ಜನ ಬೇಕು
ಕನ್ನಡವ ಬಿತ್ತಿ ಬೆಳೆ ತರುವ ಜನ ಬೇಕು
ಕನ್ನಡದ ಮಕ್ಕಳಿಗೆ ಕನ್ನಡವೆ ಊಟ
ಕನ್ನಡವೆ ಆಟ, ಕನ್ನಡವೆ ಸಿರಿನೋಟ

ಹೊಲದಿ ದುಡಿವವನಿರಲಿ ಕೂಲಿ ಆಳಾಗಿರಲಿ
ಜಲದ ಒಡಲನು ಅಗಿವ ಅಂಬಿಗನು ಇರಲಿ
ಸೌದೆ ಸೀಳುವನಿರಲಿ ಸೌದೆ ಮಾರುವನಿರಲಿ
ಕೌದೆ ಹೊಲಿಯುವನಿರಲಿ-ಹೊದೆವನಿರಲಿ

ಕಲ್ಲು ಕಡಿವವನಿರಲಿ ಹುಲ್ಲು ಕೊಯ್ವವನಿರಲಿ
ಬೆಲ್ಲ ಕಡಲೆಯ ಮಾರಿ ಜೀವಿಸುವನಿರಲಿ
ಬಲ್ಲ ಪ೦ಡಿತನಿರಲಿ ಮತ್ತೆ ಪಾಮರನಿರಲಿ
ಎಲ್ಲರಲಿ ಕನ್ನಡವೆ ಚಿಮ್ಮುತಿರಲಿ

ನಮಗಿರುವ ಭವಿತವ್ಯ ಕನ್ನಡಕೆ ಇಹುದು
ಸಮವದುವೆ ಅಷ್ಟಾ೦ಗ ಸಿದ್ಧಿಯಹುದು
ತಮತಮಗೆ ಕಂದಿರುವ ಪೌರುಷವು ಬಹುದು
ಅಮರತೆಯ ಬೀರಿ ಚಿರಕಾಲ ಬಾಳುವುದು

ವ್ಯವಹಾರ ವಾಣಿಜ್ಯವಿದರ ಅಡಿಗಲ್ಲು
ವ್ಯವಸಾಯದಾಕಳಿಗೆ ಹಾಕಿರುವ ಹುಲ್ಲು
ವ್ಯವಧಾನ ಕನ್ನಡದ ಅವಧಾನಿಗಳ ಸೊಲ್ಲು
ವ್ಯವಹರಿಸಿ ಉಲಿಯುವದು ನಮ್ಮ ಕಿವಿಯಲ್ಲು

ಕೊರತೆ ಎಂಬುದು ಇಲ್ಲ ನಮ್ಮ ಕನ್ನಡಕೆ
ಒರತೆಯಾಗಿಹುದದುವೆ ನಮ್ಮ ಜೀವಿತಕೆ
ಅರಿತಷ್ಟು ಆಳವಿಹ ಇಂಗಿತವು ಜಗಕೆ
ಸುರಿಸಿ ಸುಜ್ಞಾನವನು ತರುವ ಬೆಳಕೆ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...